ಆ್ಯಪ್ನಗರ

ಬಿಟ್‌ ಅಂದ್ರೆ ಗೊತ್ತಿಲ್ಲ, ನನ್ನ ವ್ಯವಹಾರ ಏನಿದ್ದರೂ ಲೋಕಲ್‌ ಬ್ಯಾಂಕ್‌ನಲ್ಲಿ: ಭೈರತಿ ಬಸವರಾಜ್‌

ಬಿಟ್‌ ಕಾಯಿನ್‌ ಹಗರಣ ಸಂಭಂಧ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್‌ ನಾಯಕರು ಹೇಳಿರುವುದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಿಯಾಂಕ್‌ ಖರ್ಗೆ ವಿರುದ್ಧ ಬಿಜೆಪಿ ನಾಯಕರು ವಾಗ್ಬಾಣ ಬಿಡುತ್ತಿದ್ದಾರೆ.

Vijaya Karnataka Web 18 Nov 2021, 1:55 pm
ದಾವಣಗೆರೆ: ಬಿಟ್‌ ಕಾಯಿನ್‌ ವಿಷಯದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಮಾತಿನ ಚಕಮಕಿ ದಿನದಿಂದ ಜೋರಾಗಿದೆ. ಮಳೆಯ ಅಬ್ಬರದ ಜತೆಗೆ ರಾಜಕೀಯ ನಾಯಕರ ಕೆಸರೆರಚಾಟದ ಆರ್ಭಟ ಕೂಡ ಹೆಚ್ಚಾಗುತ್ತಲೇ ಇದೆ.
Vijaya Karnataka Web ಭೈರತಿ ಬಸವರಾಜ್‌
ಭೈರತಿ ಬಸವರಾಜ್‌


ಬಿಟ್‌ ಕಾಯಿನ್‌ ಹಗರಣ ಸಂಭಂಧ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್‌ ನಾಯಕರು ಹೇಳಿರುವುದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಿಯಾಂಕ್‌ ಖರ್ಗೆ ವಿರುದ್ಧ ಬಿಜೆಪಿ ನಾಯಕರು ವಾಗ್ಬಾಣ ಬಿಡುತ್ತಿದ್ದಾರೆ. ಈಗ ದಾವಣಗೆರೆಯಲ್ಲಿ ಭೈರತಿ ಬಸವರಾಜ್‌ ಸರತಿ.

ಮುಖ್ಯಮಂತ್ರಿ ಕೆಳಗಿಳಿಯುತ್ತಾರೆ ಎಂದು ಭವಿಷ್ಯ ಹೇಳೊಕೆ ಪ್ರಿಯಾಂಕ್ ಖರ್ಗೆ ಶಾಸ್ತ್ರ ಹೇಳೋರಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಕಿಡಿಕಾರಿದ್ದಾರೆ.

ದಾವಣಗೆರೆಯಲ್ಲಿ ಗುರುವಾರ ಬೆಳಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಸಚಿವರು ಕಾಂಗ್ರೆಸ್‌ ನಾಯಕರ ವಿರುದ್ಧ ಚಾಟಿ ಬೀಸಿದರು.

'ಕಾಂಗ್ರೆಸ್ ನಾಯಕರ ಮಕ್ಕಳು ಬಿಟ್ ಕಾಯಿನ್ ಪಾಲುದಾರರು!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಅಧಿಕಾರಾವಧಿ ಪೂರೈಸುತ್ತಾರೆ. ಅವರ ನೇತೃತ್ವದಲ್ಲಿ 2023ರ ಚುನಾವಣೆ ಎದುರಿಸುತ್ತೇವೆ. ಇದರಲ್ಲಿ‌ ಯಾವುದೇ ಅನುಮಾನವಿಲ್ಲ ಎಂದು ಭೈರತಿ ಬಸವರಾಜ್‌ ತಿಳಿಸಿದರು.

ಮುಖ್ಯಮಂತ್ರಿ ಬದಲಾವಣೆ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿರುವ ಸಚಿವ ಭೈರತಿ ಬಸವರಾಜ್‌ ತಮ್ಮ ಧಾಟಿಯಲ್ಲಿ ತಿರುಗೇಟು ನೀಡಿದರು.

ಕಾವಲಿಲ್ಲದೆ ಮಕ್ಕಳು 'ಕೆರೆಗೆ ಹಾರ'; ದಾವಣಗೆರೆ ಜಿಲ್ಲೆಯಲ್ಲಿ 15 ದಿನದಲ್ಲಿ 7 ಮಕ್ಕಳು ಕೆರೆಪಾಲು!

ಬಿಟ್ ಕಾಯಿನ್ ಬಗ್ಗೆ ಮಾಹಿತಿ ಇಲ್ಲ


ನನಗೆ ಬಿಟ್ ಕಾಯಿನ್ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಬಿಟ್ ಕಾಯಿನ್ ಅಂದ್ರೇನು ಅಂತಾನೂ ಗೊತ್ತಿಲ್ಲ. ಬ್ಯಾಂಕ್‌ಗಳ ಕರೆನ್ಸಿ ಗೊತ್ತು. ಬಿಟ್ ಆಂದ್ರೆ ಗೊತ್ತಿಲ್ಲ. ನಮ್ಮ ವ್ಯವಹಾರ ಇರೋದು ಸ್ಥಳೀಯ ಬ್ಯಾಂಕ್‌ಗಳಲ್ಲಿ ಎಂದು ಸಚಿವ ಭೈರತಿ ಬಸವರಾಜ್‌ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ