ಆ್ಯಪ್ನಗರ

ಸುಂಕದಕಟ್ಟೆ ಶ್ರೀ ಮಂಜುನಾಥಸ್ವಾಮಿ ಹುಂಡಿಯಲ್ಲಿ 27 ಲಕ್ಷ ರೂ. ಸಂಗ್ರಹ

ದ್ವಿತೀಯ ಧರ್ಮಸ್ಥಳ ಎಂದು ಖ್ಯಾತಿಯಾಗಿರುವ ತಾಲೂಕಿನ ಪ್ರಸಿದ್ಧ 'ಎ' ಗ್ರೇಡ್‌ ಮುಜರಾಯಿ ದೇವಸ್ಥಾನ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ ಹಾಗೂ ನರಸಿಂಹ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ಶುಕ್ರವಾರ ತಹಸೀಲ್ದಾರ್‌ ಸಮ್ಮುಖದಲ್ಲಿ ನಡೆದಿದ್ದು, ಒಟ್ಟು 27,73,465 ಲಕ್ಷ ರೂ. ಸಂಗ್ರಹವಾಗಿದೆ.

Vijaya Karnataka 27 Jul 2019, 5:00 am
ಹೊನ್ನಾಳಿ : ದ್ವಿತೀಯ ಧರ್ಮಸ್ಥಳ ಎಂದು ಖ್ಯಾತಿಯಾಗಿರುವ ತಾಲೂಕಿನ ಪ್ರಸಿದ್ಧ 'ಎ' ಗ್ರೇಡ್‌ ಮುಜರಾಯಿ ದೇವಸ್ಥಾನ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ ಹಾಗೂ ನರಸಿಂಹ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ಶುಕ್ರವಾರ ತಹಸೀಲ್ದಾರ್‌ ಸಮ್ಮುಖದಲ್ಲಿ ನಡೆದಿದ್ದು, ಒಟ್ಟು 27,73,465 ಲಕ್ಷ ರೂ. ಸಂಗ್ರಹವಾಗಿದೆ.
Vijaya Karnataka Web 27 lakhs at the toll of sri manjunathaswamy hundi at the toll collection
ಸುಂಕದಕಟ್ಟೆ ಶ್ರೀ ಮಂಜುನಾಥಸ್ವಾಮಿ ಹುಂಡಿಯಲ್ಲಿ 27 ಲಕ್ಷ ರೂ. ಸಂಗ್ರಹ


ಪ್ರತಿ 4 ತಿಂಗಳಿಗೊಮ್ಮೆ ದೇವಸ್ಥಾನದ ಸಮಿತಿಯ ಅಧ್ಯಕ್ಷ ರು, ಪದಾಧಿಕಾರಿಗಳು ಹಾಗೂ ಗ್ರಾಮಸ್ಥರ ಸಮಕ್ಷ ಮದಲ್ಲಿ ಹುಂಡಿಯ ಹಣವನ್ನು ತೆರವುಗೊಳಿಸಲಾಗುತ್ತದೆ ಎಂದು ತಹಸೀಲ್ದಾರ್‌ ತುಷಾರ್‌ ಬಿ. ಹೊಸೂರ್‌ ಹೇಳಿದರು.

ಹೀಗೆ ಭಕ್ತರು ದೇವರಿಗೆ ಸಮರ್ಪಿಸಿದ ಹುಂಡಿಯ ಹಣವನ್ನು ಹೊನ್ನಾಳಿಯ ಕೆನರಾ ಬ್ಯಾಂಕಿನ ಖಾತೆಗೆ ಜಮಾ ಮಾಡಲಾಗುವುದು. ಇದನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುವುದು ಎಂದರು.

ದೇವಸ್ಥಾನದ ಗೋಪುರ 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಅದೇ ರೀತಿಯಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಸಮುದಾಯ ಭವನ, ಊಟದ ಹಾಲ್‌ ಕೂಡ ನಿರ್ಮಾಣಗೊಳ್ಳುತ್ತಿದ್ದು, ಅಂದಾಜು 50 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ದೇವಸ್ಥಾನ ಸಮಿತಿ ಪದಾಧಿಕಾರಿಗಳು ವಿವರಿಸಿದರು.

ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್‌.ಎಚ್‌. ನರಸಪ್ಪ, ಪದಾಧಿಕಾರಿಗಳಾದ ಬಸಪ್ಪ, ಕರಿಯಪ್ಪ, ಶಿರಸ್ತೇದಾರ್‌ ರಂಗಪ್ಪ, ರೆವಿನ್ಯೂ ಇನ್ಸ್‌ಪೆಕ್ಟರ್‌ ಹಾಗೂ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ್‌, ಮುಜರಾಯಿ ಇಲಾಖೆಯ ವಿಷಯ ನಿರ್ವಾಹಕ ಮಂಜಪ್ಪ, ಗ್ರಾಮ ಲೆಕ್ಕಾಧಿಕಾರಿ ಮೌನೇಶ್‌, ಧರ್ಮಪ್ಪ, ಬಸವರಾಜಪ್ಪ, ಭರ್ಮಪ್ಪ, ಚೆಲುವರಾಜ್‌, ರಂಗಪ್ಪ, ಶ್ರೀಕಾಂತ, ಪ್ರಧಾನ ಅರ್ಚಕರಾದ ರಾಜುಸ್ವಾಮಿ, ಹೊನ್ನಾಳಿ ಕೆನರಾ ಬ್ಯಾಂಕಿನ ಸಿಬ್ಬಂದಿ ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ