ಆ್ಯಪ್ನಗರ

ಬ್ಯಾಂಕ್‌ ಒಳ ನುಗ್ಗಿ 6.62 ಲಕ್ಷ ರೂ. ಕಳವು

ತಾಲೂಕಿನ ಬೆಳ್ಳೂಡಿ ಗ್ರಾಮದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನಲ್ಲಿ ಮಂಗಳವಾರ ತಡರಾತ್ರಿ 6.62 ಲಕ್ಷ ರೂ. ಕಳವು ಮಾಡಲಾಗಿದೆ.

Vijaya Karnataka 7 Feb 2019, 5:00 am
ಹರಿಹರ : ತಾಲೂಕಿನ ಬೆಳ್ಳೂಡಿ ಗ್ರಾಮದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನಲ್ಲಿ ಮಂಗಳವಾರ ತಡರಾತ್ರಿ 6.62 ಲಕ್ಷ ರೂ. ಕಳವು ಮಾಡಲಾಗಿದೆ.
Vijaya Karnataka Web bank deposits rs 6 62 lakh stolen
ಬ್ಯಾಂಕ್‌ ಒಳ ನುಗ್ಗಿ 6.62 ಲಕ್ಷ ರೂ. ಕಳವು


ಬ್ಯಾಂಕ್‌ನ ಸೈರನ್‌ಅನ್ನು ಹಾಗೂ ಸಿಸಿ ಕ್ಯಾಮೆರಾ ಸಂಪರ್ಕ ಕಡಿತಗೊಳಿಸಿದ ಕಳ್ಳರ ತಂಡವು ಬ್ಯಾಂಕ್‌ನ ಟ್ರಜರಿಯಲ್ಲಿದ್ದ 6,62,584 ರೂ. ನಗದು ಕದ್ದಿದ್ದಾರೆ. ಇನ್ನೊಂದು ಟ್ರಜರಿ ಒಡೆಯಲು ವಿಫಲ ಯತ್ನ ನಡೆಸಿದ್ದಾರೆ.

2 ಕೋಟಿ ಮೌಲ್ಯದ ಒಡವೆ ಸೇಫ್‌: ಫೈರ್‌ ಪ್ರೂಫ್‌ ಟ್ರಜರಿಯಲ್ಲಿ ಗ್ರಾಹಕರ ಬಂಗಾರದ ಒಡವೆಗಳಿದ್ದವು. ಅಂದಾಜು ಎರಡು ಕೋಟಿ ರೂ.ನಷ್ಟು ಬಂಗಾರದ ಆಭರಣಗಳನ್ನು ಇದರಲ್ಲಿಡಲಾಗಿತ್ತು. ಕಳ್ಳರು ಗ್ಯಾಸ್‌ ಕಟ್ಟರ್‌ನಿಂದ ಒಡೆಯಲು ಯತ್ನಿಸಿದ್ದು, ವಿಫಲರಾಗಿದ್ದಾರೆ. ಇದರಿಂದ ಎರಡು ಕೋಟಿ ರೂ. ಮೌಲ್ಯದ ಒಡವೆಗಳು ಬಚಾವ್‌ ಆಗಿವೆ.

ಬ್ಯಾಂಕ್‌ ವ್ಯವಸ್ಥಾಪಕ ಶ್ರೀಧರ್‌ ಹಾಗೂ ಸಿಬ್ಬಂದಿ ಬೆಳಗ್ಗೆ 10 ಗಂಟೆಗೆ ಬ್ಯಾಂಕ್‌ಗೆ ಬಂದಾಗಲೇ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ನಂತರ ವಿಷಯ ತಿಳಿದ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಶ್ವಾನ ದಳ, ಬೆರಳಚ್ಚು ತಜ್ಞರು ಪರಿಶೀಲಿಸಿದರು.

ಸ್ಥಳಕ್ಕೆ ಎಸ್ಪಿ ಆರ್‌. ಚೇತನ್‌, ಹೆಚ್ಚುವರಿ ಎಸ್ಪಿ ಉದೇಶ್‌, ಡಿವೈಎಸ್ಪಿ ಮಂಜುನಾಥ್‌ ಗಂಗಲ್‌, ಸಿಪಿಐಗಳಾದ ಗುರುಸ್ವಾಮಿ, ಲಕ್ಷ ್ಮಣ್‌ ನಾಯಕ್‌, ಗ್ರಾಮಾಂತರ ಪಿಎಸ್‌ಐ ರವಿಕುಮಾರ್‌ ಡಿ., ರಾಘವೇಂದ್ರ, ಯಾಸೀನ್‌ ಉಲ್ಲಾ, ಇಲಿಯಾಸ್‌ ಇತರರು ಭೇಟಿ ನೀಡಿ ಪರಿಶೀಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ