ಬಿಜೆಪಿ- ಕಾಂಗ್ರೆಸ್ ನಾಮಪತ್ರ ಸಲ್ಲಿಕೆ
ಲೋಕಸಭೆ ಚುನಾವಣೆಗೆ ಜಿಲ್ಲೆಯಲ್ಲಿ 28 ಮಂದಿ ಕಣಕ್ಕಿಳಿಯಲು ನಾಮಪತ್ರ ಸಲ್ಲಿಸಿದ್ದಾರೆ. ಕಡೇ ದಿನ ಗುರುವಾರ ನಾಮಪತ್ರಗಳ ಸುರಿಮಳೆ ಸುರಿದಿದ್ದು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಸೇರಿ 13 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಆರಂಭ ದಿನದಿಂದ ಕಡೇ ದಿನದವರೆಗೂ 28 ಮಂದಿ 36 ನಾಮಪತ್ರ ಸಲ್ಲಿಸಿದ್ದಾರೆ.
Vijaya Karnataka 5 Apr 2019, 5:00 am
ದಾವಣಗೆರೆ : ಲೋಕಸಭೆ ಚುನಾವಣೆಗೆ ಜಿಲ್ಲೆಯಲ್ಲಿ 28 ಮಂದಿ ಕಣಕ್ಕಿಳಿಯಲು ನಾಮಪತ್ರ ಸಲ್ಲಿಸಿದ್ದಾರೆ. ಕಡೇ ದಿನ ಗುರುವಾರ ನಾಮಪತ್ರಗಳ ಸುರಿಮಳೆ ಸುರಿದಿದ್ದು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಸೇರಿ 13 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಆರಂಭ ದಿನದಿಂದ ಕಡೇ ದಿನದವರೆಗೂ 28 ಮಂದಿ 36 ನಾಮಪತ್ರ ಸಲ್ಲಿಸಿದ್ದಾರೆ.
ಏ.5 ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ಏ.8 ಸೋಮವಾರ ಉಮೇದುವಾರಿಕೆ ಹಿಂಪಡೆಯಲು ಕಡೇ ದಿನವಾಗಿದ್ದು ಯಾರಾರಯರು ಹಿಂಪಡೆಯಲಿದ್ದಾರೆ ಎನ್ನುವುದರ ಮೇಲೆ ಕಣದ ಕಲಿಗಳು ಯಾರು ಎನ್ನುವುದು ನಿರ್ಧಾರ ಆಗಲಿದೆ. ಕಳೆದ 2014 ರ ಚುನಾವಣೆಯಲ್ಲಿ 18 ಮಂದಿ ಕಣದಲ್ಲಿದ್ದರು. ಈ ಬಾರಿ ಎಷ್ಟು ಮಂದಿ ಅಖಾಡದಲ್ಲಿ ಉಳಿಯಲಿದ್ದಾರೆ ಎನ್ನುವುದು ಸ್ಪಷ್ಟವಾಗಲಿದೆ.
ರಂಗೇರಿದ ಕಣ
ಜಿಲ್ಲೆಯಲ್ಲಿ ಪಾರಂಪರಿಕವಾಗಿ ಪರಸ್ಪರ ಎದುರಾಳಿಯಾಗಿ ಕಾದಾಡಿಕೊಂಡು ಬಂದಿದ್ದ ಕಾಂಗ್ರೆಸ್ ಮತ್ತು ಬಿಜೆಪಿಯ ಪೈಲ್ವಾನರುಗಳು ನಾಮಪತ್ರ ಸಲ್ಲಿಸಿದ್ದು ಕುಸ್ತಿಗೆ ಅಖಾಡ ಸಿದ್ಧವಾಗಿದೆ. ಕಣಕ್ಕಿಳಿದ ಮೊದಲ ದಿನವೇ ಪರಸ್ಪರ ಆರೋಪ, ಪ್ರತ್ಯಾರೋಪ, ಛೇಡಿಕೆ ಶುರುವಾಗಿದ್ದು ಚುನಾವಣೆ ರಂಗು ಪಡೆದುಕೊಂಡಿದೆ.
ದಾವಣಗೆರೆ ಲೋಕಸಭೆ ಕಣದಲ್ಲಿ ಈವರೆಗೂ ಕೇವಲ ಬಿಜೆಪಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಕಾಂಗ್ರೆಸ್ ಟಿಕೆಟ್ ಗೊಂದಲದಿಂದಾಗಿ ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಎರಡೂ ಪಕ್ಷದ ಕಲಿಗಳು ಸಿದ್ಧವಾಗಿದ್ದು ಮೊದಲ ದಿನವೇ ಕಣವೂ ಖದರ್ ಪಡೆದುಕೊಂಡಿದೆ. ಬಿಜೆಪಿ ನಾಯಕರು ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಹರಿಹಾಯ್ದು ಟೀಕೆ, ಛೇಡಿಕೆ ಮೂಲಕ ಕೆಣಕಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿಯೇ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಬಿಜೆಪಿ ಗೆಲುವಿನ ಹೇಳಿಕೆಗೆ ಪಂಚ್ ನೀಡಿದ್ದು , ಚುನಾವಣೆ ನಂತರ ಯಡಿಯೂರಪ್ಪ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲಿ ಎಂದು ಚಾಟಿ ಬೀಸಿದ್ದಾರೆ. ಬಿಜೆಪಿಯ ಇಂದಿನ ಪ್ರಚಾರದಲ್ಲಿ ಅದೇ ಶಾಮನೂರು ಕುಟುಂಬ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ಕೂಡ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಕಾಂಗ್ರೆಸ್ ಹೇಗೆ ಪ್ರತಿಕ್ರಿಯೆ ನೀಡಲಿದೆ, ಯಾರಾರಯರು ಯಾವ ಅಸ್ತ್ರ ಪ್ರಯೋಗಿಸಲಿದ್ದಾರೆ ಕಾದು ನೋಡಬೇಕಿದೆ.
ತ್ಯಾಗಕ್ಕೆ ಧನ್ಯವಾದಗಳು
ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ನರೇಂದ್ರಮೋದಿ ಮತ್ತೆ ಪ್ರಧಾನಿ ಆಗಬೇಕು ಎಂದು ಮಹಾಘಟಬಂಧನ್ನಿಂದ ಹೊರಗಿದ್ದಾರೆ. ಹಾಗೆ ದಾವಣಗೆರೆಯಲ್ಲಿಯೂ ಬಿಜೆಪಿ ಗೆಲ್ಲಬೇಕು ನರೇಂದ್ರ ಮೋದಿ ಆಗಬೇಕು ಎಂದು ಇಬ್ಬರು ನಾಯಕರು ತ್ಯಾಗ ಮಾಡಿದ್ದಾರೆ, ಆ ತ್ಯಾಗಕ್ಕೆ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಆಯನೂರು ಮಂಜುನಾಥ್ ಪರೋಕ್ಷವಾಗಿ ಶಾಮನೂರು ಕುಟುಂಬದ ಕಾಲೆಳೆದರು.
ಮೋದಿ- ರಾಹುಲ್ ಘೋಷಣೆ ಮುಜುಗರ
ಕಾಂಗ್ರೆಸ್ನ ಮೆರವಣಿಗೆ ಡಿಸಿ ಕಚೇರಿಗೆ ಬಂದ ವೇಳೆ ಬಿಜೆಪಿಯ ಕೆಲ ಕಾರ್ಯಕರ್ತರು ಮೋದಿ...ಮೋದಿ ಎಂದು ಘೋಷಣೆ ಕೂಗಿದರು. ಆಗ ಕೆಲ ಕಾಂಗ್ರೆಸ್ ಕಾರ್ಯಕರ್ತರು ಮುಜುಗರಕ್ಕೆ ಒಳಗಾದರು. ಬಿಜೆಪಿ ಕಾರ್ಯಕರ್ತರು ಮೋದಿ ಎಂದು ಕೂಗಿದಾಗ ಆಗ್ತಾರೆ ಬೂದಿ ಎಂದು ಪ್ರತಿ ಘೋಷಣೆ ಕೂಗಿದರು. ಆ ನಂತರ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಡಿಸಿ ಕಚೇರಿಗೆ ಆಗಮಿಸಿದ ವೇಳೆಗೆ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್...ರಾಹುಲ್ ಎಂದು ಕೂಗಿದ್ದರಿಂದ ಅವರು ಕೂಡ ಮುಜುಗರಕ್ಕೆ ಒಳಗಾದರು.
ಏ.5 ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ಏ.8 ಸೋಮವಾರ ಉಮೇದುವಾರಿಕೆ ಹಿಂಪಡೆಯಲು ಕಡೇ ದಿನವಾಗಿದ್ದು ಯಾರಾರಯರು ಹಿಂಪಡೆಯಲಿದ್ದಾರೆ ಎನ್ನುವುದರ ಮೇಲೆ ಕಣದ ಕಲಿಗಳು ಯಾರು ಎನ್ನುವುದು ನಿರ್ಧಾರ ಆಗಲಿದೆ. ಕಳೆದ 2014 ರ ಚುನಾವಣೆಯಲ್ಲಿ 18 ಮಂದಿ ಕಣದಲ್ಲಿದ್ದರು. ಈ ಬಾರಿ ಎಷ್ಟು ಮಂದಿ ಅಖಾಡದಲ್ಲಿ ಉಳಿಯಲಿದ್ದಾರೆ ಎನ್ನುವುದು ಸ್ಪಷ್ಟವಾಗಲಿದೆ.
ರಂಗೇರಿದ ಕಣ
ಜಿಲ್ಲೆಯಲ್ಲಿ ಪಾರಂಪರಿಕವಾಗಿ ಪರಸ್ಪರ ಎದುರಾಳಿಯಾಗಿ ಕಾದಾಡಿಕೊಂಡು ಬಂದಿದ್ದ ಕಾಂಗ್ರೆಸ್ ಮತ್ತು ಬಿಜೆಪಿಯ ಪೈಲ್ವಾನರುಗಳು ನಾಮಪತ್ರ ಸಲ್ಲಿಸಿದ್ದು ಕುಸ್ತಿಗೆ ಅಖಾಡ ಸಿದ್ಧವಾಗಿದೆ. ಕಣಕ್ಕಿಳಿದ ಮೊದಲ ದಿನವೇ ಪರಸ್ಪರ ಆರೋಪ, ಪ್ರತ್ಯಾರೋಪ, ಛೇಡಿಕೆ ಶುರುವಾಗಿದ್ದು ಚುನಾವಣೆ ರಂಗು ಪಡೆದುಕೊಂಡಿದೆ.
ದಾವಣಗೆರೆ ಲೋಕಸಭೆ ಕಣದಲ್ಲಿ ಈವರೆಗೂ ಕೇವಲ ಬಿಜೆಪಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಕಾಂಗ್ರೆಸ್ ಟಿಕೆಟ್ ಗೊಂದಲದಿಂದಾಗಿ ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಎರಡೂ ಪಕ್ಷದ ಕಲಿಗಳು ಸಿದ್ಧವಾಗಿದ್ದು ಮೊದಲ ದಿನವೇ ಕಣವೂ ಖದರ್ ಪಡೆದುಕೊಂಡಿದೆ. ಬಿಜೆಪಿ ನಾಯಕರು ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಹರಿಹಾಯ್ದು ಟೀಕೆ, ಛೇಡಿಕೆ ಮೂಲಕ ಕೆಣಕಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿಯೇ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಬಿಜೆಪಿ ಗೆಲುವಿನ ಹೇಳಿಕೆಗೆ ಪಂಚ್ ನೀಡಿದ್ದು , ಚುನಾವಣೆ ನಂತರ ಯಡಿಯೂರಪ್ಪ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲಿ ಎಂದು ಚಾಟಿ ಬೀಸಿದ್ದಾರೆ. ಬಿಜೆಪಿಯ ಇಂದಿನ ಪ್ರಚಾರದಲ್ಲಿ ಅದೇ ಶಾಮನೂರು ಕುಟುಂಬ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ಕೂಡ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಕಾಂಗ್ರೆಸ್ ಹೇಗೆ ಪ್ರತಿಕ್ರಿಯೆ ನೀಡಲಿದೆ, ಯಾರಾರಯರು ಯಾವ ಅಸ್ತ್ರ ಪ್ರಯೋಗಿಸಲಿದ್ದಾರೆ ಕಾದು ನೋಡಬೇಕಿದೆ.
ತ್ಯಾಗಕ್ಕೆ ಧನ್ಯವಾದಗಳು
ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ನರೇಂದ್ರಮೋದಿ ಮತ್ತೆ ಪ್ರಧಾನಿ ಆಗಬೇಕು ಎಂದು ಮಹಾಘಟಬಂಧನ್ನಿಂದ ಹೊರಗಿದ್ದಾರೆ. ಹಾಗೆ ದಾವಣಗೆರೆಯಲ್ಲಿಯೂ ಬಿಜೆಪಿ ಗೆಲ್ಲಬೇಕು ನರೇಂದ್ರ ಮೋದಿ ಆಗಬೇಕು ಎಂದು ಇಬ್ಬರು ನಾಯಕರು ತ್ಯಾಗ ಮಾಡಿದ್ದಾರೆ, ಆ ತ್ಯಾಗಕ್ಕೆ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಆಯನೂರು ಮಂಜುನಾಥ್ ಪರೋಕ್ಷವಾಗಿ ಶಾಮನೂರು ಕುಟುಂಬದ ಕಾಲೆಳೆದರು.
ಮೋದಿ- ರಾಹುಲ್ ಘೋಷಣೆ ಮುಜುಗರ
ಕಾಂಗ್ರೆಸ್ನ ಮೆರವಣಿಗೆ ಡಿಸಿ ಕಚೇರಿಗೆ ಬಂದ ವೇಳೆ ಬಿಜೆಪಿಯ ಕೆಲ ಕಾರ್ಯಕರ್ತರು ಮೋದಿ...ಮೋದಿ ಎಂದು ಘೋಷಣೆ ಕೂಗಿದರು. ಆಗ ಕೆಲ ಕಾಂಗ್ರೆಸ್ ಕಾರ್ಯಕರ್ತರು ಮುಜುಗರಕ್ಕೆ ಒಳಗಾದರು. ಬಿಜೆಪಿ ಕಾರ್ಯಕರ್ತರು ಮೋದಿ ಎಂದು ಕೂಗಿದಾಗ ಆಗ್ತಾರೆ ಬೂದಿ ಎಂದು ಪ್ರತಿ ಘೋಷಣೆ ಕೂಗಿದರು. ಆ ನಂತರ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಡಿಸಿ ಕಚೇರಿಗೆ ಆಗಮಿಸಿದ ವೇಳೆಗೆ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್...ರಾಹುಲ್ ಎಂದು ಕೂಗಿದ್ದರಿಂದ ಅವರು ಕೂಡ ಮುಜುಗರಕ್ಕೆ ಒಳಗಾದರು.