ದಾವಣಗೆರೆ: ರಂಜಾನ್ ಹಬ್ಬಕ್ಕೆ ಬಟ್ಟೆ ಖರೀದಿಸಲು ಅನ್ಯ ಕೋಮಿನ ಜನರ ಅಂಗಡಿಗೆ ತೆರಳಿದ್ದ ಮುಸ್ಲಿಂ ಮಹಿಳೆಯನ್ನು ತಡೆಹಿಡಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಅನ್ಯ ಕೋಮಿನವರ ಅಂಗಡಿಯಲ್ಲಿ ಬಟ್ಟೆ ಖರೀದಿಸಬೇಡಿ ಎಂದು ಮುಸ್ಲಿಂ ಮಹಿಳೆಗೆ ಯುವಕರು ತಾಕೀತು ಮಾಡಿದ್ದರು. ಈ ಘಟನೆ ಸಂಬಂಧ 24 ವರ್ಷ ವಯಸ್ಸಿನ ಸೈಯದ್ ಮಹಮ್ಮದ್ ಹಾಗೂ 32 ವರ್ಷ ವಯಸ್ಸಿನ ಫಯಾಜ್ ಅಹಮದ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ನಗರದ ಅಕ್ಕಮಹಾದೇವಿ ರಸ್ತೆಯ ಜವಳಿ ಅಂಗಡಿಯೊಂದರಲ್ಲಿ ಮುಸ್ಲಿಂ ಮಹಿಳೆ ಬಟ್ಟೆ ಖರೀದಿಸಲು ತೆರಳಿದ್ದರು. ಈ ವೇಳೆ ಸ್ಥಳಕ್ಕೆ ತೆರಳಿದ್ದ ಯುವಕರ ಗುಂಪೊಂದು ಮಹಿಳೆಯನ್ನು ಬೆದರಿಸಿತ್ತು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ದಾವಣಗೆರೆಯಲ್ಲಿ ಮತಾಂಧರ ಆರ್ಭಟವೆಂದು ದೃಶ್ಯ ಸಮೇತ ಶೋಭಾ ಟ್ವೀಟ್..!
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಸಂಸದೆ ಶೋಭಾ ಕರಂದ್ಲಾಜೆ, ಈ ರೀತಿಯ ಧಾರ್ಮಿಕ ಭಾವೈಕ್ಯತೆ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಟ್ವೀಟ್ ಮಾಡಿದ್ದರು. ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕೂಡಾ ಈ ಬಗ್ಗೆ ಗರಂ ಆಗಿದ್ದರು. ಈ ಪ್ರಕರಣ, ಕೋಮು ಸಾಮರಸ್ಯ ಕದಡುವ ಪ್ರಕರಣವೆಂಬಂತೆ ಬಿಂಬಿತವಾಗಿತ್ತು.
ಕೆಂಪು, ಕಿತ್ತಳೆ, ಹಸಿರು.. ಯಾವ ವಲಯದಲ್ಲಿ ಏನುಂಟು, ಏನಿಲ್ಲ? ಕಂಟೈನ್ಮೆಂಟ್ ಝೋನ್ ಕಥೆ?
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ದಾವಣಗೆರೆ ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ. ದಾವಣಗೆರೆಯ ಮುಸ್ಲಿಂ ನಾಯಕರೂ ಕೂಡಾ ತಮ್ಮ ಸಮುದಾಯದ ಜನರಲ್ಲಿ ಈ ರೀತಿ ಕೋಮು ಭಾವನೆ ಕೆರಳಿಸುವಂಥಾ ಕೃತ್ಯಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ: ಸಡಿಲಿಕೆ ಬೆನ್ನಲ್ಲೇ, ಸಿಟಿಯಲ್ಲಿ ಗರಿಗೆದರಿದ ಜನರ ಓಡಾಟ!
ದಾವಣಗೆರೆಯಲ್ಲಿ ಮತಾಂಧರ ಆರ್ಭಟವೆಂದು ದೃಶ್ಯ ಸಮೇತ ಶೋಭಾ ಟ್ವೀಟ್..!
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಸಂಸದೆ ಶೋಭಾ ಕರಂದ್ಲಾಜೆ, ಈ ರೀತಿಯ ಧಾರ್ಮಿಕ ಭಾವೈಕ್ಯತೆ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಟ್ವೀಟ್ ಮಾಡಿದ್ದರು. ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕೂಡಾ ಈ ಬಗ್ಗೆ ಗರಂ ಆಗಿದ್ದರು. ಈ ಪ್ರಕರಣ, ಕೋಮು ಸಾಮರಸ್ಯ ಕದಡುವ ಪ್ರಕರಣವೆಂಬಂತೆ ಬಿಂಬಿತವಾಗಿತ್ತು.
ಕೆಂಪು, ಕಿತ್ತಳೆ, ಹಸಿರು.. ಯಾವ ವಲಯದಲ್ಲಿ ಏನುಂಟು, ಏನಿಲ್ಲ? ಕಂಟೈನ್ಮೆಂಟ್ ಝೋನ್ ಕಥೆ?
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ದಾವಣಗೆರೆ ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ. ದಾವಣಗೆರೆಯ ಮುಸ್ಲಿಂ ನಾಯಕರೂ ಕೂಡಾ ತಮ್ಮ ಸಮುದಾಯದ ಜನರಲ್ಲಿ ಈ ರೀತಿ ಕೋಮು ಭಾವನೆ ಕೆರಳಿಸುವಂಥಾ ಕೃತ್ಯಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ: ಸಡಿಲಿಕೆ ಬೆನ್ನಲ್ಲೇ, ಸಿಟಿಯಲ್ಲಿ ಗರಿಗೆದರಿದ ಜನರ ಓಡಾಟ!