ಆ್ಯಪ್ನಗರ

ಹಿಂದೂ ಕೋಡ್‌ ಬಿಲ್‌ ಜಾರಿಗೆ ಅಂಬೇಡ್ಕರ್‌ ಶ್ರಮ

ಜಾತಿ ಪದ್ಧತಿ, ಸಾಮಾಜಿಕ ತಾರತಮ್ಯ ನೀಗಿಸಲು ಅಂಬೇಡ್ಕರ್‌ ಹೋರಾಟಕ್ಕೆ ಧುಮುಕಿದ್ದು, ಹೆಣ್ಣು ಮಕ್ಕಳ ರಕ್ಷಣೆಗಾಗಿ ಹಿಂದೂ ಕೋಡ್‌ ಬಿಲ್‌ ಜಾರಿಗೆ ತರಲು ಪ್ರಯತ್ನಿಸಿದ್ದರು ಎಂದು ಹಾವೇರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಜಿಲ್ಲಾ ನ್ಯಾಯಾಧೀಶರಾದ ಸುನಂದಮ್ಮ ದುರುಗೇಶ್‌ ಹೇಳಿದರು.

Vijaya Karnataka 17 Dec 2018, 5:00 am
ದಾವಣಗೆರೆ : ಜಾತಿ ಪದ್ಧತಿ, ಸಾಮಾಜಿಕ ತಾರತಮ್ಯ ನೀಗಿಸಲು ಅಂಬೇಡ್ಕರ್‌ ಹೋರಾಟಕ್ಕೆ ಧುಮುಕಿದ್ದು, ಹೆಣ್ಣು ಮಕ್ಕಳ ರಕ್ಷಣೆಗಾಗಿ ಹಿಂದೂ ಕೋಡ್‌ ಬಿಲ್‌ ಜಾರಿಗೆ ತರಲು ಪ್ರಯತ್ನಿಸಿದ್ದರು ಎಂದು ಹಾವೇರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಜಿಲ್ಲಾ ನ್ಯಾಯಾಧೀಶರಾದ ಸುನಂದಮ್ಮ ದುರುಗೇಶ್‌ ಹೇಳಿದರು.
Vijaya Karnataka Web ambedkars efforts to implement hindu code bill
ಹಿಂದೂ ಕೋಡ್‌ ಬಿಲ್‌ ಜಾರಿಗೆ ಅಂಬೇಡ್ಕರ್‌ ಶ್ರಮ


ನಗರದ ರೋಟರಿ ಬಾಲಭವನದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪಂಗಡ ನೌಕರರ ವಿದ್ಯಾರ್ಥಿಗಳ ಒಕ್ಕೂಟ, ಸಾಮಾಜಿಕ ಸಂಘರ್ಷ ಜಿಲ್ಲಾ ಸಮಿತಿಯಿಂದ ಡಾ. ಅಂಬೇಡ್ಕರ್‌ ನೆನಪಿನ ದಿನ 'ದೇಶದ ಏಕತಾ ದಿನ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾರತಮ್ಯ ಧೋರಣೆ ಸಮಾಜದಿಂದ ಹೇಗೆ ಹೊರ ತರಬೇಕು ಎನ್ನುವ ಕುರಿತು ಅಂಬೇಡ್ಕರ್‌ ಆಲೋಚಿಸುವ ಮೂಲಕ ಜನಾಂಗದ ಅಭಿವೃದ್ಧಿಗೆ ಪ್ರಯತ್ನಿಸಿದ್ದರು. ಇಂತಹ ಅಂಬೇಡ್ಕರ್‌ನನ್ನು ಪ್ರತಿಯೊಬ್ಬರು ನೆನೆಯುವುದರಿಂದ ಸ್ವಲ್ಪ ಋುಣಬಾರ ತೀರಿಸಿದಂತಾಗುತ್ತದೆ. ಅಂದಿನ ಕಾಲದಲ್ಲಿಯೇ ಮಹಿಳೆ ಮೇಲಿನ ತಾರತಮ್ಯ ಹೊಡೆದು ಹಾಕಲು ಪ್ರಯತ್ನಿಸಿದ್ದರು ಎಂದರು.

ಮಹಿಳೆಯರು ಕೌಟುಂಬಿಕ ಕಲಹದಿಂದ ಹೊರಬಂದು ಬೌದ್ಧಿಕ ಸಾಮರ್ಥ್ಯ‌ ಮೂಡಿಸಿದ್ದರು. ಕೇವಲ ದಲಿತ ಜನಾಂಗದ ಮಹಿಳೆಯರು ಮಾತ್ರವಲ್ಲದೇ ಸರ್ವಣೀಯರು ಸಹ ಅಂಬೇಡ್ಕರ್‌ ಅವರನ್ನು ಸ್ಮರಿಸಬೇಕಾಗಿದೆ. ಹೆಣ್ಣು ಮಕ್ಕಳ ರಕ್ಷಣೆಗಾಗಿ ಅಂಬೇಡ್ಕರ್‌ ಹಿಂದೂ ಕೋಡ್‌ ಬಿಲ್‌ ಜಾರಿಗೆ ತರಲು ಪ್ರಯತ್ನಿಸಿದ್ದರು. ಅಂಬೇಡ್ಕರ್‌ ಚಿಂತನೆ ಧಾರೆಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ ಎಂದರು.

ಚಿತ್ರದುರ್ಗ ಸಾ.ಸಂ.ಸ. ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಬಸವರಾಜ್‌ ಮಾತನಾಡಿ, ದೇಶವು ಅಪಾಯದ ಸ್ಥಿತಿಯಲ್ಲಿದ್ದು ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಅಂಬೇಡ್ಕರ್‌ ನೀಡಿದ ಕೊಡುಗೆಯನ್ನು ಪ್ರಭುತ್ವ ನಾಶಪಡಿಸುತ್ತಿದೆ. ಸಹೋದರತೆ, ಸಹಬಾಳ್ವೆ ಬೇಡವಾಗಿದೆ. ದಲಿತರ ಮೇಲೆ ಹಿಂದುಳಿದವರನ್ನು ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ ಎಂದರು.

ಈಗಿನ ಪ್ರಭುತ್ವ ಬರೀ ಹುಸಿ ಸುಳ್ಳು ಭರವಸೆ ನೀಡುತ್ತಿವೆ. ನಿರುದ್ಯೋಗ ತೋಡೆದಿಲ್ಲ. ಬೃಹತ್‌ ಪ್ರತಿಭೆ ಅನಾವರಣಕ್ಕೆ ಹಣ ವ್ಯಯ ಮಾಡಲಾಗುತ್ತಿದೆ. ಸರ್ದಾರ್‌ ವಲ್ಲಬ್‌ ಬಾಯ್‌ ಪಟೇಲ್‌ ಹಿಂದು ಪರ ಅಜೆಂಡಾ ಹೊಂದಿದ್ದ ವ್ಯಕ್ತಿಯಾಗಿದ್ದರು. ಅವರನ್ನು ಇಡೀ ಜಗತ್ತಿಗೆ ತೋರಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ಶೋಷಿತರ ಪರ ಹೋರಾಡಿದ ಅಂಬೇಡ್ಕರ್‌, ಬಸವಣ್ಣನ ಪ್ರತಿಮೆ ನಿಲ್ಲಿಸಬಹುದಾಗಿತ್ತುಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾ.ಸಂ.ಸ.ಜಿಲ್ಲಾಧ್ಯಕ್ಷ ತಿಪ್ಪೇರುದ್ರಪ್ಪ, ಡಾ.ಕೆ.ಕೆ.ಕಾಮಾನಿ, ಡಾ.ಎಂ.ಮಂಜಣ್ಣ, ಇಮ್ತಿಯಾಜ್‌ ಹುಸೇನ್‌, ಸುನಿತಮ್ಮ ಕೆ.ರುದ್ರಪ್ಪ, ಎಚ್‌.ಮಲ್ಲೇಶ್‌, ಕೆ.ಕುಮಾರ್‌, ಸಿ.ಎ.ಚಿಕ್ಕಣ್ಣ, ನಾಗೇಶ್‌, ಸಿ.ಕೆ.ಮಹೇಶ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ