ಆ್ಯಪ್ನಗರ

ಗೋದಾಮಿನಲ್ಲಿದ್ದ 3 ಲಕ್ಷ ಮೌಲ್ಯದ ಅಡಕೆ ಕಳವು

ಚನ್ನಗಿರಿ ತಾಲೂಕು ಕಾಶೀಪುರ ಕ್ಯಾಂಪ್‌ ಗ್ರಾಮದ ವಿ.ಎಸ್‌. ವೆಂಕಟರಾವ್‌ ಗೋಡೌನ್‌ನಲ್ಲಿ ಮಂಗಳವಾರ ಗೋದಾಮಿನಲ್ಲಿಟ್ಟಿದ್ದ 3.30 ಲಕ್ಷ ರೂ. ಮೌಲ್ಯದ ಸುಲಿದ ಅಡಕೆಯ 16 ಚೀಲಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.

Vijaya Karnataka 19 Jul 2018, 5:00 am
ದಾವಣಗೆರೆ: ಚನ್ನಗಿರಿ ತಾಲೂಕು ಕಾಶೀಪುರ ಕ್ಯಾಂಪ್‌ ಗ್ರಾಮದ ವಿ.ಎಸ್‌. ವೆಂಕಟರಾವ್‌ ಗೋಡೌನ್‌ನಲ್ಲಿ ಮಂಗಳವಾರ ಗೋದಾಮಿನಲ್ಲಿಟ್ಟಿದ್ದ 3.30 ಲಕ್ಷ ರೂ. ಮೌಲ್ಯದ ಸುಲಿದ ಅಡಕೆಯ 16 ಚೀಲಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
Vijaya Karnataka Web 3 lakh worth of stolen property in the godown
ಗೋದಾಮಿನಲ್ಲಿದ್ದ 3 ಲಕ್ಷ ಮೌಲ್ಯದ ಅಡಕೆ ಕಳವು


ರೈತರು ಬೆಳೆದಂತಹ ಕೃಷಿ ಉತ್ಪನ್ನಗಳ ಮೇಲೆ ರೈತರಿಗೆ ಬ್ಯಾಂಕುಗಳು ಸಾಲ ಕೊಟ್ಟು, ಹಳ್ಳಿಗಳ ಗೋದಾಮಿನಲ್ಲಿ ದಾಸ್ತಾನು ಮಾಡುವುದು ವಾಡಿಕೆ. ಅದೇ ರೀತಿ ಕಾಶೀಪುರ ಕ್ಯಾಂಪ್‌ನಲ್ಲಿ ವಿ. ಸೀತಮ್ಮ ಎಂಬುವರ ಅಡಕೆ ಚೀಲವನ್ನು ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿದ್ದು, ಖಾಸಗಿ ಕಂಪನಿ ಹಾಲೇಶ್‌ ಎಂಬುವರಿಗೆ ವಹಿಸಿ ಭದ್ರತೆ ಒದಗಿಸಿತ್ತು.

ಒಂದು ಚೀಲ 75 ಕೆಜಿ ಇದ್ದು, ಗೋದಾಮಿನ ಕಿಟಕಿಯ ಹಿಂಭಾಗದ ಕಬ್ಬಿಣದ ಸರಳುಗಳನ್ನು ಕಳ್ಳರು ಕಟ್‌ ಮಾಡಿ 16 ಚೀಲ ಅಡಕೆ ತೆಗೆದುಕೊಂಡು ಹೋಗಿದ್ದಾರೆ. ಸಂತೆಬೆನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ