ಆ್ಯಪ್ನಗರ

ಬಡವರಿಗಾಗಿ 10 ಲಕ್ಷ ಮನೆ, ನಿವೇಶನಕ್ಕಾಗಿ 4,535 ಎಕರೆ ಭೂಮಿ ಹಸ್ತಾಂತರ: ವಿ. ಸೋಮಣ್ಣ

ಬಿಜೆಪಿ ಸರಕಾರದಿಂದ ರಾಜ್ಯದ ಬಡವರಿಗಾಗಿ 10 ಲಕ್ಷ ಮನೆಗಳನ್ನು ನಿರ್ಮಾಣ ಗುರಿಯನ್ನು ಹೊಂದಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಈಗಾಗಲೇ ಸುಮಾರು 4535 ಎಕರೆ ಜಮೀನನ್ನು ನಿವೇಶನಕ್ಕಾಗಿ ರಾಜೀವಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರ ಮಾಡಲಾಗಿದೆ.

Vijaya Karnataka Web 15 Jun 2020, 7:59 pm
ಹರಿಹರ: ಬಿಜೆಪಿ ಸರಕಾರದಿಂದ ರಾಜ್ಯದಲ್ಲಿನ ಬಡವರಿಗಾಗಿ 10 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
Vijaya Karnataka Web v somanna


ನಗರದ ಶೇರಾಪುರದಲ್ಲಿ ಕೆಎಚ್‌ಬಿಯಿಂದ ಅಭಿವೃದ್ಧಿ ಪಡಿಸಲು ನಿಗದಿ ಪಡಿಸಿರುವ ಜಮೀನಿಗೆ ಸೋಮವಾರ ಭೇಟಿ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬಂದ ನಂತರ 10 ಲಕ್ಷ ಮನೆಗಳನ್ನು ಮುಂದಿನ ಒಂದುವರೆ ವರ್ಷದಲ್ಲಿಯೆ ಪೂರ್ಣಗೊಳಿಸಿ ಫಲಾನುಭವಿಗಳಿಗೆ ನೀಡಲಾಗುವುದು. ಸಿಎಂ ಆದೇಶದಂತೆ ರಾಜ್ಯದಲ್ಲಿಎಲ್ಲಾ ಬಡವರಿಗೆ ಜಾತಿ ಬೇಧಭಾವ ಮಾಡದೆ ಸರ್ವರಿಗೂ ಸೂರನ್ನು ನೀಡುತ್ತೇವೆ. ಈಗಾಗಲೇ ಸುಮಾರು 4535 ಎಕರೆ ನಿವೇಶನಕ್ಕಾಗಿ ಜಮೀನನ್ನು ರಾಜೀವಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರ ಮಾಡಿಸಿಕೊಂಡಿದ್ದು, ಈ ಜಮೀನುಗಳಲ್ಲಿ 1.25 ಲಕ್ಷ ನಿವೇಶನಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ನೀಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಶಾಸಕರ ಮನೆ ಮದುವೆಯಲ್ಲೇ ಸಾಮಾಜಿಕ ಅಂತರ ಇಲ್ಲ: ಬಸವರಾಜ್‌ ಬೊಮ್ಮಾಯಿ

1300 ಕೋಟಿ ಬಿಡುಗಡೆ: ಹಿಂದಿನ ಸರಕಾರ 19 ಲಕ್ಷ ಮನೆಗಳನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದು ಬಿಟ್ಟರೆ ಯೋಜನೆಗೆ ಬೇಕಾದ 28 ಸಾವಿರ ಕೋಟಿ ಹಣ ನೀಡಲಿಲ್ಲ. ನಮ್ಮ ಸರಕಾರ ಬಂದ ಕೇವಲ 9 ತಿಂಗಳಲ್ಲಿ ಪ್ರಾಯೋಗಿಕವಾಗಿ ರಾಜ್ಯದಲ್ಲಿ 5.40 ಲಕ್ಷ ಮನೆ ನಿರ್ಮಾಣಕ್ಕೆ ಬೇಕಾಗುವ 8000 ಕೋಟಿ ರೂ.ಗೆ ಮೊದಲ ಕಂತಾಗಿ 1300 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು.

ಕಳೆದ ವಾರ 1.27 ಲಕ್ಷ ಮನೆಗಳಿಗೆ 300 ಕೋಟಿ ಹಣವನ್ನು ಹಂತ ಹಂತವಾಗಿ ಸರಕಾರ ಬಿಡುಗಡೆ ಮಾಡುತ್ತಿದೆ. ಫಲಾನುಭವಿಗಳು ಜಿಪಿಎಸ್‌ ಆಗಿದ್ದರೆ ಜಿಪಂ ಸಿಇಒ ಪರಿಶೀಲಿಸಿ ಅರ್ಹರೆಂದು ಗುರುತಿಸಿದವರಿಗೆ ತಕ್ಷಣ ಅವರ ಬ್ಯಾಂಕ್‌ ಖಾತೆಗೆ ಹಣ ಸಂದಾಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿಶಾಸಕ ಎಸ್‌.ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್‌, ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಎಂ. ವೀರೇಶ್‌, ತಹಸೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್‌.ಲಕ್ಷಿತ್ರ್ಮೕ, ಎಇಇ ಬಿರಾದರ್‌, ಕೆಎಚ್‌ಬಿ ಹಾಗೂ ರಾಜೀವ್‌ ಗಾಂಧಿ ವಸತಿ ಯೋಜನೆಯ ಇಲಾಖಾಧಿಕಾರಿಗಳು ಇದ್ದರು.

ಈಗ ಆನ್‌ಲೈನ್‌ನಲ್ಲೇ ಎಸ್‌ಬಿಐ ಖಾತೆ ತೆರೆಯಬಹುದು! ಹೇಗೆ? ಇಲ್ಲಿದೆ ಮಾಹಿತಿ!

ಶೇರಾಪುರ ಕೆಎಚ್‌ಬಿ 900 ನಿವೇಶನ
ಶೇರಾಪುರ ಕೆಎಚ್‌ಬಿಯಲ್ಲಿಸೈಟ್‌ ಪಡೆಯಲು ಸುಮಾರು 35,000 ಸಾವಿರ ಅರ್ಜಿಗಳು ಬಂದಿದ್ದು, ಬೇಡಿಕೆ ಬೆಟ್ಟದಷ್ಟಿದೆ. ಆದರೆ ಈಗ ಉದ್ದೇಶಿತ 54 ಎಕರೆ ಜಮೀನಿನಲ್ಲಿಕೇವಲ 800 ರಿಂದ 900 ನಿವೇಶನಗಳನ್ನು ಮಾತ್ರ ಮಾಡಲು ಸಾಧ್ಯ. ಅಕ್ಕ ಪಕ್ಕದ ಜಮೀನಿನ ಮಾಲೀಕರನ್ನು ಮನವೊಲಿಸುವಂತೆ ಶಾಸಕ ಎಸ್‌.ರಾಮಪ್ಪ ಹಾಗೂ ಮಾಜಿ ಶಾಸಕ ಬಿ.ಪಿ. ಹರೀಶ್‌ ಅವರಿಗೆ ಸೂಚಿಸಿದ ಸಚಿವರು, 100 ಎಕರೆ ಜಮಿನನ್ನು ಖರೀದಿಸಲು ಇಲಾಖೆ ಸಿದ್ಧವಿದ್ದು ನಿವೇಶನಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಪರೋಟ 'ಜಿಎಸ್‌ಟಿ' ಶೇ.18ಕ್ಕೆ ಏರಿಕೆ! ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ಜಟಾಪಟಿ

ಆವಾಸ್‌ದಡಿ ಸಹಾಯಧನ
ಗ್ರಾಮೀಣ ಭಾಗದಲ್ಲಿ5.40 ಲಕ್ಷ ಮನೆ, ನಗರ ಪ್ರದೇಶದಲ್ಲಿ4.60 ಲಕ್ಷ ಮನೆಗಳಿಗೆ ಮಾತ್ರ ಹಣ ಬಿಡುಗಡೆ ಮಾಡಲು ಸರಕಾರ ಬದ್ಧವಾಗಿದೆ. ಮುಂದಿನ ಒಂದುವರೆ ವರ್ಷದಲ್ಲಿಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಸಹಾಯ ಧನವನ್ನು ನೀಡುತ್ತೇವೆ ಎಂದು ವಸತಿ ಸಚಿವರು ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ