ಆ್ಯಪ್ನಗರ

ಕರ್ಕಶ ಹಾರನ್‌: 80ಕ್ಕೂ ಹೆಚ್ಚು ವಾಹನಗಳಿಗೆ ದಂಡ

ನಗರದಲ್ಲಿ ಕರ್ಕಶ ಹಾರನ್‌ ಹಾಕುತ್ತಾ ಇತರರಿಗೆ ತೊಂದರೆ ಕೊಡುತ್ತಿದ್ದ ವಾಹನಗಳ ಮಾಲೀಕರಿಗೆ ಮಂಗಳವಾರ ದಕ್ಷಿಣ ಸಂಚಾರಿ ಠಾಣೆ ಪಿಎಸ್‌ಐ ಶಿವರುದ್ರಪ್ಪ ಮೇಟಿ 80ಕ್ಕೂ ಹೆಚ್ಚು ವಾಹನಗಳ ಧ್ವನಿ ವರ್ಧಕ ಸಾಮಗ್ರಿ ಕಿತ್ತು, ದಂಡ ಹಾಕಿದ್ದಾರೆ.

ವಿಕ ಸುದ್ದಿಲೋಕ 7 Feb 2018, 3:34 pm
ದಾವಣಗೆರೆ: ನಗರದಲ್ಲಿ ಕರ್ಕಶ ಹಾರನ್‌ ಹಾಕುತ್ತಾ ಇತರರಿಗೆ ತೊಂದರೆ ಕೊಡುತ್ತಿದ್ದ ವಾಹನಗಳ ಮಾಲೀಕರಿಗೆ ಮಂಗಳವಾರ ದಕ್ಷಿಣ ಸಂಚಾರಿ ಠಾಣೆ ಪಿಎಸ್‌ಐ ಶಿವರುದ್ರಪ್ಪ ಮೇಟಿ 80ಕ್ಕೂ ಹೆಚ್ಚು ವಾಹನಗಳ ಧ್ವನಿ ವರ್ಧಕ ಸಾಮಗ್ರಿ ಕಿತ್ತು, ದಂಡ ಹಾಕಿದ್ದಾರೆ.
Vijaya Karnataka Web  80
ಕರ್ಕಶ ಹಾರನ್‌: 80ಕ್ಕೂ ಹೆಚ್ಚು ವಾಹನಗಳಿಗೆ ದಂಡ


ಡಿಸಿಎಂ ಲೇ ಔಟ್‌, ಹಳೆ, ಹೊಸ ಬಸ್‌ ನಿಲ್ದಾಣ, ಎಂಸಿಸಿ ಬಿ ಬ್ಲಾಕ್‌, ವಿದ್ಯಾನಗರ, ಐಟಿಐ ಗೇಟ್‌ ಸೇರಿದಂತೆ ಇತರೆಡೆ ಸವಾರರು ಜೋರಾಗಿ ಹಾರನ್‌ ಹಾಕಿಕೊಂಡು ಓಡಾಡುತ್ತಿದ್ದರು. ಹಿರಿಯ ನಾಗರಿಕರು ಸೇರಿದಂತೆ ಹಲವರು ಎಸ್ಪಿ ಭೀಮಾಶಂಕರ್‌ ಗುಳೇದ್‌ಗೆ ಈ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಯಿತು.

40ಕ್ಕೂ ಹೆಚ್ಚು ಬಸ್‌, 30 ಆಟೋ, 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ 100 ರೂ.ಗಳಂತೆ ದಂಡ ಹಾಕಿ, ಧ್ವನಿ ವರ್ಧಕ ಕಿತ್ತು ಹಾಕಲಾಯಿತು ಎಂದು ಪಿಎಸ್‌ಐ ಮೇಟಿ ವಿಕಗೆ ತಿಳಿಸಿದ್ದಾರೆ.

ಎಸ್ಪಿ ಡಾ.ಭೀಮಾಶಂಕರ ಎಸ್‌. ಗುಳೇದ, ಎಎಸ್ಪಿ ಟಿ.ಜೆ. ಉದೇಶ್‌, ನಗರ ಉಪವಿಭಾಗದ ಪೊಲೀಸ್‌ ಉಪಾಧೀಕ್ಷ ಕ ಎಂ.ಬಾಬು ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಎಸ್‌ಐ ರಮೇಶ್‌, ಶಿವಣ್ಣ, ಶಂಕುತಲಾ, ಆಂಜಿನಪ್ಪ, ಜಗದೀಶ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ