ದಾವಣಗೆರೆ: ಹಿಂದಿನ ಭಾನುವಾರ ಕೊರೊನಾ ಸ್ಫೋಟವಾಗಿ ಬೆಚ್ಚಿ ಬಿದ್ದಿದ್ದ ದಾವಣಗೆರೆ, ಈ ಭಾನುವಾರ ಕೊಂಚ ನಿರಾಳವಾಗಿದೆ. ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ 134 ಮಾದರಿಗಳ ಫಲಿತಾಂಶ ಭಾನುವಾರ ಬಂದಿದ್ದು, ಎಲ್ಲವೂ ನೆಗೆಟಿವೆ ಇದೆ. ಆದರೆ ಅಜ್ಮೇರ್ಗೆ ಹೋಗಿ ಬಂದಿದ್ದ ಪಿ-847 ಎಂದು ಗುರ್ತಿಸಲಾಗಿರುವ 22 ವರ್ಷದ ಯುವಕನಿಗೆ ಸೋಂಕು ತಗುಲಿ ಹೊಸ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 68ಕ್ಕೆ ಏರಿದಂತಾಗಿದೆ. ಭಾನುವಾರಕ್ಕೆ ಒಟ್ಟು 257 ಮಾದರಿಗಳ ಫಲಿತಾಂಶ ಬರುವುದು ಬಾಕಿಯಿತ್ತು. ಅದರಲ್ಲಿ 134 ಫಲಿತಾಂಶಗಳು ಪ್ರಕಟ ಆಗಿದ್ದು ಎಲ್ಲವೂ ನೆಗೆಟಿವ್ ಬಂದಿವೆ. ಈ ದಿನ ಹೊಸದಾಗಿ ಇನ್ನೂ 330 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಸಿ ಮಹಾಂತೇಶ್ ಬೀಳಗಿ ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದರು.
ಆ 16 ಜನ..!
ಲಾಕ್ಡೌನ್ಗಿಂತ ಮುನ್ನ ನಗರದ 16 ಜನರು ಅಜ್ಮೇರ್ಗೆ ಹೋಗಿದ್ದರು. ವಾರದ ಹಿಂದೆ ಅಜ್ಮೇರ್ನಿಂದ ವಾಪಸ್ ಆಗಿದ್ದರು. ಇವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿತ್ತು. ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಇನ್ನು ನಾಲ್ಕು ಜನರ ವರದಿ ಬರಬೇಕಿದೆ ಎಂದು ಡಿಸಿ ತಿಳಿಸಿದರು. ಜಿಲ್ಲೆಯಲ್ಲಿಇನ್ನೂ 453 ಮಾದರಿಗಳ ವರದಿ ಬರಬೇಕಾಗಿದ್ದು, ಜಿಲ್ಲಾಡಳಿತ ಕೂಡ ನಿತ್ಯ ಆರೋಗ್ಯ ಸರ್ವೆ ಕಾರ್ಯ ಮಾಡುತ್ತಿದೆ.
ಪಾದರಾಯನಪುರದಿಂದ ಸಿರಾಗೆ ಹೋದ ವ್ಯಕ್ತಿಗೆ ಕೊರೊನಾ ಸೋಂಕು ದೃಢ..!
ಲಾಡ್ಜ್ಗಳಿಗೆ ದ್ರಾವಣ ಸಿಂಪರಣೆ
ನಗರದ ನಾನಾ ಲಾಡ್ಜ್ಗಳಲ್ಲಿ ಹಲವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಅಗ್ನಿಶಾಮಕ ದಳ ದ್ರಾವಣ ಸಿಂಪರಣೆ ಮಾಡಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಜತೆಗೆ ನಿರ್ಬಂಧಿತ ಪ್ರದೇಶದಲ್ಲೂಸಿಂಪರಣೆ ಮಾಡಿದೆ.
ಅಂಬ್ಯುಲೆನ್ಸ್ಗೂ ಬ್ರೇಕ್:
ತ್ಯಾವಣಿಗೆ ಮತ್ತಿ ಗ್ರಾಮದ ಕದರನಹಳ್ಳಿ ಕ್ರಾಸ್ ಬಳಿಯ ರಾಜ್ಯ ಹೆದ್ದಾರಿಗೆ ಅಲ್ಲಿನ ಜನರು ಕಲ್ಲು ಮಣ್ಣು ತುಂಬಿ ಸಂಪೂರ್ಣ ಬಂದ್ ಮಾಡಿದ್ದರಿಂದ ರೋಗಿಯನ್ನು ಕರೆದುಕೊಂಡು ಚನ್ನಗಿರಿಗೆ ಹೋಗುತ್ತಿದ್ದ ಅಂಬ್ಯುಲೆನ್ಸ್ಗೆ ದಾರಿ ಇಲ್ಲದೇ ಪರದಾಡ ಬೇಕಾಯಿತು. ಚಾಲಕ ಬೇರೆ ಮಾರ್ಗದಿಂದ ರೋಗಿಯನ್ನು ಆಸ್ಪತ್ರೆಗೆ ಸೇರಿಸುವಂತಾಯಿತು.
ಸೋಮವಾರ 450 ಕನ್ನಡಿಗರು ತಾಯ್ನಾಡಿಗೆ ವಾಪಸ್: ಸ್ಟಾರ್ ಹೊಟೇಲ್ಗಳಲ್ಲಿ ಕ್ವಾರಂಟೈನ್
ಪೊಲೀಸರಿಗೆ ಪರೀಕ್ಷೆ ಕಡ್ಡಾಯ
ಹಳೇ ದಾವಣಗೆರೆ ಪ್ರದೇಶದಲ್ಲಿ ಬರುವ ಪೊಲೀಸ್ ಠಾಣೆ ಸಿಬ್ಬಂದಿಗೆ ನಿತ್ಯ ಪರೀಕ್ಷೆ ಕಡ್ಡಾಯ ಎಂದು ದಾವಣಗೆರೆ ಎಸ್ಪಿ ಹನುಮಂತರಾಯ ಆದೇಶಿಸಿದ್ದಾರೆ. ಆಜಾದ್ ನಗರ, ಗಾಂಧಿನಗರ ಹಾಗೂ ಬಸವನಗರ ಪೊಲೀಸ್ ಠಾಣೆ ಸಿಬ್ಬಂದಿ ಮತ್ತು ಅಧಿಕಾರಿಗಳು ನಿತ್ಯ ಜಿಲ್ಲಾಸ್ಪತ್ರೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಬೇಕು. ನಗರದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಸೂಚಿಸಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
50 ವರ್ಷ ಮೇಲ್ಪಟ್ಟವರೇ ಹುಷಾರ್..! ದಿಲ್ಲಿ ಸಿಎಂ ಬಿಚ್ಚಿಟ್ಟಿದ್ದಾರೆ ಆಘಾತಕಾರಿ ಅಂಕಿಅಂಶ..!
ಆ 16 ಜನ..!
ಲಾಕ್ಡೌನ್ಗಿಂತ ಮುನ್ನ ನಗರದ 16 ಜನರು ಅಜ್ಮೇರ್ಗೆ ಹೋಗಿದ್ದರು. ವಾರದ ಹಿಂದೆ ಅಜ್ಮೇರ್ನಿಂದ ವಾಪಸ್ ಆಗಿದ್ದರು. ಇವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿತ್ತು. ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಇನ್ನು ನಾಲ್ಕು ಜನರ ವರದಿ ಬರಬೇಕಿದೆ ಎಂದು ಡಿಸಿ ತಿಳಿಸಿದರು. ಜಿಲ್ಲೆಯಲ್ಲಿಇನ್ನೂ 453 ಮಾದರಿಗಳ ವರದಿ ಬರಬೇಕಾಗಿದ್ದು, ಜಿಲ್ಲಾಡಳಿತ ಕೂಡ ನಿತ್ಯ ಆರೋಗ್ಯ ಸರ್ವೆ ಕಾರ್ಯ ಮಾಡುತ್ತಿದೆ.
ಪಾದರಾಯನಪುರದಿಂದ ಸಿರಾಗೆ ಹೋದ ವ್ಯಕ್ತಿಗೆ ಕೊರೊನಾ ಸೋಂಕು ದೃಢ..!
ಲಾಡ್ಜ್ಗಳಿಗೆ ದ್ರಾವಣ ಸಿಂಪರಣೆ
ನಗರದ ನಾನಾ ಲಾಡ್ಜ್ಗಳಲ್ಲಿ ಹಲವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಅಗ್ನಿಶಾಮಕ ದಳ ದ್ರಾವಣ ಸಿಂಪರಣೆ ಮಾಡಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಜತೆಗೆ ನಿರ್ಬಂಧಿತ ಪ್ರದೇಶದಲ್ಲೂಸಿಂಪರಣೆ ಮಾಡಿದೆ.
ಅಂಬ್ಯುಲೆನ್ಸ್ಗೂ ಬ್ರೇಕ್:
ತ್ಯಾವಣಿಗೆ ಮತ್ತಿ ಗ್ರಾಮದ ಕದರನಹಳ್ಳಿ ಕ್ರಾಸ್ ಬಳಿಯ ರಾಜ್ಯ ಹೆದ್ದಾರಿಗೆ ಅಲ್ಲಿನ ಜನರು ಕಲ್ಲು ಮಣ್ಣು ತುಂಬಿ ಸಂಪೂರ್ಣ ಬಂದ್ ಮಾಡಿದ್ದರಿಂದ ರೋಗಿಯನ್ನು ಕರೆದುಕೊಂಡು ಚನ್ನಗಿರಿಗೆ ಹೋಗುತ್ತಿದ್ದ ಅಂಬ್ಯುಲೆನ್ಸ್ಗೆ ದಾರಿ ಇಲ್ಲದೇ ಪರದಾಡ ಬೇಕಾಯಿತು. ಚಾಲಕ ಬೇರೆ ಮಾರ್ಗದಿಂದ ರೋಗಿಯನ್ನು ಆಸ್ಪತ್ರೆಗೆ ಸೇರಿಸುವಂತಾಯಿತು.
ಸೋಮವಾರ 450 ಕನ್ನಡಿಗರು ತಾಯ್ನಾಡಿಗೆ ವಾಪಸ್: ಸ್ಟಾರ್ ಹೊಟೇಲ್ಗಳಲ್ಲಿ ಕ್ವಾರಂಟೈನ್
ಪೊಲೀಸರಿಗೆ ಪರೀಕ್ಷೆ ಕಡ್ಡಾಯ
ಹಳೇ ದಾವಣಗೆರೆ ಪ್ರದೇಶದಲ್ಲಿ ಬರುವ ಪೊಲೀಸ್ ಠಾಣೆ ಸಿಬ್ಬಂದಿಗೆ ನಿತ್ಯ ಪರೀಕ್ಷೆ ಕಡ್ಡಾಯ ಎಂದು ದಾವಣಗೆರೆ ಎಸ್ಪಿ ಹನುಮಂತರಾಯ ಆದೇಶಿಸಿದ್ದಾರೆ. ಆಜಾದ್ ನಗರ, ಗಾಂಧಿನಗರ ಹಾಗೂ ಬಸವನಗರ ಪೊಲೀಸ್ ಠಾಣೆ ಸಿಬ್ಬಂದಿ ಮತ್ತು ಅಧಿಕಾರಿಗಳು ನಿತ್ಯ ಜಿಲ್ಲಾಸ್ಪತ್ರೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಬೇಕು. ನಗರದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಸೂಚಿಸಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
50 ವರ್ಷ ಮೇಲ್ಪಟ್ಟವರೇ ಹುಷಾರ್..! ದಿಲ್ಲಿ ಸಿಎಂ ಬಿಚ್ಚಿಟ್ಟಿದ್ದಾರೆ ಆಘಾತಕಾರಿ ಅಂಕಿಅಂಶ..!