ದಾವಣಗೆರೆ : ನಗರದ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ವಿದ್ಯುತ್ ಲೈನ್ಗೆ ಮರಗಳು ತಾಕುತ್ತವೆ ಎಂದು ಬೆಸ್ಕಾಂ ನೌಕರರು ಪರಿಸರ ಮುನ್ನಾ ದಿನ ಮರಗಳ ರಂಬೆ, ಕೊಂಬೆಗಳ ಕತ್ತರಿಸಿರುವುದಕ್ಕೆ ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಅರಣ್ಯ ಇಲಾಖೆಯಲ್ಲಿ ದೂರು ದಾಖಲಿಸಲಾಗಿದೆ. ಜತೆಗೆ ತಪ್ಪಿತಸ್ಥ ನೌಕರರ ವಿರುದ್ಧ ಕ್ರಮಕ್ಕೂ ಬೆಸ್ಕಾಂಗೆ ಮನವಿ ಮಾಡಲಾಗಿದೆ.
ಇಲ್ಲಿನ ಶಾಮನೂರು ಬಳಿಯ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ರಸ್ತೆ ಬದಿಯಲ್ಲಿ ಒಂದಿಷ್ಟು ಮರಗಳು ಹುಲುಸಾಗಿ ಬೆಳೆದ ನಿಂತಿದ್ದವು. ಸಮೃದ್ಧಿಯಗಿ ನೆರಳು ಕೊಡುತ್ತಿದ್ದವು. ಈ ಬಡಾವಣೆಯ ಎರಡು ರಸ್ತೆಗಳಲ್ಲಿ ಪರಿಸರ ದಿನಾಚರಣೆ ಮುನ್ನಾ ದಿನವಾದ ಮಂಗಳವಾರ ಸಂಜೆ ಬೆಸ್ಕಾಂ ನೌಕರರು ಮರಗಳ ಕೊಂಬೆಗಳು ವಿದ್ಯುತ್ ಲೈನ್ಗೆ ತಾಕಿ ಅವಘಡ ಸಂಭವಿಸುತ್ತದೆ ಎನ್ನುವ ಕಾರಣಕ್ಕೆ ಮನ ಬಂದಂತೆ ಕತ್ತರಿಸಿ ಹಾಕಿದ್ದಾರೆ. ಕೆಲ ಮರಗಳನ್ನು ಅರ್ಧಕ್ಕೆ ಕತ್ತರಿಸಿದ್ದು ಅವು ಬೆಳೆಯುವುದಿಲ್ಲ, ಸತ್ತು ಹೋದಂತೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಡಾವಣೆಯ ರಸ್ತೆಗಳಲ್ಲಿ ಹೊಂಗೆ, ಬೇವು, ಸರಬು ರೀತಿಯ ಅನೇಕ ಮರಗಳಿವೆ. ಇದರಲ್ಲಿ ಅನೇಕ ಹೊಂಗೆ ಮರಗಳನ್ನು ಕಡಿಯಲಾಗಿದೆ. ಕೊಂಬೆಗಳ ತುದಿಯನ್ನು ಕತ್ತರಿಸಿದ್ದರೆ ಸಾಕಿತ್ತು. ಆದರೆ ಇಡೀ ಕೊಂಬೆಗಳನ್ನೇ ಕತ್ತರಿಸಿದ್ದಾರೆ. ಕೆಲ ಮರಗಳನ್ನು ಅರ್ಧಕ್ಕೆ ಕತ್ತರಿಸಿದ್ದು ಇವು ಇನ್ನು ಚಿಗುರುವುದು ಅನುಮಾನ. ಹಾಗಾಗಿ ಈ ಕುರಿತು ಅರಣ್ಯ ಇಲಾಖೆಗೆ ದೂರು ದಾಖಲಿಸಲಾಗಿದೆ. ಜತೆಗೆ ಈ ರೀತಿ ಅವೈಜ್ಞಾನಿಕವಾಗಿ ಗಿಡಗಳನ್ನು ಕತ್ತರಿಸಿರುವ ನೌಕರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ತಿಳಿಸಿದ್ದಾರೆ.
ಇಲ್ಲಿನ ಶಾಮನೂರು ಬಳಿಯ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ರಸ್ತೆ ಬದಿಯಲ್ಲಿ ಒಂದಿಷ್ಟು ಮರಗಳು ಹುಲುಸಾಗಿ ಬೆಳೆದ ನಿಂತಿದ್ದವು. ಸಮೃದ್ಧಿಯಗಿ ನೆರಳು ಕೊಡುತ್ತಿದ್ದವು. ಈ ಬಡಾವಣೆಯ ಎರಡು ರಸ್ತೆಗಳಲ್ಲಿ ಪರಿಸರ ದಿನಾಚರಣೆ ಮುನ್ನಾ ದಿನವಾದ ಮಂಗಳವಾರ ಸಂಜೆ ಬೆಸ್ಕಾಂ ನೌಕರರು ಮರಗಳ ಕೊಂಬೆಗಳು ವಿದ್ಯುತ್ ಲೈನ್ಗೆ ತಾಕಿ ಅವಘಡ ಸಂಭವಿಸುತ್ತದೆ ಎನ್ನುವ ಕಾರಣಕ್ಕೆ ಮನ ಬಂದಂತೆ ಕತ್ತರಿಸಿ ಹಾಕಿದ್ದಾರೆ. ಕೆಲ ಮರಗಳನ್ನು ಅರ್ಧಕ್ಕೆ ಕತ್ತರಿಸಿದ್ದು ಅವು ಬೆಳೆಯುವುದಿಲ್ಲ, ಸತ್ತು ಹೋದಂತೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಡಾವಣೆಯ ರಸ್ತೆಗಳಲ್ಲಿ ಹೊಂಗೆ, ಬೇವು, ಸರಬು ರೀತಿಯ ಅನೇಕ ಮರಗಳಿವೆ. ಇದರಲ್ಲಿ ಅನೇಕ ಹೊಂಗೆ ಮರಗಳನ್ನು ಕಡಿಯಲಾಗಿದೆ. ಕೊಂಬೆಗಳ ತುದಿಯನ್ನು ಕತ್ತರಿಸಿದ್ದರೆ ಸಾಕಿತ್ತು. ಆದರೆ ಇಡೀ ಕೊಂಬೆಗಳನ್ನೇ ಕತ್ತರಿಸಿದ್ದಾರೆ. ಕೆಲ ಮರಗಳನ್ನು ಅರ್ಧಕ್ಕೆ ಕತ್ತರಿಸಿದ್ದು ಇವು ಇನ್ನು ಚಿಗುರುವುದು ಅನುಮಾನ. ಹಾಗಾಗಿ ಈ ಕುರಿತು ಅರಣ್ಯ ಇಲಾಖೆಗೆ ದೂರು ದಾಖಲಿಸಲಾಗಿದೆ. ಜತೆಗೆ ಈ ರೀತಿ ಅವೈಜ್ಞಾನಿಕವಾಗಿ ಗಿಡಗಳನ್ನು ಕತ್ತರಿಸಿರುವ ನೌಕರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ತಿಳಿಸಿದ್ದಾರೆ.