ಆ್ಯಪ್ನಗರ

ನೂರು ಮಿಲಿಯನ್‌ ಉದ್ಯೋಗ ಸೃಷ್ಟಿ ಸವಾಲು

ವಿಶ್ವದ ಮೂರನೇ ಆರ್ಥಿಕ ಶಕ್ತಿ, ಆರನೇ ಮಾನವ ಶಕ್ತಿ ಹೊಂದಿರುವ ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಒಂದು ನೂರು ಮಿಲಿಯನ್‌ನಷ್ಟು ಉದ್ಯೋಗ ಸೃಷ್ಟಿಯಾಗಬೇಕಿದೆ. ಇವು ಪರಿಸರ ಸ್ನೇಹಿಯೂ ಆಗಿರಬೇಕಾದ ಸವಾಲು ನಮ್ಮೆದುರಿದೆ ಎಂದು ಕುಮಾರಪಟ್ಟಣಂ ಗ್ರಾಸಿಂ ಇಂಡಸ್ಟ್ರೀಸ್‌ನ ಹಿರಿಯ ಚೇರ್ಮನ್‌ ಅಜಯ್‌ ಗುಪ್ತಾ ಹೇಳಿದರು.

Vijaya Karnataka 9 Mar 2019, 5:00 am
ದಾವಣಗೆರೆ : ವಿಶ್ವದ ಮೂರನೇ ಆರ್ಥಿಕ ಶಕ್ತಿ, ಆರನೇ ಮಾನವ ಶಕ್ತಿ ಹೊಂದಿರುವ ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಒಂದು ನೂರು ಮಿಲಿಯನ್‌ನಷ್ಟು ಉದ್ಯೋಗ ಸೃಷ್ಟಿಯಾಗಬೇಕಿದೆ. ಇವು ಪರಿಸರ ಸ್ನೇಹಿಯೂ ಆಗಿರಬೇಕಾದ ಸವಾಲು ನಮ್ಮೆದುರಿದೆ ಎಂದು ಕುಮಾರಪಟ್ಟಣಂ ಗ್ರಾಸಿಂ ಇಂಡಸ್ಟ್ರೀಸ್‌ನ ಹಿರಿಯ ಚೇರ್ಮನ್‌ ಅಜಯ್‌ ಗುಪ್ತಾ ಹೇಳಿದರು.
Vijaya Karnataka Web challenging the creation of a hundred million jobs
ನೂರು ಮಿಲಿಯನ್‌ ಉದ್ಯೋಗ ಸೃಷ್ಟಿ ಸವಾಲು


ಎಸ್‌ಎಸ್‌ ವೈದ್ಯಕೀಯ ಸಂಶೋಧನಾ ಮಹಾವಿದ್ಯಾಲಯದ ಸಹಯೋಗದಲ್ಲಿ ನಗರದ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಜೈವಿಕ ತಂತ್ರಜ್ಞಾನ ಮತ್ತು ಸಂಶೋಧನಾ ವಿಭಾಗದಿಂದ ಶುಕ್ರವಾರ ನಡೆದ ಜೈವಿಕ ಉದ್ಯಮಶೀಲತೆ ಶೃಂಗಸಭೆ ಉದ್ಘಾಟಿಸಿ ಮಾತನಾಡಿದರು.

ಉದ್ಯೋಗ ಸೃಷ್ಟಿಸುವುದು ಮತ್ತು ಅದು ಪರಿಸರ ಸ್ನೇಹಿ ಆಗಿರಬೇಕು ಎನ್ನುವುದರ ಬಗ್ಗೆ ಪ್ರಧಾನಮಂತ್ರಿ ಕೂಡ ನಿರೀಕ್ಷೆ ಹೊಂದಿದ್ದಾರೆ ಎಂದರು.

ನೂತನ ಉದ್ಯೋಗ ಸೃಷ್ಠಿಯ ಹೊತ್ತಲ್ಲಿ ತ್ಯಾಜ್ಯವೂ ಶೂನ್ಯ ಪ್ರಮಾಣಕ್ಕಿಳಿಯಲು ಜೈವಿಕ ತಂತ್ರಜ್ಞಾನ ಆವಿಷ್ಕಾರಗಳ ಅಳವಡಿಕೆ ಅವಶ್ಯ ಹಾಗೂ ಅನಿವಾರ್ಯ. ಈ ನಿಟ್ಟಿನಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕೆಗಳು ಸಂಯುಕ್ತವಾಗಿ ಸಮಾಲೋಚಿಸಿ ಕಾರ್ಯೋನ್ಮುಖವಾಗಿದೆ. ಇಂತಹ ಶೃಂಗ ಸಭೆಗಳು ಇದಕ್ಕೆ ಪೂರಕವಾಗಿವೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಬಿ.ಈ. ರಂಗಸ್ವಾಮಿ, ಗ್ರಾಮೀಣ ಪ್ರದೇಶದ ನೈಸರ್ಗಿಕ ಹಾಗೂ ಪ್ರಾಕೃತಿಕ ಸಂಪನ್ಮೂಲಗಳ ಬಳಕೆಯಿಂದಲೇ ಗ್ರಾಮೀಣ ಜನರು ನೂತನ ಉತ್ಪಾದನೆಗಳ ಮೂಲಕ ಸ್ವ ಉದ್ಯೋಗಿ, ಉದ್ಯಮಶೀಲರೂ ಆಗಬಹುದು. ಈ ನಿಟ್ಟಿನಲ್ಲಿ ಶೃಂಗ ಕ್ರಿಯಾಶೀಲ ಚಿಂತನೆ ನಡೆಸುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ ಮಾತನಾಡಿ, ಕುರುಳು, ಬೆರಣಿ ತಟ್ಟಿ ಮಾರಿದ ಅಜ್ಜಿ, ಹೈನುಗಾರಿಕೆ ಮಾಡಿದ ಮಗಳು, ಹೊಲದ ಬದುವಿನಲ್ಲಿ ಹುಲ್ಲು ಮಾರುವ ಮೊಮ್ಮಗಳು ಇವರೆಲ್ಲಾ ಗ್ರಾಮೀಣ ಉದ್ಯೋಗ ಸೃಷ್ಟಿಯ ಮೂಲ ವ್ಯಕ್ತಿಗಳು. ಪಾರಂಪರಿಕತೆಗೆ ವೈಜ್ಞಾನಿಕ ಸ್ಪರ್ಶಕೊಟ್ಟು ಉದ್ಯೋಗಗಳನ್ನು ಉದ್ಯಮವಾಗಿಸುವಲ್ಲಿ ಜೈವಿಕ ತಂತ್ರಜ್ಞಾನ ಉಪಯುಕ್ತ ಎಂದರು.

ಸಭೆ ಮುಖ್ಯ ಸಂವಾದಕರಾಗಿ ಡಾ.ಎಸ್‌. ಚಂದ್ರಶೇಖರನ್‌, ಪ್ರಸಾದ್‌ ಪಾಟೀಲ್‌, ಡಾ. ಜಿತೇಂದ್ರ ಕುಮಾರ್‌, ನಿವೇದನ್‌ ನೆಂಪೆ, ಗೌರಿ ಶಂಕರ್‌ ಕರೋಶಿ, ಡಾ. ಎಸ್‌.ಎಸ್‌. ಮಂಜುನಾಥ್‌, ಡಾ. ವಾಸುದೇವ್‌, ಡಾ. ಕೆ.ಎಸ್‌. ಬವರಾಜಪ್ಪ, ಡಾ. ಎಸ್‌.ಸುರೇಶ್‌, ಡಾ. ಮಾನವೇಂದ್ರ, ಡಾ. ಬಿ.ಈ. ಬಸವರಾಜ್‌, ಡಾ.ಎಸ್‌.ಕುಮಾರಪ್ಪ, ಡಾ.ಮುರುಗೇಶ್‌ ಬಾಬು, ಕೆ.ರುದ್ರಪ್ಪ, ವಿನಯ್‌, ಶೃತಿ ನಿರಂಜನ್‌, ಶಿವಲಿಂಗಪ್ಪ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ