ಆ್ಯಪ್ನಗರ

ವಿಲೀನ ವಿರುದ್ಧ: ಬ್ಯಾಂಕ್‌ ನೌಕರರ ಮುಷ್ಕರ

ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳಾದ ಬ್ಯಾಂಕ್‌ ಅಫ್‌ ಬರೋಡಾ, ವಿಜಯಾ ಮತ್ತು ದೇನಾ ಬ್ಯಾಂಕ್‌ಗಳ ವಿಲೀನಗೊಳಿಸುವ ಕೇಂದ್ರ ಸರಕಾರದ ಏಕಪಕ್ಷೀಯ ನಿರ್ಧಾರ ವಿರೋಧಿಸಿ ಮತ್ತು ಬ್ಯಾಂಕ್‌ಗಳಲ್ಲಿ ವಸೂಲಾಗದ ಸಾಲವನ್ನು ಕಠಿಣ ಕಾನೂನು ಕ್ರಮಗಳ ಮೂಲಕ ವಸೂಲಾತಿ ಮಾಡಲು ಒತ್ತಾಯಿಸಿ ಬ್ಯಾಂಕ್‌ ನೌಕರರು ನಗರದಲ್ಲಿ ಬುಧವಾರ ಮುಷ್ಕರ ನಡೆಸಿದರು. ಪರಿಣಾಮ ಎಸ್‌ಬಿಐ ಸೇರಿ ಕೆಲ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸದೆ ಬಂದ್‌ ಆಗಿದ್ದವು.

Vijaya Karnataka 27 Dec 2018, 5:00 am
ದಾವಣಗೆರೆ : ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳಾದ ಬ್ಯಾಂಕ್‌ ಅಫ್‌ ಬರೋಡಾ, ವಿಜಯಾ ಮತ್ತು ದೇನಾ ಬ್ಯಾಂಕ್‌ಗಳ ವಿಲೀನಗೊಳಿಸುವ ಕೇಂದ್ರ ಸರಕಾರದ ಏಕಪಕ್ಷೀಯ ನಿರ್ಧಾರ ವಿರೋಧಿಸಿ ಮತ್ತು ಬ್ಯಾಂಕ್‌ಗಳಲ್ಲಿ ವಸೂಲಾಗದ ಸಾಲವನ್ನು ಕಠಿಣ ಕಾನೂನು ಕ್ರಮಗಳ ಮೂಲಕ ವಸೂಲಾತಿ ಮಾಡಲು ಒತ್ತಾಯಿಸಿ ಬ್ಯಾಂಕ್‌ ನೌಕರರು ನಗರದಲ್ಲಿ ಬುಧವಾರ ಮುಷ್ಕರ ನಡೆಸಿದರು. ಪರಿಣಾಮ ಎಸ್‌ಬಿಐ ಸೇರಿ ಕೆಲ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸದೆ ಬಂದ್‌ ಆಗಿದ್ದವು.
Vijaya Karnataka Web against merger bank employee strike
ವಿಲೀನ ವಿರುದ್ಧ: ಬ್ಯಾಂಕ್‌ ನೌಕರರ ಮುಷ್ಕರ


ಬ್ಯಾಂಕ್‌ ಕಾರ್ಮಿಕರ ಸಂಘಟನೆ ಸಂಯುಕ್ತ ವೇದಿಕೆ ರಾಷ್ಟ್ರಾದ್ಯಂತ ಕರೆ ನೀಡಿದ್ದ ಒಂದು ದಿನದ ಅಖಿಲ ಭಾರತ ಬ್ಯಾಂಕ್‌ ಮುಷ್ಕರಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇಲ್ಲಿನ ಪಿಬಿ ರಸ್ತೆಯ ಅರುಣಾ ಟಾಕೀಸ್‌ ಬಳಿಯಿರುವ ವಿಜಯಾ ಬ್ಯಾಂಕ್‌ ಬಳಿ ಬ್ಯಾಂಕ್‌ ಕಾರ್ಮಿಕರು ಮತ ಪ್ರದರ್ಶನ ನಡೆಸಿದರು. ಕೇಂದ್ರ ಸರಕಾರದ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ದಾವಣಗೆರೆ-ಚಿತ್ರದುರ್ಗ ಜಿಲ್ಲಾ ಬ್ಯಾಂಕ್‌ ನಿವೃತ್ತರ ಒಕ್ಕೂಟ ಕೂಡ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿತ್ತು.

ವೀಲಿನ ನೀತಿ ಅವೈಜ್ಞಾನಿಕ:
ಒಂಬತ್ತು ಬ್ಯಾಂಕ್‌ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ರಾಘವೇಂದ್ರ ನಾಯರಿ ಮಾತನಾಡಿ, ಪ್ರಸ್ತುತ ಕೇಂದ್ರ ಸರಕಾರ ಬ್ಯಾಂಕ್‌ ಆಫ್‌ ಬರೋಡಾ, ವಿಜಯಾ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳನ್ನು ವಿಲೀನಗೊಳಿಸಲು ನಿರ್ಧಾರ ಕೈಗೊಂಡಿದೆ. ಇದನ್ನು ಬ್ಯಾಂಕಿಂಗ್‌ ಕ್ಷೇತ್ರದ ಎಲ್ಲ ನೌಕರರು ಮತ್ತು ಅಧಿಕಾರಿಗಳ ಸಂಘಟನೆಗಳು ತೀವ್ರವಾಗಿ ವಿರೋಧಿಸಿ ಈವರೆಗೆ ಹಲವಾರು ಪ್ರತಿಭಟನಾ ಕಾರ್ಯಕ್ರಮ ನಡೆಸಲಾಗಿದೆ. ಈ ವಿಲೀನಿಕರಣ ನೀತಿ ಅತ್ಯಂತ ಅವೈಜ್ಞಾನಿಕ ಮತ್ತು ಅಸಮರ್ಥನೀಯ. ದೊಡ್ಡ ಬ್ಯಾಂಕ್‌ - ದೊಡ್ಡ ಅಪಾಯ ಎನ್ನುವಂತೆ ಬ್ಯಾಂಕ್‌ ವಿಲೀನದಿಂದ ಯಾವುದೇ ರೀತಿಯ ಅನುಕೂಲಗಳಿಲ್ಲ ಎಂದರು.

ವರ್ಷದ ಕೆಳಗೆ ಸ್ಟೇಟ್‌ ಬ್ಯಾಂಕ್‌ ಇಂಡಿಯಾದ ಜೊತೆ ಸಹವರ್ತಿ ಬ್ಯಾಂಕ್‌ಗಳ ವಿಲೀನೀಕರಣ ಮಾಡಿರುವುದು ಇನ್ನಷ್ಟು ಹಾನಿಕಾರಕವಾಗಿ ಪರಿಣಮಿಸಿದೆ. ಸ್ಟೇಟ್‌ ಬ್ಯಾಂಕ್‌ ಇಂಡಿಯಾ ತನ್ನ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ನಷ್ಟಕ್ಕೆ ಒಳಗಾಗಿದೆ. ಹಲವಾರು ಶಾಖೆಗಳನ್ನು ಮುಚ್ಚಲಾಗಿದೆ. ಸ್ವಯಂ ನಿವೃತ್ತಿ ಯೋಜನೆ ವ್ಯವಸ್ಥೆ ಮೂಲಕ ಸಿಬ್ಬಂದಿಗಳನ್ನು ಮನೆಗೆ ಕಳುಹಿಸಲಾಗಿದೆ. ವ್ಯವಹಾರಗಳು ಕುಂಠಿತಗೊಂಡಿದೆ. ಮರು ಪಾವತಿಯಾಗದ ಸಾಲದ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ. ಇದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ನೌಕರರಾದ ಕೆ.ಎನ್‌. ಗಿರಿರಾಜ್‌, ಹರೀಶ್‌ ಎಂ.ಪೂಜಾರ್‌, ಎಸ್‌. ಪ್ರಶಾಂತ್‌, ಆನಂದಮೂರ್ತಿ, ಜಿ.ರಂಗಸ್ವಾಮಿ, ಪುರುಷೋತ್ತಮ ಪಿ.ಆರ್‌, ವಾಗೀಶ್‌ ಮಾತನಾಡಿದರು. ನೌಕರರಾದ ಕೆ. ವಿಶ್ವನಾಥ್‌ ಬಿಲ್ಲವ, ವಿಜಯಾ ಬ್ಯಾಂಕ್‌ ಆನಂದಮೂರ್ತಿ, ತಿಪ್ಪೇಸ್ವಾಮಿ, ಜಿ.ರಂಗಸ್ವಾಮಿ, ದತ್ತಾತ್ರೇಯ ಮೇಲಗಿರಿ, ಭಾರತಿ ಸಂಜೀವ್‌, , ಕೆ.ಜಯಲಕ್ಷ್ಮೀ, ಕವಿತಾಬಾಯಿಬಿ, ರಶ್ಮಿ ರೈ, ಸುನಂದಮ್ಮ, ನಿವೃತ್ತರ ಒಕ್ಕೂಟದ ಅಧ್ಯಕ್ಷ ನಂಜುಂಡೇಶ್ವರ, ಸುಗೀರಪ್ಪ, ಎಸ್‌.ಟಿ.ಶಾಂತಗಂಗಾಧರ ಇತರರು ಪಾಲ್ಗೊಂಡಿದ್ದರು.

9 ಲಕ್ಷ ಕೋಟಿ ಸುಸ್ಥಿ ಸಾಲ

ಬ್ಯಾಂಕುಗಳಲ್ಲಿ ಸುಸ್ಥಿಯಾಗಿರುವ ಸಾಲದ ಪ್ರಮಾಣ ಸುಮಾರು 9 ಲಕ್ಷ ಕೋಟಿಯಷ್ಟಿದೆ. ಸಾಲ ಪಡೆದ ದೊಡ್ಡ ಕಂಪನಿಗಳು ಸಾಲ ಕಟ್ಟಿಲ್ಲ. ವಸೂಲಾಗದೆ ಉಳಿದಿರುವ ಈ ಸಾಲವನ್ನು ವಸೂಲು ಮಾಡಲು ಸೂಕ್ತ ಕ್ರಮ ಕೈಗೊಳ್ಳುವತ್ತ ಕೇಂದ್ರ ಸರಕಾರ ಗಮನ ಹರಿಸಬೇಕು. ಇತ್ತ ಗಮನ ಕೊಡದ ಸರಕಾರ ಬ್ಯಾಂಕುಗಳ ವಿಲೀನಕ್ಕೆ ಕೈಹಾಕಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಾವಿರಾರು ಕೋಟಿ ಸ್ತಬ್ಧ
ಪ್ರತಿಭಟನೆಯಲ್ಲಿ ದೇಶಾದ್ಯಂತ ಸುಮಾರು 10 ಲಕ್ಷಕ್ಕೂ ಹೆಚ್ಚು ಬ್ಯಾಂಕ್‌ ನೌಕರರು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಮುಷ್ಕರದಿಂದಾಗಿ ಸುಮಾರು 80 ಸಾವಿರಕ್ಕೂ ಹೆಚ್ಚಿನ ಬ್ಯಾಂಕ್‌ ಶಾಖೆ ಬಂದ್‌ ಆಗಿದ್ದು ಸಾವಿರಾರು ಕೋಟಿ ರೂ. ಬ್ಯಾಂಕ್‌ ವ್ಯವಹಾರ ಸ್ತಬ್ಧಗೊಂಡಿದೆ ಎಂದು ಬ್ಯಾಂಕ್‌ ಕಾರ್ಮಿಕ ಸಂಘಟನೆ ಒಕ್ಕೂಟದ ಜಿಲ್ಲಾ ಸಂಚಾಲಕ ರಾಘವೇಂದ್ರ ನಾಯರಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ