ಆ್ಯಪ್ನಗರ

ಹರಿಹರದ ವೀಳ್ಯೆದೆಲೆ ವ್ಯಾಪಾರಿಗೆ ಹಲ್ಲೆಗೈದು ₹4.69 ಲಕ್ಷ ದರೋಡೆ; ಆರೋಪಿಗಳ ಸುಳಿವೇ ಇಲ್ಲ!

ರಸ್ತೆ ಮಧ್ಯೆ ಬೆಳ್ಳೂಡಿ- ರಾಮತೀರ್ಥ ನಡುವಿನ ಸೇತುವೆ ಬಳಿ ವಿಶ್ವನಾಥರ ಬಳಿ ಏಕಾಏಕಿ ಬಂದ ಒಬ್ಬ ಅಪರಿಚಿತ ವ್ಯಕ್ತಿ ಬೈಕ್‌ ನಿಲ್ಲಿಸಿ, ಬೈಕ್‌ನಿಂದ ಇಳಿ ಎಂದು ದಬಾಯಿಸಿದ್ದಾನೆ. ಕೆಲ ಕ್ಷಣದಲ್ಲೆಅಕ್ಕಪಕ್ಕ ಕತ್ತಲಲ್ಲಿದ್ದ ಇನ್ನೂ ನಾಲ್ವರು ಬಂದು ಹಣ ಇರುವ ಬ್ಯಾಗ್‌ ಕೊಡು ಎಂದು ಬ್ಯಾಗ್‌ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ವಿಶ್ವನಾಥ್‌ ಬ್ಯಾಗ್‌ ಕೊಡಲಿಲ್ಲ. ನಂತರ ಹಿಂದೆಯೆ ಬರುತ್ತಿದ್ದ ಜಗದೀಶರ ಬೈಕ್‌ ಬಳಿ ತೆರಳಿದ ಇಬ್ಬರು ಬೈಕ್‌ಗೆ ಒದ್ದು ಬೀಳಿಸಿದ್ದಾರೆ.

Vijaya Karnataka 20 Nov 2021, 9:08 am
ಹರಿಹರ: ತಾಲೂಕಿನ ಬೆಳ್ಳೂಡಿ- ರಾಮತೀರ್ಥ ಮಧ್ಯೆ ವೀಳ್ಯೆದೆಲೆ ವ್ಯಾಪಾರಿಯಿಂದ 4.69 ಲಕ್ಷ ರೂ. ದರೋಡೆ ಮಾಡಿದ್ದ ಪ್ರಕರಣದ ಆರೋಪಿಗಳ ಸುಳಿವು ಇನ್ನೂ ದೊರೆತಿಲ್ಲ. ಪೊಲೀಸರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.
Vijaya Karnataka Web assaulted


ತಾಲೂಕಿನ ರಾಮತೀರ್ಥ ಗ್ರಾಮದ ವಿಶ್ವನಾಥ ಕೆ.ಪಿ., ಜಗದೀಶ ಹಾಗೂ ನಾಗೇನಹಳ್ಳಿ ಗ್ರಾಮದ ಮಹಾಂತೇಶ್‌ ಎಂಬುವರು ವೀಳ್ಯೆದೆಲೆ ವ್ಯಾಪಾರವನ್ನು ಪಾಲುದಾರಿಕೆಯಲ್ಲಿ ಮಾಡುತ್ತಿದ್ದಾರೆ. ರೈತರಿಂದ ಖರೀದಿ ಮಾಡಿದ ವೀಳ್ಯೆದೆಲೆಯನ್ನು ಬೆಂಗಳೂರು ಸುತ್ತಲ ಪ್ರದೇಶಗಳಲ್ಲಿ ಮಾರಾಟ ಮಾಡಿ ವಾರಕ್ಕೊಮ್ಮೆ ತೆರಳಿ ಹಣ ಸಂಗ್ರಹಿಸುತ್ತಿದ್ದರು. ಅದೇ ರೀತಿ ನ.12ರಂದು ಮಹಾಂತೇಶ್‌ರವರ ಕಾರಿನಲ್ಲಿ ಮೂವರೂ ಬೆಂಗಳೂರು ಕಡೆಗೆ ತೆರಳಿದ್ದಾರೆ. ಅಲ್ಲಿ ಮೂರು ಜನ ಮೂರು ಕಡೆ ಹಣ ಸಂಗ್ರಹಕ್ಕೆ ಪ್ರತ್ಯೇಕವಾಗಿ ತೆರಳಿದ್ದಾರೆ. ನ.13ರಂದು ವಿಶ್ವನಾಥ ಮತ್ತು ಜಗದೀಶ್‌ ಕ್ರಮವಾಗಿ 3.30 ಲಕ್ಷ ರೂ. ಹಾಗೂ 4.69 ಲಕ್ಷ ರೂ. ಸಂಗ್ರಹಿಸಿ ಅಂದು ರಾತ್ರಿ 10.30ಕ್ಕೆ ಬೆಂಗಳೂರಿನಿಂದ ಬಸ್‌ ಮೂಲಕ ಹರಿಹರಕ್ಕೆ ಹೊರಟಿದ್ದಾರೆ.

ನ.14ರ ಬೆಳಗಿನ ಜಾವ 3.45ಕ್ಕೆ ಹೊರವಲಯದ ಬೈಪಾಸ್‌ನಲ್ಲಿ ಬಸ್‌ನಿಂದ ಇಳಿದಿದ್ದಾರೆ. ಸಮೀಪದ ಡಾಬಾ ಬಳಿ ನಿಲ್ಲಿಸಿದ್ದ ತಮ್ಮ ಪ್ರತ್ಯೇಕ ಬೈಕ್‌ಗಳಲ್ಲಿ ರಾಮತೀರ್ಥಕ್ಕೆ ತೆರಳಿದ್ದಾರೆ. ಆದರೆ ರಸ್ತೆ ಮಧ್ಯೆ ಬೆಳ್ಳೂಡಿ- ರಾಮತೀರ್ಥ ನಡುವಿನ ಸೇತುವೆ ಬಳಿ ವಿಶ್ವನಾಥರ ಬಳಿ ಏಕಾಏಕಿ ಬಂದ ಒಬ್ಬ ಅಪರಿಚಿತ ವ್ಯಕ್ತಿ ಬೈಕ್‌ ನಿಲ್ಲಿಸಿ, ಬೈಕ್‌ನಿಂದ ಇಳಿ ಎಂದು ದಬಾಯಿಸಿದ್ದಾನೆ. ಕೆಲ ಕ್ಷಣದಲ್ಲೆಅಕ್ಕಪಕ್ಕ ಕತ್ತಲಲ್ಲಿದ್ದ ಇನ್ನೂ ನಾಲ್ವರು ಬಂದು ಹಣ ಇರುವ ಬ್ಯಾಗ್‌ ಕೊಡು ಎಂದು ಬ್ಯಾಗ್‌ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ವಿಶ್ವನಾಥ್‌ ಬ್ಯಾಗ್‌ ಕೊಡಲಿಲ್ಲ. ನಂತರ ಹಿಂದೆಯೆ ಬರುತ್ತಿದ್ದ ಜಗದೀಶರ ಬೈಕ್‌ ಬಳಿ ತೆರಳಿದ ಇಬ್ಬರು ಬೈಕ್‌ಗೆ ಒದ್ದು ಬೀಳಿಸಿದ್ದಾರೆ.
ಬೈಕ್‌ನಲ್ಲಿ ತೆರಳುತ್ತಿದ್ದ ಯುವಕ-ಯುವತಿ ಮೇಲೆ ಹಲ್ಲೆ; ಮಂಗಳೂರಿನಲ್ಲಿ 6 ಮಂದಿ ಗೂಂಡಾಗಳ ಬಂಧನ
ನಂತರ ಜಗದೀಶರ ಕಣ್ಣಿಗೆ ಖಾರದ ಪುಡಿ ಎರಚಿ 4.69 ಲಕ್ಷ ರೂ. ಇದ್ದ ಬ್ಯಾಗ್‌ ಹಾಗೂ 20 ಸಾವಿರ ರೂ. ಮೌಲ್ಯದ ಮೊಬೈಲ್‌ ಫೋನ್‌ ಕಿತ್ತುಕೊಂಡು, ಬಿಳಿ ಬಣ್ಣದ ಕಾರಿನಲ್ಲಿ ದರೋಡೆಕೋರರು ಪರಾರಿಯಾಗಿದ್ದಾರೆ. ದರೋಡೆಕೋರರ ಜತೆಗಿನ ಸಂಘರ್ಷದಲ್ಲಿ ಗಾಯಗೊಂಡಿದ್ದ ವಿಶ್ವನಾಥ ಹಾಗೂ ಜಗದೀಶ್‌ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪ್ರಕರಣ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ಘಟನೆಯಿಂದ ಸುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ನ.17ರಂದು ಸ್ಥಳಕ್ಕೆ ಎಸ್ಪಿ ರಿಷ್ಯಂತ್‌, ಡಿವೈಎಸ್ಪಿ ಕನ್ನಿಕಾ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ