ಆ್ಯಪ್ನಗರ

ಹರಪನಹಳ್ಳಿ: ಚಿರತೆಗಳ ದಾಳಿಗೆ 25 ಕುರಿ, ಮೇಕೆ ಬಲಿ

​​ದುಕಿಗೆ ಆಸರೆಯಾಗಿದ್ದ ಕುರಿ ಮೇಕೆಗಳು ಚಿರತೆಗಳ ದಾಳಿಗೆ ಮೃತಪಟ್ಟ ಹಿನ್ನೆಲೆಯಲ್ಲಿ ಕುರಿ ಕಾಯುವವರು ಚಿಂತೆಗೊಳಗಾಗಿದ್ದಾರೆ. ರಾಜ್ಯ ಸರಕಾರ ನಮಗೆ ಪರಿಹಾರ ನೀಡಬೇಕೆಂದು ಅಧಿಕಾರಿಗಳ ಹತ್ತಿರ ರಾಜಪ್ಪ ಬೇಡಿಕೊಂಡರು.

Vijaya Karnataka Web 28 Nov 2020, 5:54 pm
ಹರಪನಹಳ್ಳಿ: ತಾಲೂಕಿನ ದಡಗಾರನಹಳ್ಳಿ ಗ್ರಾಮ ಸಮೀಪದ ಜಮೀನಿನ ಕೊಟ್ಟಿಗೆಯಲ್ಲಿದ್ದ ಕುರಿಮೇಕೆಗಳ ಮೇಲೆ ಗುರುವಾರ ತಡರಾತ್ರಿ ಎರಡ್ಮೂರು ಚಿರತೆ ದಾಳಿ ಮಾಡಿದ ಪರಿಣಾಮ 25 ಕುರಿಮೇಕೆಗಳು ಬಲಿಯಾಗಿದ್ದು, ಕುರಿಗಾಯಿಗಳು ಭಯಭೀತರಾಗಿದ್ದಾರೆ.
Vijaya Karnataka Web ಚಿರತೆ
ಚಿರತೆ


ರಾತ್ರಿ ಸಮಯದಲ್ಲಿ ಕೊಟ್ಟಿಗೆಗೆ ನುಗ್ಗಿದ ಚಿರತೆಗಳು ದಾಳಿ ಮಾಡಿ ಕೊಟ್ಟಿಗೆಯಲ್ಲಿದ್ದ ಮೂರು ತಿಂಗಳ 18 ಕುರಿ ಮರಿಗಳು ಮತ್ತು 7 ಮೇಕೆಗಳನ್ನು ಬಲಿ ಪಡೆದಿವೆ. ದಾಳಿಯ ತೀವ್ರತೆಗೆ 20 ಕುರಿಮೇಕೆಗಳು ಸತ್ತಿವೆ. ಐದು ಮರಿಗಳನ್ನು ಚಿರತೆಗಳು ತಿಂದು ಹಾಕಿದೆ.

ಮೇಕೆ ಕೂಡಿ ಹಾಕಿದ್ದ ಕೊಟ್ಟಿಗೆ ಬಳಿ ಬೆಳಗ್ಗೆ ಕುರಿಗಾಯಿ ರಾಜಪ್ಪ ಹೋದಾಗ ಮೇಕೆಗಳು ಸತ್ತು ಬಿದ್ದಿರುವುದನ್ನು ಗಮನಿಸಿದ್ದಾರೆ. ಈ ಕುರಿಮೇಕೆಗಳು ಹೊಳಲು ಗೋಣೆಪ್ಪ ನಿಂಗಪ್ಪ, ಹೊಳಲು ಗೋಣೆಪ್ಪ ದೊಡ್ಡಗೋಣೆಪ್ಪ, ರಾಜಪ್ಪ ಬಂಡ್ರಿ ಚಿಕ್ಕಪ್ಪ ಎಂಬುವರಿಗೆ ಸೇರಿದ್ದಾಗಿವೆ.

ಎರಡ್ಮೂರು ಚಿರತೆಗಳ ದಾಳಿಗೆ ಕುರಿಮೇಕೆಗಳು ಬಲಿಯಾಗಿದ್ದು, ಕುರಿಗಾಯಿಗಳಿಗೆ ಪರಿಹಾರ ಕೊಡಿಸಲು ಯತ್ನಿಸಲಾಗುವುದು. ಜತೆಗೆ ಗ್ರಾಮದ ಹೊರ ಪ್ರದೇಶದಲ್ಲಿ ಬೋನ್‌ ಇಡಲಾಗಿದ್ದು, ಜನರು ರಾತ್ರಿ ವೇಳೆ ಒಂಟಿಯಾಗಿ ಓಡಾಡಬಾರದು. ಕೆಲಸ ಇದ್ದರೆ ಗುಂಪಾಗಿ ಓಡಾಡಬೇಕು.
ಭರತ್‌ ತಳವಾರ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ

ದುಕಿಗೆ ಆಸರೆಯಾಗಿದ್ದ ಕುರಿ ಮೇಕೆಗಳು ಚಿರತೆಗಳ ದಾಳಿಗೆ ಮೃತಪಟ್ಟ ಹಿನ್ನೆಲೆಯಲ್ಲಿ ಕುರಿ ಕಾಯುವವರು ಚಿಂತೆಗೊಳಗಾಗಿದ್ದಾರೆ. ರಾಜ್ಯ ಸರಕಾರ ನಮಗೆ ಪರಿಹಾರ ನೀಡಬೇಕೆಂದು ಅಧಿಕಾರಿಗಳ ಹತ್ತಿರ ರಾಜಪ್ಪ ಬೇಡಿಕೊಂಡರು.

ಈ ಸುದ್ದಿ ತಿಳಿದು ತಾಲೂಕಿನ ದಡಗಾರನಹಳ್ಳಿ, ಕಾಯಕದಹಳ್ಳಿ, ಶೃಂಗಾರತೋಟ, ಬಾಗಳಿ, ಕೂಲಹಳ್ಳಿ, ಕೋಡಿಹಳ್ಳಿ, ಕಣವಿಹಳ್ಳಿ ಸೇರಿ ಸುತ್ತಲ ಗ್ರಾಮಗಳ ರೈತರು, ಹೊರಗಡೆ ಬರಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಗಾರ್ಡ್‌ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಶುವೈದ್ಯಾಧಿಕಾರಿ ಡಾ.ಶ್ರೀದೇವಿ ಸ್ಥಳಕ್ಕೆ ಭೇಟಿ ನೀಡಿ ಕುರಿ ಮತ್ತು ಮೇಕೆಗಳ ಪರೀಕ್ಷೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ