ಆ್ಯಪ್ನಗರ

ನನ್ನ ಯಾಕೆ ಅರೆಸ್ಟ್‌ ಮಾಡ್ತಾರೆ..? ನಾನೇನು ಸಮಾಜಘಾತುಕ ಶಕ್ತಿನಾ..? ಎಂಎಲ್‌ಎ ಸಂಗಮೇಶ್ವರ್

ಶಾಸಕ ಸಂಗಮೇಶ್ವರ್‌ ಕುಟುಂಬ ಪಟ್ಟಣದಲ್ಲಿ ಕಾಣದೇ ಇರುವುದರಿಂದ ಕೆಲವು ಕಿಡಿಗೇಡಿಗಳು ಸಂಗಮೇಶ್ವರ್‌ರನ್ನ ಬಂಧಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿಬಿಟ್ಟಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಸಂಗಮೇಶ್ವರ್‌ ಪ್ರತ್ಯಕ್ಷವಾಗಿ ವಿಡಿಯೋ ಹರಿಬಿಟ್ಟಿದ್ದಾರೆ.

Vijaya Karnataka Web 3 Mar 2021, 10:28 pm
ಭದ್ರಾವತಿ: ಕಬ್ಬಡ್ಡಿ ಪಂದ್ಯಾವಳಿ ವಿಜೇತರನ್ನ ಘೋಷಣೆ ಮಾಡಿದ ಸಂದರ್ಭ ಜೈ ಶ್ರೀರಾಮ್‌ ಘೋಷಣೆ ಹಾಕಿದ ಬಿಜೆಪಿ ಮುಖಂಡರನ್ನ ಥಳಿಸಿದ ಪ್ರಕರಣದಲ್ಲಿ ಭದ್ರಾವತಿ ಶಾಸಕ ಬಿಕೆ ಸಂಗಮೇಶ್ವರ್‌ ಹಾಗೂ ಆತನ ಬೆಂಬಲಿಗರ ಮೇಲೆ ಪ್ರಕರಣ ದಾಖಲಾಗಿದೆ.
Vijaya Karnataka Web bhadravathi mla sangameshwar clarifies on assault case
ನನ್ನ ಯಾಕೆ ಅರೆಸ್ಟ್‌ ಮಾಡ್ತಾರೆ..? ನಾನೇನು ಸಮಾಜಘಾತುಕ ಶಕ್ತಿನಾ..? ಎಂಎಲ್‌ಎ ಸಂಗಮೇಶ್ವರ್


ಭದ್ರಾವತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು ಬಿಗುವಿನ ವಾತಾರವರಣ ನಿರ್ಮಾಣವಾಗಿದೆ. ಈ ಮಧ್ಯೆ ಶಾಸಕ ಸಂಗಮೇಶ್ವರ್‌ ಕುಟುಂಬ ಪಟ್ಟಣದಲ್ಲಿ ಕಾಣದೇ ಇರುವುದರಿಂದ ಕೆಲವು ಕಿಡಿಗೇಡಿಗಳು ಸಂಗಮೇಶ್ವರ್‌ರನ್ನ ಬಂಧಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿಬಿಟ್ಟಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಸಂಗಮೇಶ್ವರ್‌ ದಿಢೀರ‌ನೆ ಪ್ರತ್ಯಕ್ಷವಾಗಿ ವಿಡಿಯೋ ಹರಿಬಿಟ್ಟಿದ್ದಾರೆ.

ಕೆಲವು ಕಿಡಿಗೇಡಿಗಳು ಸಂಗಮೇಶ್ವರ್‌ ಅರೆಸ್ಟ್‌ ಆಗಿದ್ದಾರೆಂದು ಸುದ್ದಿ ಹರಿಬಿಟ್ಟಿದ್ದಾರೆ. ನನಗ್ಯಾಕೆ ಅರೆಸ್ಟ್‌ ಮಾಡುತ್ತಾರೆ..? ನಾನೇನು ಸಮಾಜ ಘಾತುಕ ಶಕ್ತಿನಾ...? ಅಥವಾ ಏನಾದರೂ ಕೆಟ್ಟದ್ದು ಮಾಡಿದ್ದೇನಾ..? ಯಾಕ್‌ ಅರೆಸ್ಟ್ ಮಾಡ್ತಾರೆ ನನ್ನನ್ನ..? ನಾನ್ಯಾವತ್ತೂ ಜನಪರ ಹೋರಾಟ ಮಾಡಿಕೊಂಡು ಬಂದವನು. ಈ ಭ್ರಷ್ಟ ಬಿಜೆಪಿ ವಿರುದ್ಧ ಹೋರಾಟ ಮಾಡಿದ್ದು ತಪ್ಪಾ..? ಇವರ ಅನಾಚಾರ ಹಾಗೂ ಅತ್ಯಾಚಾರ ತಿಳಿಸಿದ್ದು ತಪ್ಪಾ..? ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸೋದು ತಪ್ಪಾ..? ಸ್ನೇಹಪೂರ್ವಕವಾಗಿ ಕ್ರೀಡಾಕೂಟ ನಡೆಸಿದ್ದೇ ತಪ್ಪಾ ಎಂದು ಜನರನ್ನ ಪ್ರಶ್ನಿಸಿದ್ದಾರೆ. ನನಗ್ಯಾರೂ ಅರೆಸ್ಟ್‌ ಮಾಡೋದಕ್ಕೆ ಆಗೋದಿಲ್ಲ..! ನಾನು ಅರಾಮಾಗಿ ಶಾಸಕರ ಭವನದಲ್ಲಿ ಇದ್ದೀನಿ. ಸದನದಲ್ಲಿ ಚರ್ಚೆ ಮಾಡೋದಕ್ಕೆ ಸಿದ್ಧವಾಗಿ ಬಂದಿದ್ದೇನೆ. ಯಾರೂ ಗಾಳಿ ಸುದ್ದಿಗಳಿಗೆ ಕಿವಿಕೊಡಬೇಡಿ ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ.

ಫೆ.27 ಮತ್ತು 28 ರಂದು ಭದ್ರಾವತಿಯ ಕನಕ ಮಂಟಪದಲ್ಲಿ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಬಿಜೆಪಿ ಮುಖಂಡರಿದ್ದ ತಂಡ ಜೈ ಶ್ರೀರಾಮ್‌ ಘೋಷಣೆ ಮಾಡಿದ ಹಿನ್ನೆಲೆ ಎದುರಾಳಿ ತಂಡದವರು ಥಳಿಸಿದ್ದರು ಹಾಗೂ ಅವರು ಭದ್ರಾವತಿ ಕಾಂಗ್ರೆಸ್‌ ಶಾಸಕ ಸಂಗಮೇಶ್ವರ್‍ ಕಡೆಯವರು ಎನ್ನಲಾಗಿತ್ತು. ಪರಸ್ಪರ ದೋಷಾರೋಪ ದೂರುಗಳು ದಾಖಲಾಗಿವೆ ಹಾಗೂ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ