ಆ್ಯಪ್ನಗರ

ಗಾಂಧೀಜಿ ಸತ್ಯಾಗ್ರಹಕ್ಕೆ ಪುತ್ಥಳಿಬಾಯಿ ಪೀಠಿಕೆ

ಗಾಂಧೀಜಿ ಜಗತ್ತೆ ಮೆಚ್ಚುವ ವ್ಯಕ್ತಿಯಾಗಿ ಬೆಳೆಯಲು ಆತನ ತಾಯಿ ಪುತ್ಥಳಿಬಾಯಿಯ ಜೀವನ ಶೈಲಿ ಪ್ರಭಾವ ಬೀರಿತು ಎಂದು ರಾಣೆಬೆನ್ನೂರು ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷ ಪ್ರಕಾಶಾನಂದ ಸ್ವಾಮೀಜಿ ಹೇಳಿದರು.

Vijaya Karnataka 27 Apr 2019, 5:00 am
ಹರಿಹರ : ಗಾಂಧೀಜಿ ಜಗತ್ತೆ ಮೆಚ್ಚುವ ವ್ಯಕ್ತಿಯಾಗಿ ಬೆಳೆಯಲು ಆತನ ತಾಯಿ ಪುತ್ಥಳಿಬಾಯಿಯ ಜೀವನ ಶೈಲಿ ಪ್ರಭಾವ ಬೀರಿತು ಎಂದು ರಾಣೆಬೆನ್ನೂರು ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷ ಪ್ರಕಾಶಾನಂದ ಸ್ವಾಮೀಜಿ ಹೇಳಿದರು.
Vijaya Karnataka Web an introduction to the gandhi satyagraha
ಗಾಂಧೀಜಿ ಸತ್ಯಾಗ್ರಹಕ್ಕೆ ಪುತ್ಥಳಿಬಾಯಿ ಪೀಠಿಕೆ


ನಗರದ ರಾಮಕೃಷ್ಣ ವಿವೇಕಾನಂದಾಶ್ರಮದಲ್ಲಿ ಶುಕ್ರವಾರ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪುತ್ಥಳಿಬಾಯಿ ಸತತ 21 ದಿನ ಇರುತ್ತಿದ್ದ ಉಪವಾಸಗಳು ಗಾಂಧೀಜಿಯ ಉಪವಾಸ ಸತ್ಯಾಗ್ರಹ ಹೋರಾಟಕ್ಕೆ ಪೀಠಿಕೆ ಬರೆಯಿತು. ಸತ್ಯಹರೀಶ್ಚಂದ್ರ ನಾಟಕವೂ ಗಾಂಧೀಜಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿತು ಎಂದರು.

ಶಾಲಾ, ಕಾಲೇಜಿನಲ್ಲಿ ಕಲಿಯಲಾಗದ್ದನ್ನು ಬೇಸಿಗೆ ಶಿಬಿರಗಳಲ್ಲಿ ಕಲಿಯಬಹುದಾಗಿದೆ. ಶಾಲಾ ಕಾಲೇಜುಗಳಲ್ಲಿ ಪಠ್ಯಕ್ಕೆ, ಪರೀಕ್ಷೆಗೆ ಸೀಮಿತವಾಗಿ ಕಲಿಸಲಾಗುತ್ತದೆ. ಆದರೆ, ಬೇಸಿಗೆ ಶಿಬಿರಗಳಲ್ಲಿ ಪಠ್ಯದ ಜತೆಗೆ ಬದುಕಿನ ಪರೀಕ್ಷೆಗೆ ಅಗತ್ಯವಾದ ವಿಷಯಗಳನ್ನು ಕಲಿಸಲಾಗುತ್ತದೆ. ಬೇಸಿಗೆಯ ರಜೆಯನ್ನು ವ್ಯರ್ಥ ಮಾಡುವ ಬದಲು ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಸದ್ವಿನಿಯೋಗ ಪಡಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಯಸುಧಾ ಕುಮಾರಸ್ವಾಮಿ ಮಾತನಾಡಿ, ಆಶ್ರಮದಿಂದ ಪ್ರತಿ ಬೇಸಿಗೆಯಲ್ಲಿ ಆಯೋಜಿಸುವ ಇಂತಹ ಶಿಬಿರದಿಂದ ನಗರದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಿದೆ. ಅತ್ಯಂತ ಕಡಿಮೆ ಶುಲ್ಕದೊಂದಿಗೆ ಸುತ್ತಲಿನ ಸಂಪನ್ಮೂಲ ವ್ಯಕ್ತಿಗಳಿಂದ ಬದುಕಿಗೆ ಬೇಕಾದ ಪಾಠವನ್ನು ಮಾಡಿಸಲಾಗಿದೆ ಎಂದರು.

ಆಶ್ರಮದ ಅಧ್ಯಕ್ಷ ರಾದ ಶಾರದೇಶಾನಂದ ಸ್ವಾಮೀಜಿ ಮಾತನಾಡಿ, ಶಿಬಿರ ನಡೆದ ಅವಧಿಯಲ್ಲಿ ವಿದ್ಯಾರ್ಥಿಗಳು ಮೊಬೈಲ್‌, ಲ್ಯಾಪ್‌ಟಾಪ್‌ನಿಂದ ದೂರ ಇದ್ದದ್ದೆ ಮೊದಲ ಸಾಧನೆಯಾಗಿದೆ. ಭಾಷಣ ಕಲೆ, ಆಧ್ಯಾತ್ಮ, ಪ್ರಾರ್ಥನೆ, ಧ್ಯಾನ, ರಾಷ್ಟ್ರ ನಿರ್ಮಾತೃಗಳ ಪರಿಚಯ, ಸ್ವಾಮಿ ವಿವೇಕಾನಂದರು, ರಾಮಕೃಷ್ಣರು, ಶಿಕ್ಷ ಣದ ಉದ್ದೇಶ ಮತ್ತು ಗುರಿ, ಸಾಮಾನ್ಯ ಜ್ಞಾನ, ಮಾಧ್ಯಮ ಸೇರಿದಂತೆ ಹತ್ತಾರು ವಿಷಯಗಳನ್ನು ಸಂಪನ್ಮೂಲ ವ್ಯಕ್ತಿಗಳು ಹೇಳಿದ್ದಾರೆ ಎಂದರು.

ಸಮಾರೋಪದ ನಿಮಿತ್ತ ಶಿಬಿರದ ಮಕ್ಕಳು ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರು, ಶಾರದಾದೇವಿ, ಬಸವಣ್ಣ, ಅಕ್ಕಮಹಾದೇವಿ, ಭಗತ್‌ಸಿಂಗ್‌, ಸೇರಿದಂತೆ ನಾನಾ ಮಹಾ ಪುರುಷ, ಮಹಿಳೆಯರ ವೇಷಧಾರಭಣೆ ಮಾಡಿ ನೀಡಿದ ಪ್ರದರ್ಶನ ಜನಮನ ಸೆಳೆಯಿತು.

ಶಿಬಿರಾರ್ಥಿಗಳು ಶಿಬಿರದ ಅನುಭವ ಹಂಚಿಕೊಂಡರು. ವಿವಿಧ ಶಾಲೆಗಳ 35 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ