ಆ್ಯಪ್ನಗರ

ಬಿಬಿಎಂಪಿ ಇಂಜಿನಿಯರ್ ಮನೆಗೆ ಎಸಿಬಿ ದಾಳಿ: ₹3.98 ಕೋಟಿ ಮೌಲ್ಯದ ಆಸ್ತಿ ಪತ್ತೆ

ಬೆಂಗಳೂರಿನ ಬಿಬಿಎಂಪಿ ಎಇಇ ಇಂಜಿನಿಯರ್ ಸಿ.ಎ.ಆಂಜಿನಪ್ಪನವರ ಮನೆ ಮೇಲೆ ಶುಕ್ರವಾರ ಬೆಳಗ್ಗೆಯಿಂದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಒಟ್ಟು 3.98 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

Vijaya Karnataka Web 23 Jan 2021, 7:33 pm
ದಾವಣಗೆರೆ : ಬೆಂಗಳೂರಿನ ಬಿಬಿಎಂಪಿ ಎಇಇ ಇಂಜಿನಿಯರ್ ಸಿ.ಎ.ಆಂಜಿನಪ್ಪನವರ ಮನೆ ಮೇಲೆ ಶುಕ್ರವಾರ ಬೆಳಗ್ಗೆಯಿಂದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಒಟ್ಟು 3.98 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
Vijaya Karnataka Web acb raid davanagere
ಬೆಂಗಳೂರಿನ ಬಿಬಿಎಂಪಿ ಎಇಇ ಎಂಜಿನಿಯರ್ ಸಿ.ಎ.ಆಂಜಿನಪ್ಪ ಜತೆ ಎಸಿಬಿ ಅಧಿಕಾರಿಗಳು


ಸಿ.ಎ.ಅಂಜಿನಪ್ಪನವರ ಮನೆ ಸೇರಿದಂತೆ ರಾಜ್ಯದ 4 ಕಡೆ ದಾಳಿ ನಡೆದಿದೆ. ಮೂಲತಃ ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮ ನಿವಾಸಿ. ಲೋಕಿಕೆರೆ ಗ್ರಾಮದ ಮನೆಯ ಮೇಲೆ ನೆನ್ನೆ ಬೆಳ್ಳಂಬೆಳಗ್ಗೆ ಎಸಿಬಿ ತಂಡ ದಾಳಿ ನಡೆಸಿತ್ತು. ಬೆಂಗಳೂರಿನ ಜೀವನ್ ಭೀಮ್ ನಗರದ ಕ್ವಾರ್ಟಸ್, ಚನ್ನಗಿರಿ ತಾಲೂಕಿನ ಎರೇಹಳ್ಳಿ ಗ್ರಾಮದ ಮನೆ ಸೇರಿ 4 ಕಡೆ ದಾಳಿ ಏಕಕಾಲಕ್ಕೆ ದಾಳಿ ನಡೆದಿದೆ.

ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಒಟ್ಟು 3.98 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ₹35 ಲಕ್ಷ ನಗದು, 1.2ಕೆ.ಜಿ. ಚಿನ್ನಾಭರಣ, 9ಕೆ.ಜಿ. ಬೆಳ್ಳಿ ಸಾಮಗ್ರಿ, 73 ಲಕ್ಷ ರೂ. ಮೌಲ್ಯದ 15ಎಕರೆ 20 ಗುಂಟೆ ಎಕರೆ ಅಡಕೆತೋಟ, ರೂ 44.30 ಲಕ್ಷ ರೂಪಾಯಿ ಮೌಲ್ಯದ ಕಾರು, ಬೈಕ್, ಗೃಹಬಳಕೆ ವಸ್ತುಗಳು ಪತ್ತೆಯಾಗಿವೆ.

ಬಿಬಿಎಂಪಿ ಎಂಜಿನಿಯರ್ ಆಂಜಿನಪ್ಪ ಮನೆಗಳ ಮೇಲೆ ಎಸಿಬಿ ದಾಳಿ, ಕಂತೆ ಕಂತೆ ಹಣ-ವಾಹನಗಳು ಪತ್ತೆ!

ದಾವಣಗೆರೆ ಪೂರ್ವವಲಯ ಎಸ್ಪಿ ಜಯಪ್ರಕಾಶ್‌ನೇತೃತ್ವದಲ್ಲಿ ನಡೆದಿದ್ದು, ಡಿಎಸ್ಪಿ ಎಚ್.ಎಸ್.ಪರಮೇಶ್ವರ, ಬಸವರಾಜ್‌ಮಗದಮ್, ಲೋಕೇಶ್, ಇನ್ಸ್‌ಪೆಕ್ಟರ್‌ಗಳಾದ ಮಧುಸೂಧನ್, ಸುದರ್ಶನ್, ಪಟ್ಟಣಕುಡೆ, ಇಮ್ರಾನ್‌ಬೇಗ್, ಪ್ರವೀಣ್‌ಕುಮಾರ್ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ