ಆ್ಯಪ್ನಗರ

ಕಾರು - ಬೈಕ್‌ ಡಿಕ್ಕಿ : ಇಬ್ಬರು ಸಾವು

ಸಮೀಪದ ದೊಗ್ಗನಾಳ್‌ ಗೇಟ್‌ ಬಳಿ ಸಂಜೆ 5ರ ವೇಳೆ ಬೈಕ್‌ ಸವಾರರಿಗೆ ಕಾರು ಡಿಕ್ಕಿ ಹೊಡೆದು ಬೈಕ್‌ ಸವಾರರು ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

Vijaya Karnataka 12 Dec 2018, 5:00 am
ಹೊಳಲ್ಕೆರೆ : ಸಮೀಪದ ದೊಗ್ಗನಾಳ್‌ ಗೇಟ್‌ ಬಳಿ ಸಂಜೆ 5ರ ವೇಳೆ ಬೈಕ್‌ ಸವಾರರಿಗೆ ಕಾರು ಡಿಕ್ಕಿ ಹೊಡೆದು ಬೈಕ್‌ ಸವಾರರು ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
Vijaya Karnataka Web car bike collision two dead
ಕಾರು - ಬೈಕ್‌ ಡಿಕ್ಕಿ : ಇಬ್ಬರು ಸಾವು


ಕೆಂಚಾಪುರದ ನಿವಾಸಿ ಸಿ.ಮಹಾದೇವಪ್ಪ (56) ಮತ್ತು ಅರಬಘಟ್ಟದ ನಿವಾಸಿ ಉಮೇಶ್‌ (42) ಮೃತಪಟ್ಟವರು. ಈ ಇಬ್ಬರು ಹೊಳಲ್ಕೆರೆಯಿಂದ ಬೈಕ್‌ನಲ್ಲಿ ಹೋಗುತ್ತಿದ್ದರು. ದೊಗ್ಗನಾಳ್‌ ಗೇಟ್‌ ಬಳಿ ಎದುರಿನಿಂದ ಬಂದ ಕಾರ್‌ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಹೊಳಲ್ಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ ಎಂದು ಪಿಎಸ್‌ಐ ಮಹೇಶ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ