ಆ್ಯಪ್ನಗರ

ಬಾಬರಿ ಮಸೀದಿ ಪುನರ್‌ ನಿರ್ಮಾಣಕ್ಕೆ ಆಗ್ರಹ

ಬಾಬರಿ ಮಸೀದಿ ಪುನರ್‌ ನಿರ್ಮಿಸಬೇಕು, ಧ್ವಂಸ ಮಾಡಿದ ಆರೋಪಿಗಳನ್ನು ಶಿಕ್ಷಿಸಬೇಕು ಮತ್ತು ಲಿಬರ್ಹಾನ್‌ ವರದಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಆಗ್ರಹಿಸಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಕಾರ್ಯಕರ್ತರು ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಗ್ರೇಡ್‌-2 ವೆಂಕಟಮ್ಮರಿಗೆ ಗುರುವಾರ ಮನವಿ ನೀಡಿದರು.

Vijaya Karnataka 7 Dec 2018, 5:00 am
ಹರಿಹರ : ಬಾಬರಿ ಮಸೀದಿ ಪುನರ್‌ ನಿರ್ಮಿಸಬೇಕು, ಧ್ವಂಸ ಮಾಡಿದ ಆರೋಪಿಗಳನ್ನು ಶಿಕ್ಷಿಸಬೇಕು ಮತ್ತು ಲಿಬರ್ಹಾನ್‌ ವರದಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಆಗ್ರಹಿಸಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಕಾರ್ಯಕರ್ತರು ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಗ್ರೇಡ್‌-2 ವೆಂಕಟಮ್ಮರಿಗೆ ಗುರುವಾರ ಮನವಿ ನೀಡಿದರು.
Vijaya Karnataka Web babri masjid demands rebuilding
ಬಾಬರಿ ಮಸೀದಿ ಪುನರ್‌ ನಿರ್ಮಾಣಕ್ಕೆ ಆಗ್ರಹ


ನಂತರ ಪಿಎಫ್‌ಐ ಜಿಲ್ಲಾಧ್ಯಕ್ಷ ಫಯಾಜ್‌ ಅಹ್ಮದ್‌ ಮಾತನಾಡಿ, 1992ರಲ್ಲಿ 463 ವರ್ಷ ಹಳೆಯ ಮುಸ್ಲಿಮರ ಆರಾಧನಾಲಯ ಬಾಬರಿ ಮಸೀದಿ ಧ್ವಂಸದೊಂದಿಗೆ ಭಾರತವು ಎತ್ತಿ ಹಿಡಿದಿದ್ದ ಆದರ್ಶ ಮತ್ತು ಮೌಲ್ಯಗಳೂ ಛಿದ್ರವಾದವು. ಆಗ ಸರಕಾರವು ಮೂಕ ಪ್ರೇಕ್ಷ ಕನಾಗಿತ್ತು. ಕಾನೂನುಗಳು ಬರೀ ಕಾಗದದ ಮೇಲಿನ ಬರಹವಾಗಿತ್ತು ಮತ್ತು ನ್ಯಾಯಾಂಗದ ಪರಿಣಾಮ ಶೂನ್ಯವಾಗಿತ್ತು. ಗಾಂಧೀಜಿಯವರ ಹತ್ಯೆ ನಂತರ ಈ ಧ್ವಂಸವು ಸ್ವತಂತ್ರ ಭಾರತದ ವಿರುದ್ಧದ ಬರ್ಬರ ಭಯೋತ್ಪಾದಕ ದಾಳಿಯಾಗಿತ್ತು ಎಂದರು.

ಘಟನೆ ನಡೆದು 26 ವರ್ಷಗಳಾದರೂ ರಾಷ್ಟ್ರಕ್ಕೆ ಸರಕಾರ ನೀಡಿದ್ದ ಮಸೀದಿ ಪುನರ್‌ ನಿರ್ಮಾಣದ ಭರವಸೆ ಈಡೇರಿಲ್ಲ. ಪುನರ್‌ ನಿರ್ಮಾಣ ಮತ್ತು ಅಪರಾಧಿಗಳನ್ನು ಶಿಕ್ಷಿಸುವುದು ಮಾತ್ರವೇ ಗಣರಾಜ್ಯದ ಬಗ್ಗೆ ಜನರ ನಂಬಿಕೆಯನ್ನು ಪುನಃ ಸ್ಥಾಪಿಸಲು ಇರುವ ಹಾದಿಯಾಗಿದೆ ಎಂದರು.

1961ರಲ್ಲಿ ಮಸೀದಿ ಮತ್ತು ಆವರಣದ ಮಾಲೀಕತ್ವ ಸಂಬಂಧಿಸಿದಂತೆ ದಾಖಲಿಸಲಾದ ಪ್ರಕರಣಗಳು ಇಂದಿಗೂ ಇತ್ಯರ್ಥವಾಗಿಲ್ಲ. ನ್ಯಾಯದ ವಿಳಂಬವೇ ನ್ಯಾಯದ ನಿರಾಕರಣೆಯಾಗಿದೆ. ಹೀಗಾಗಿ ಸುಪ್ರೀಂ ಕೋರ್ಟ್‌ ಪ್ರಕರಣವನ್ನು ಬೇಗನೆ ಇತ್ಯರ್ಥಗೊಳಿಸಬೇಕು. ಮಸೀದಿ ಪುನರ್‌ ನಿರ್ಮಿಸುವ ಮೂಲಕ ನ್ಯಾಯ ಸ್ಥಾಪಿಸಬೇಕೆಂದು ಆಗ್ರಹಿಸಿದರು.

ಪದಾಧಿಕಾರಿಗಳಾದ ಸಮಿಉಲ್ಲಾ, ಅಜಹರ್‌, ಸೈಯದ್‌ ಅಶ್ಫಾಕ್‌, ರಫೀಕ್‌, ಜಬಿ ಬೇಗ್‌ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ