ಆ್ಯಪ್ನಗರ

ತುಳಸಿ ಹಬ್ಬಕ್ಕೆ ಖರೀದಿ ಜೋರು

ಕಾರ್ತಿಕ ಮಾಸದ ಶುಕ್ಲ ಪಕ್ಷ ದ ದ್ವಾದಶಿಯಂದು ತುಳಸಿ ಹಬ್ಬ ಆಚರಿಸಲಾಗುತ್ತಿದ್ದು, ಜನರು ಹೂ, ಬಾಳೆಹಣ್ಣು, ಬಾಳೆದಿಂಡು, ಕಬ್ಬಿನ ತೊಂಡೆ, ಮಾವಿನಸೊಪ್ಪು, ಬೆಟ್ಟದ ನಲ್ಲಿಕಾಯಿ ಖರೀದಿಸುತ್ತಿರುವುದು ಕಂಡು ಬಂತು.

Vijaya Karnataka 20 Nov 2018, 5:00 am
ದಾವಣಗೆರೆ : ಕಾರ್ತಿಕ ಮಾಸದ ಶುಕ್ಲ ಪಕ್ಷ ದ ದ್ವಾದಶಿಯಂದು ತುಳಸಿ ಹಬ್ಬ ಆಚರಿಸಲಾಗುತ್ತಿದ್ದು, ಜನರು ಹೂ, ಬಾಳೆಹಣ್ಣು, ಬಾಳೆದಿಂಡು, ಕಬ್ಬಿನ ತೊಂಡೆ, ಮಾವಿನಸೊಪ್ಪು, ಬೆಟ್ಟದ ನಲ್ಲಿಕಾಯಿ ಖರೀದಿಸುತ್ತಿರುವುದು ಕಂಡು ಬಂತು.
Vijaya Karnataka Web buy lounge for basil festival
ತುಳಸಿ ಹಬ್ಬಕ್ಕೆ ಖರೀದಿ ಜೋರು


ಈ ಹಬ್ಬವನ್ನು ಕಿರು ದೀಪಾವಳಿ ಎಂದು ಆಚರಿಸುವುದು ವಾಡಿಕೆ. ತುಳಸಿಯು ಶ್ರೀ ಕೃಷ್ಣನನ್ನು ಈ ದಿನ ವಿವಾಹ ಆದಳು ಎಂಬ ನಂಬಿಕೆ ಹಿನ್ನೆಲೆಯಲ್ಲಿ ಕೃಷ್ಣನನ್ನು ಪೂಜೆ ಮಾಡಲಾಗುತ್ತದೆ. ಈ ಹಬ್ಬದಲ್ಲಿ ಭಕ್ತರು ಶ್ರೀ ಕೃಷ್ಣನನ್ನು ಸ್ವಾಗತಿಸಲು ತುಳಸಿ ಕಟ್ಟೆಗೆ ಬೃಂದಾವನದ ಅಲಂಕಾರ ಮಾಡುತ್ತಾರೆ. ತುಳಸಿಯ ಗಿಡದ ಜತೆ ದೊಡ್ಡ ನೆಲ್ಲಿಕಾಯಿ ಗಿಡವನ್ನು ಇಟ್ಟು ಪೂಜೆ ಮಾಡುವುದು ವಾಡಿಕೆ. ದೀಪಾವಳಿ ಹಬ್ಬದಿಂದ ಆರಂಭಗೊಂಡ ಮನೆಯೆಲ್ಲಾ ದೀಪ ಬೆಳಗುವ ಕಾಯಕಕ್ಕೆ ಇಂದು ಹೆಚ್ಚಿನ ಮೆರಗು ಬರುತ್ತದೆ.

ಡಬ್ಬದ ತುಳಸಿಗೂ ಪೂಜೆ:


ತುಳಸಿಯು ಮನೆ ಹೊರಗಡೆ, ಅಂಗಳದಲ್ಲೆ ಕಾಣುವುದು ಹೆಚ್ಚು. ಕೆಲ ಮನೆಗಳಲ್ಲಂತೂ ಒಳಗೆ ಹೋಗುವ ಮುನ್ನ ಅಂಗಳದಲ್ಲಿರುವ ತುಳಸಿ ಕಟ್ಟೆಯನ್ನು ದಾಟಿಯೆ ಹೋಗಬೇಕು. ಇನ್ನು ಕೆಲವರು ಮನೆಯಲ್ಲಿ ಖಾಲಿ ಡಬ್ಬ, ಹೂ ಕುಂಡದಲ್ಲಿ ಹಾಕಿ ಬೆಳೆಸಿದ ಸಸಿ, ಇಲ್ಲವೆ ಅಂಗಳದಲ್ಲಿ ಕಟ್ಟಿಸಿದ ಕಟ್ಟೆಯಲ್ಲಿ ಬೆಳೆಸಿದ ತುಳಸಿಗೆ ಪೂಜೆ ಮಾಡುತ್ತಾರೆ. ತುಳಸಿ ಕಟ್ಟೆಗೆ ಅರಿಶಿನ, ಕುಂಕುಮ ಹಚ್ಚಿ ಹೂ ಮುಡಿಸಿ, ಹತ್ತಿಯಲ್ಲಿ ಹೊಸೆದ ಹಾರವನ್ನು ಅರ್ಪಿಸಿ ಬೃಂದಾವನದ ಸುತ್ತ ಗೃಹಣಿಯರು ಪೂಜೆ ಮಾಡುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ