ಆ್ಯಪ್ನಗರ

21ರ ಯೋಗ ದಿನಾಚರಣೆಗೆ ಭರ್ಜರಿ ಸಿದ್ಧತೆ

ಈ ವರ್ಷವೂ ಐದನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ಭರ್ಜರಿ ತಯಾರಿ ನಡೆದಿದೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜೂ.21ರಂದು ಯೋಗ ದಿನಾಚರಣೆ ನಡೆಯಲಿದ್ದು ವೈದ್ಯಶ್ರೀ ಚನ್ನಬಸವಣ್ಣನವರು ಯೋಗ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.

Vijaya Karnataka 20 Jun 2019, 5:00 am
ದಾವಣಗೆರೆ: ಈ ವರ್ಷವೂ ಐದನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ಭರ್ಜರಿ ತಯಾರಿ ನಡೆದಿದೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜೂ.21ರಂದು ಯೋಗ ದಿನಾಚರಣೆ ನಡೆಯಲಿದ್ದು ವೈದ್ಯಶ್ರೀ ಚನ್ನಬಸವಣ್ಣನವರು ಯೋಗ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.
Vijaya Karnataka Web 21
21ರ ಯೋಗ ದಿನಾಚರಣೆಗೆ ಭರ್ಜರಿ ಸಿದ್ಧತೆ


ಯೋಗ ದಿನಾಚರಣೆಗೆ ಪ್ರತಿ ವರ್ಷದಂತೆ ಈ ವರ್ಷವೂ ನಗರದ ಮೋತಿ ವೀರಪ್ಪ ಕಾಲೇಜು ಆವರಣದಲ್ಲಿ ಎಲ್ಲ ಸಿದ್ಧತೆ ನಡೆದಿದೆ. ಯೋಗ ಮಾಡಲು ಅನುಕೂಲ ಆಗುವಂತೆ ನೆಲಕ್ಕೆ ಹಸಿರು ನೆಲಹಾಸು, ವೇದಿಕೆ ತಯಾರಿ ಎಲ್ಲವೂ ನಡೆದಿದ್ದು ಬಹುತೇಕ ಮುಗಿದಿದೆ. ಅಂದು ಬೆಳಗ್ಗೆ 5ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭ ಆಗಲಿದೆ.

6 ಸಾವಿರ ಜನರ ನಿರೀಕ್ಷೆ

ಮೊದಲು ಬೆಳಗ್ಗೆ 5 ರಿಂದ 6 ಗಂಟೆವರೆಗೆ ಧ್ಯಾನ ನಡೆಯಲಿದೆ. ನಂತರ 6 ರಿಂದ 7 ರವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, 7 ರಿಂದ 7.45 ರವರೆಗೆ ಯೋಗ ನಡೆಯಲಿದೆ. ದಿನಾಚರಣೆಯಲ್ಲಿ ಸುಮಾರು 6 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌ ಉದ್ಘಾಟಿಸುವರು. ಸಂಸದ ಜಿ.ಎಂ. ಸಿದ್ದೇಶ್ವರ ಯೋಗ ನಡಿಗೆ ಉದ್ಘಾಟಿಸುವರು, ಶಾಸಕ ಎಸ್‌.ಎ. ರವೀಂದ್ರನಾಥ್‌ ಅಧ್ಯಕ್ಷತೆ ವಹಿಸಲಿದ್ದಾರೆ.

ಈಗಾಗಲೇ ಯೋಗ ದಿನದ ಹಿನ್ನೆಲೆಯಲ್ಲಿ ಪ್ರತಿದಿನ ಸೈಕಲ್‌ಜಾಥಾ, ಜಾಗೃತಿ ಜಾಥಾ, ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮ ನಡೆದಿವೆ. ಗುರುವಾರ ಆರೋಗ್ಯ ಆಹಾರ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿದೇಶಿ ಯೋಗಿಗಳ ಮಹಾಸಂಗಮ:
ಈ ಬಾರಿ ಯೋಗ ದಿನಾಚರಣೆಯಲ್ಲಿ ಪಶ್ಚಿಮ ಬಂಗಾಳದ 123 ವಯಸ್ಸಿನ ಜಗತ್ತಿನ ಹಿರಿಯ ಯೋಗಿ ಸ್ವಾಮಿ ಶಿವಾನಂದಜೀ, ಸ್ಪೇನ್‌ ದೇಶದ ಯೋಗಿನಿ ಪಾವೊಲಾ ಅಲೆಜಾಂದ್ರ ರಿಯೋಸ್‌, ಅರ್ಜೆಂಟೈನಾದ ಮಹಾಯೋಗಿ ಜಾರ್ಜ್‌ ಬಿದಾಂದೋ, ಕಬೀರ ಇಬ್ರಾಹಿಂ ಸುತಾರ್‌, ಗುರುಮಹಾಂತ ಸ್ವಾಮೀಜಿ, ರಾಮಕೃಷ್ಣೇಗೌಡರು, ಸ್ವಾಮಿ ಏಕಮ್ಮಾನಂದಜೀ, ಶ್ರೀ ಡಾ. ಬಸವಲಿಂಗ ಸ್ವಾಮೀಜಿ ಹೀಗೆ ಯೋಗಿಗಳ ಮಹಾ ಸಂಗಮ ಆಗಲಿದೆ.

ತಿಂಡಿ ವ್ಯವಸ್ಥೆ
ಯೋಗ ದಿನಾಚರಣೆಯ ತಯಾರಿ ನಡೆಯುತ್ತಿದೆ. ಯೋಗ ದಿನ ಮುಗಿದ ನಂತರ ಎಲ್ಲರಿಗೂ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಒಟ್ಟು 16 ಸಾವಿರ ಇಡ್ಲಿ ತಯಾರು ಆಗಲಿದೆ ಎಂದು ಜಿಲ್ಲಾ ಯೋಗ ಒಕ್ಕೂಟದ ವಾಸುದೇವ ರಾಯ್ಕರ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ