ಆ್ಯಪ್ನಗರ

ಬೆಣ್ಣೆನಗರಿ ದಾವಣಗೆಯೊಂದಿಗೆ ಅಂಬಿ ನಂಟು

ಕೇಂದ್ರದ ಮಾಜಿ ಸಚಿವ, ಕನ್ನಡದ ಮೇರು ನಟ ರೆಬೆಲ್‌ ಸ್ಟಾರ್‌ ಅಂಬರೀಶ್‌ಗೂ ಬೆಣ್ಣೆ ನಗರಿ ದಾವಣಗೆರೆಗೂ ಅವಿನಾಭಾವ ಸಂಬಂಧ ಇತ್ತು. ಇಲ್ಲಿನ ಶಾಮನೂರು ಕುಟುಂಬದವರೊಂದಿಗೆ ಅತಿ ಹೆಚ್ಚು ಆಪ್ತರಾಗಿದ್ದರು. ಅಲ್ಲದೇ ಅವರ ಪರವಾಗಿ ಆಗಾಗ ಚುನಾವಣೆ ಪ್ರಚಾರಕ್ಕೂ ಆಗಮಿಸುತ್ತಿದ್ದರು.

Vijaya Karnataka 26 Nov 2018, 5:00 am
ದಾವಣಗೆರೆ : ಕೇಂದ್ರದ ಮಾಜಿ ಸಚಿವ, ಕನ್ನಡದ ಮೇರು ನಟ ರೆಬೆಲ್‌ ಸ್ಟಾರ್‌ ಅಂಬರೀಶ್‌ಗೂ ಬೆಣ್ಣೆ ನಗರಿ ದಾವಣಗೆರೆಗೂ ಅವಿನಾಭಾವ ಸಂಬಂಧ ಇತ್ತು. ಇಲ್ಲಿನ ಶಾಮನೂರು ಕುಟುಂಬದವರೊಂದಿಗೆ ಅತಿ ಹೆಚ್ಚು ಆಪ್ತರಾಗಿದ್ದರು. ಅಲ್ಲದೇ ಅವರ ಪರವಾಗಿ ಆಗಾಗ ಚುನಾವಣೆ ಪ್ರಚಾರಕ್ಕೂ ಆಗಮಿಸುತ್ತಿದ್ದರು.
Vijaya Karnataka Web ambi with a butterfly jar
ಬೆಣ್ಣೆನಗರಿ ದಾವಣಗೆಯೊಂದಿಗೆ ಅಂಬಿ ನಂಟು


ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ರೊಂದಿಗೆ ಆಪ್ತರಾಗಿದ್ದ ಅಂಬಿ ಅವರು, ಎಸ್ಸೆಸ್‌ ಅವರ ಮನೆಯಲ್ಲಿ ಏನೇ ಕಾರ್ಯಕ್ರಮ ನಡೆದರೂ ಹಾಜರಾಗುತ್ತಿದ್ದರು. ಕಾಂಗ್ರೆಸ್‌ನಿಂದ ನಡೆದ ದೊಡ್ಡ ಸಮಾರಂಭಗಳಿಗೆ ಅಂಬಿ ಹಾಜರಾಗಿ ಶಾಮನೂರು ಗೆಸ್ಟ್‌ಹೌಸ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ಅವರಿಗಾಗಿ ಭೋಜನದ ಅವ್ಯವಸ್ಥೆಯನ್ನು ಎಸ್‌ಎಸ್‌ ಕುಟುಂಬ ಏರ್ಪಾಡು ಮಾಡುತ್ತಿತ್ತು.

ಹಳೆ ಬಸ್ಟಾಂಡ್‌ ಉದ್ಘಾಟನೆ:
2005ರಲ್ಲಿ ಅಂಬರೀಶ್‌ ದಾವಣಗೆರೆಯ ಹಳೆ ಬಸ್ಟಾಂಡ್‌ ಉದ್ಘಾಟಿಸಿ, ಈ ಬಸ್‌ ನಿಲ್ದಾಣಕ್ಕೆ ಶಾಮನೂರು ಶಿವಶಂಕರಪ್ಪ ಎಂದು ನಾಮಕರಣ ಮಾಡಿದ್ದರು. ಈ ವೇಳೆ ಮಾತನಾಡಿದ ಅಂಬಿ, ಶಾಮನೂರು ನನಗೆ ಹಿರಿಯಣ್ಣ ಇದ್ದ ಹಾಗೆ. ಎಸ್‌.ಎಸ್‌. ಮಲ್ಲಿಕಾರ್ಜುನ್‌ ನನಗೆ ತಮ್ಮ ಇದ್ದ ಹಾಗೆ. ಮಲ್ಲಿಕಾರ್ಜುನ್‌ ಶಿವಶಂಕರಪ್ಪರ ಸಲಹೆ ಸೂಚನೆ ಪಡೆದು ರಾಜಕೀಯದಲ್ಲಿ ಮುಂದೆ ಬರಬೇಕೆಂದು ಹೇಳಿದ್ದ ಹಳೆ ನೆನಪುಗಳನ್ನು ಡಿ.ಬಸವರಾಜ್‌ ಮೆಲುಕು ಹಾಕಿದರು.

ಅಂಬಿಗೆ ಬೆಳ್ಳಿ ಕಿರೀಟ:
ಶಾಮನೂರು ಶಿವಶಂಕರಪ್ಪನವರ 75ನೇ ಹುಟ್ಟು ಹಬ್ಬದ ನಿಮಿತ್ತ ಜೂನ್‌ 15, 2005ರಲ್ಲಿ ಅಂದಿನ ನಗರಸಭೆ ಅಧ್ಯಕ್ಷ ಡಿ.ಬಸವರಾಜ್‌ ಆಯೋಜಿಸಿದ್ದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅಂಬರೀಶ್‌ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪ, ನಟ ಅಂಬರೀಶ್‌, ವೈ.ನಾಗಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ್‌ಗೆ 'ಕರ್ನಾಟಕದ ಅಮೂಲ್ಯ ರತ್ನ'ಗಳೆಂದು ಬಿರುದು ನೀಡಿ, ಬೆಳ್ಳಿ ಕಿರೀಟ ತೊಡಿಸಿ ಪೌರ ಸನ್ಮಾನ ಮಾಡಲಾಗಿತ್ತು.

ಎಂಪಿ ಚುನಾವಣೆ ಪ್ರಚಾರ:
ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅಂಬರೀಶ್‌ ರಾಜ್ಯದಲ್ಲಿ ಎಲ್ಲಿಯೂ ಚುನಾವಣಾ ಪ್ರಚಾರ ಕೈಗೊಂಡಿರಲಿಲ್ಲ. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಪರ ರೋಡ್‌ ಶೋ ಮಾಡಿ ಮತಯಾಚಿಸಿದ್ದರು. ಹಾಗೆಯೇ ಮಲ್ಲಿಕಾರ್ಜುನ್‌ ಅವರು ಅಂಬರೀಶ್‌ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಅಂಬಿ ಆರೋಗ್ಯ ಹದಗೆಟ್ಟಾಗ ಸಿಂಗಾಪುರಕ್ಕೆ ಹೋಗಿ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದರು.

ಅಲ್ಲದೇ ಅಂಬರೀಶ್‌ಗೆ ಸಚಿವ ಸ್ಥಾನ ನೀಡುವುದಾದರೆ ನಾನು ಸಚಿವ ಸ್ಥಾನ ತ್ಯಜಿಸಲು ಸಿದ್ಧ. ಅಂಬರೀಶ್‌ ನಾನು ಒಳ್ಳೆಯ ಸ್ನೇಹಿತರು. ಅವರಿಗೆ ಉತ್ತಮ ಸ್ಥಾನಮಾನ ನೀಡಬೇಕು. ಅಗತ್ಯವಿದ್ದರೆ ನನ್ನ ಸ್ಥಾನವನ್ನೇ ಬಿಟ್ಟುಕೊಡುತ್ತೇನೆ. ಸಚಿವ ಸ್ಥಾನ ನೀಡುವಂತೆ ಅಂದಿನ ಸಿಎಂ ಸಿದ್ದರಾಮಯ್ಯ ಮತ್ತು ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ ಎಂದು ಚಿತ್ರದುರ್ಗದ ಕಾರ್ಯಕ್ರಮ ಒಂದರಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ್‌ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಾಮೂಹಿಕ ಮದುವೆಯಲ್ಲಿ ಭಾಗಿ
ದಾವಣಗೆರೆ ನಗರದಲ್ಲಿ ಕಾಂಗ್ರೆಸ್‌ ಮುಖಂಡ ಬಿ.ವೀರಣ್ಣನವರು ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಟ ಅಂಬರೀಶ್‌, ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌.ಮಲ್ಲಿಕಾರ್ಜುನ್‌ ಭಾಗವಹಿಸಿದ್ದರು.


ನಾನು ಪುಲ್‌ ಟೈಮ… ರಾಜಕಾರಣಿಯಲ್ಲ. ಆದರೆ, ರಾಜಕಾರಣಿ ಆದವರು ಜನರ ನಡುವೆ ಇರಬೇಕೆಂದು ಮಲ್ಲಿಕಾರ್ಜುನ್‌ ಅವರಿಗೆ ಕಾರ್ಯಕ್ರಮವೊಂದರಲ್ಲಿ ಅಂಬರೀಶ್‌ ಸಲಹೆ ನೀಡಿದ್ದರು.
- ಡಿ.ಬಸವರಾಜ್‌, ಕಾಂಗ್ರೆಸ್‌ ಮುಖಂಡ.

ಅಂಬರೀಶ್‌ ಒಬ್ಬ ಉತ್ತಮ ನಟರಾಗಿದ್ದು, ನಮ್ಮ ಟಾಕೀಸ್‌ನಲ್ಲಿ ನೆನಪಿನ ದೋಣಿ, ಒಡಹುಟ್ಟಿದವರು, ಚಕ್ರವ್ಯೂಹ, ಪ್ರೋಫೇಸರ್‌ ಸೇರಿದಂತೆ ಹಲವು ಚಿತ್ರಗಳನ್ನು ಹಾಕಿದ್ದೇವೆ. ಅವುಗಳಲ್ಲಿ ಸಾಕಷ್ಟು ಚಿತ್ರಗಳು ಐವತ್ತು ದಿನಕ್ಕಿಂತ ಹೆಚ್ಚು ಪ್ರದರ್ಶನಗೊಂಡಿವೆ. ಇನ್ನು ಮಂಡ್ಯದಲ್ಲಿರುವ ಸಿದ್ದಾರ್ಥ ಟಾಕೀಸ್‌ 84-88ರಲ್ಲಿ ಅಂಬರೀಶ್‌ ಅವರು ಉದ್ಘಾಟಿಸಿದ್ದರು. ಆ ಕಾಲದಲ್ಲಿ ರಂಗನಾಯಕಿ ಚಿತ್ರ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿತ್ತು.

- ಎಚ್‌.ವಿ. ಮಾದೇಗೌಡ, ಗೀತಾಂಜಲಿ ಟಾಕೀಸ್‌ ಮಾಲೀಕ.

ಅಂಬರೀಶರನ್ನು ಕಳೆದುಕೊಂಡಿರುವುದು ನನ್ನ ಮನೆಯಲ್ಲಿ ಒಬ್ಬರನ್ನು ಕಳೆದುಕೊಂಡಂತೆ ಆಗಿದೆ. ಅವರೊಬ್ಬ ಸ್ನೇಹ ಜೀವಿಯಾಗಿದ್ದು, ಎಲ್ಲರ ಜತೆ ಉತ್ತಮ ಬಾಂಧವ್ಯ ಹೊಂದಿದ್ದರು. ನನ್ನ ಮನೆಗೆ ಮೂರು ಬಾರಿ ಬಂದಿದ್ದರು. ನಾನು ಏರ್ಪಾಡು ಮಾಡಿದ್ದ ಸಾಮೂಹಿಕ ಮದುವೆಗೆ ಅಂಬಿ ಬಂದಿದ್ದರು. ಅವರ ಅಗಲಿಕೆ ನೋವನ್ನುಂಟು ಮಾಡಿದೆ.

-ಬಿ.ವೀರಣ್ಣ, ಕಾಂಗ್ರೆಸ್‌ ಮುಖಂಡ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ