ಆ್ಯಪ್ನಗರ

ವಾಲ್ಮೀಕಿ ಭವನಕ್ಕೆ 5 ಕೋಟಿ ಬಿಡುಗಡೆ

ನಗರದಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ಹಿಂದಿನ ಸಿದ್ಧರಾಮಯ್ಯ ಸರಕಾರ 5 ಕೋಟಿ ಅನುದಾನ ಒದಗಿಸಲು ನೀಡಿದ ಮಂಜೂರಾತಿಯಂತೆ ಈಗ ಹಣ ಬಿಡುಗಡೆಯಾಗಿದ್ದು ಕಾಮಗಾರಿ ಜ. 5 ರಿಂದ ಆರಂಭ ಆಗಲಿದೆ ಎಂದು ತಾಲೂಕು ನಾಯಕ ಸಂಘದ ಆಧ್ಯಕ್ಷ ಎಂ.ಬಿ. ಹಾಲಪ್ಪ ಸ್ಪಷ್ಟ ಪಡಿಸಿದ್ದಾರೆ.

Vijaya Karnataka 5 Jan 2019, 10:01 pm
ದಾವಣಗೆರೆ : ನಗರದಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ಹಿಂದಿನ ಸಿದ್ಧರಾಮಯ್ಯ ಸರಕಾರ 5 ಕೋಟಿ ಅನುದಾನ ಒದಗಿಸಲು ನೀಡಿದ ಮಂಜೂರಾತಿಯಂತೆ ಈಗ ಹಣ ಬಿಡುಗಡೆಯಾಗಿದ್ದು ಕಾಮಗಾರಿ ಜ. 5 ರಿಂದ ಆರಂಭ ಆಗಲಿದೆ ಎಂದು ತಾಲೂಕು ನಾಯಕ ಸಂಘದ ಆಧ್ಯಕ್ಷ ಎಂ.ಬಿ. ಹಾಲಪ್ಪ ಸ್ಪಷ್ಟ ಪಡಿಸಿದ್ದಾರೆ.
Vijaya Karnataka Web 5 crore released to valmiki bhavan
ವಾಲ್ಮೀಕಿ ಭವನಕ್ಕೆ 5 ಕೋಟಿ ಬಿಡುಗಡೆ


ಹಿಂದಿನ ಸರಕಾರ 4.90 ಕೋಟಿ ರೂ. ಅನುದಾನವನ್ನು ಜ. 31, 2018 ರಂದು ಡಿಸಿ ಖಾತೆಗೆ ಜಮೆ ಮಾಡಿ ಉಳಿದ 10 ಲಕ್ಷ ಅನುದಾನವನ್ನು ಸ್ಥಳೀಯವಾಗಿ ಕ್ರೂಢೀಕರಿಸಿಕೊಳ್ಳಲು ಎಸ್ಟಿ ನಿಗಮಕ್ಕೆ ಬಿಡುಗಡೆ ಮಾಡಿದ ಆದೇಶದಲ್ಲಿ ತಿಳಿಸಿತ್ತು. ಈ ಕಾಮಗಾರಿ ನಿರ್ವಹಣೆಗೆ ಟೆಂಡರ್‌ ಕರೆದಿದ್ದು ಗುತ್ತಿಗೆದಾರ ಆರ್‌. ವೆಂಕಟರೆಡ್ಡಿ ಅವರು ಗುತ್ತಿಗೆ ಪಡೆದಿದ್ದು ಈಗಾಗಲೇ ಕಾಮಗಾರಿ ಕಾರ್ಯಾದೇಶ ಕೂಡ ಪಡೆದಿದ್ದಾರೆ. ಡಿಸಿಯವರು ಕೂಡ ಜಿಪಂ ಎಂಜಿನಿಯರಿಂಗ್‌ ವಿಭಾಗಕ್ಕೆ 1.50 ಕೋಟಿ ರೂ. ಹಣವನ್ನು ಆರ್‌ಟಿಜಿಎಸ್‌ ಮೂಲಕ ಬಿಡುಗಡೆ ಮಾಡಿದ್ದಾರೆ. ಗುತ್ತಿಗೆದಾರರು ನಿವೇಶನದ ಸ್ಥಳವನ್ನು ಸ್ವಚ್ಚಗೊಳಿಸಿ ಜ. 5 ರಿಂದ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿಕೆಯಲ್ಲಿ ಗೌರವ ಕಾರ್ಯದರ್ಶಿ ಅಣಜಿ ಆಂಜಿನಪ್ಪ, ಸಹಕಾರ್ಯದರ್ಶಿ ವಾಸುದೇವ ಇತರರು ತಿಳಿಸಿದ್ದಾರೆ.

---

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ