ದಾವಣಗೆರೆ : ನಗರದ ಶ್ರೀ ಬೀರಲಿಂಗೇಶ್ವರ ಕುಸ್ತಿ ಅಖಾಡದಲ್ಲಿ ಮಾ.14ರಂದು ಸಂಜೆ 4 ಕ್ಕೆ ಬೋಳಾಚಟ್ಟಿ ಶ್ರೀ ಚೌಡೇಶ್ವರಿ ಜಾತ್ರೆ ನಿಮಿತ್ತ 28 ಜೊಡಿಗಳ ಕಾಟಾ ನಿಕಾಲಿ ಜಂಗಿ ಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದು ಯುವ ಕುಸ್ತಿ ಪಟು ರಾಜನಹಳ್ಳಿ ಶಿವಕುಮಾರ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಜೆ 4ಕ್ಕೆ ಕುಸ್ತಿ ಪಂದ್ಯಾವಳಿ ಆರಂಭವಾಗಲಿದ್ದು, 28 ಜತೆ ತಂಡಗಳು ಕುಸ್ತಿಯಲ್ಲಿ ಭಾಗವಹಿಸಲಿವೆ. ದಸರಾ ಕೇಸರಿ, ದಸರಾ ಕಂಠೀರವ ರಾಣೆಬೆನ್ನೂರಿನ ಕಾರ್ತಿಕ್ ಕಾಟೆ ಹಾಗೂ ಪಂಜಾಬ್ ಚಾಂಪಿಯನ್, ಭಾರತೀಯ ವಾಯುಪಡೆಯ ಕುಸ್ತಿಪಟು ಹರಿಯಾಣದ ಪ್ರವೀಣ ಕತ್ರಿ ಮಧ್ಯೆ ಪ್ರಮುಖ ಕುಸ್ತಿ ಇದೆ ಎಂದರು.
ದಾವಣಗೆರೆ ಕರ್ನಾಟಕ ಕೇಸರಿ ಕಿರಣ್ ಭದ್ರಾವತಿ, ಭಾರತೀಯ ವಾಯುಪಡೆಯ ಕುಸ್ತಿಪಟು ಹರಿಯಾಣ ಸುನಿಲ್ ಮಧ್ಯೆ 2ನೇ ಕುಸ್ತಿ, ದಾವಣಗೆರೆಯ ಎಲ್.ಆನಂದ ಹಾಗೂ ಬೆಳಗಾವಿಯ ಶಿವಪುತ್ರ ಮಧ್ಯೆ ಮೂರನೇ ಕುಸ್ತಿ ನಡೆಯಲಿದೆ. ಮಾಜಿ ಶಾಸಕರಾದ ಕೆ.ಮಲ್ಲಪ್ಪ, ಟಿ.ದಾಸಕರಿಯಪ್ಪ, ಯಶವಂತರಾವ್ ಜಾಧವ್, ಬಿ.ವೀರಣ್ಣ, ಡಿ.ಮಾಲತೇಶ ಜಾಧವ್ ಇತರರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುವರು ಎಂದು ತಿಳಿಸಿದರು.
ಮಧ್ಯ ಕರ್ನಾಟಕದ ಕುಸ್ತಿಗೆ ಕೀರ್ತಿ ತಂದುಕೊಟ್ಟಂತಹ ಹಿರಿಯ ಕುಸ್ತಿಪಟುಗಳಾಗಿದ್ದ ಪೈಲ್ವಾನ್ ಸ್ಟಾರ್ ನಾಗಪ್ಪ, ದಾವಣಗೆರೆ ಗಾಮಾ ಪೈಲ್ವಾನ್ ಚನ್ನಬಸಪ್ಪ, ಚಾರ್ಲಿ ಪೈಲ್ವಾನ್ ಸೇರಿದಂತೆ ಅನೇಕ ಹಿರಿಯರ ಕೊಡುಗೆ ಇಲ್ಲಿ ಕುಸ್ತಿಗೆ ಇದೆ. ಶ್ರೀ ಬೋಳಚಟ್ಟಿ ಚೌಡೇಶ್ವರಿ ಸಮಿತಿಯ ಅಧ್ಯಕ್ಷ ಗೌಡರ ರೇವಣಸಿದ್ದಪ್ಪ, ಮಾಲತೇಶರಾವ್ ಜಾಧವ್, ಜಿಲ್ಲಾ ಕುಸ್ತಿಪಟುಗಳ ಸಂಘದ ಅಧ್ಯಕ್ಷ ಬಿ.ವೀರಣ್ಣ, ಹಿರಿಯ ಕುಸ್ತಿಪಟುಗಳಾದ ಟಿ.ದಾಸಕರಿಯಪ್ಪ, ಯಶವಂತರಾವ್ ಜಾಧವ್, ವಿನಾಯಕ ಪೈಲ್ವಾನ್ ಸೇರಿದಂತೆ ಅನೇಕರು ಭಾಗವಹಿಸುವರು ಎಂದರು.
ಸಮಿತಿ ಮುಖಂಡರಾದ ಸ್ಟಾರ್ ವೀರಣ್ಣ ಪೈಲ್ವಾನ್, ವಿನಾಯಕ ಪೈಲ್ವಾನ್, ವೀರೇಶ ಪೈಲ್ವಾನ್ ಇತರರು ಇದ್ದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಜೆ 4ಕ್ಕೆ ಕುಸ್ತಿ ಪಂದ್ಯಾವಳಿ ಆರಂಭವಾಗಲಿದ್ದು, 28 ಜತೆ ತಂಡಗಳು ಕುಸ್ತಿಯಲ್ಲಿ ಭಾಗವಹಿಸಲಿವೆ. ದಸರಾ ಕೇಸರಿ, ದಸರಾ ಕಂಠೀರವ ರಾಣೆಬೆನ್ನೂರಿನ ಕಾರ್ತಿಕ್ ಕಾಟೆ ಹಾಗೂ ಪಂಜಾಬ್ ಚಾಂಪಿಯನ್, ಭಾರತೀಯ ವಾಯುಪಡೆಯ ಕುಸ್ತಿಪಟು ಹರಿಯಾಣದ ಪ್ರವೀಣ ಕತ್ರಿ ಮಧ್ಯೆ ಪ್ರಮುಖ ಕುಸ್ತಿ ಇದೆ ಎಂದರು.
ದಾವಣಗೆರೆ ಕರ್ನಾಟಕ ಕೇಸರಿ ಕಿರಣ್ ಭದ್ರಾವತಿ, ಭಾರತೀಯ ವಾಯುಪಡೆಯ ಕುಸ್ತಿಪಟು ಹರಿಯಾಣ ಸುನಿಲ್ ಮಧ್ಯೆ 2ನೇ ಕುಸ್ತಿ, ದಾವಣಗೆರೆಯ ಎಲ್.ಆನಂದ ಹಾಗೂ ಬೆಳಗಾವಿಯ ಶಿವಪುತ್ರ ಮಧ್ಯೆ ಮೂರನೇ ಕುಸ್ತಿ ನಡೆಯಲಿದೆ. ಮಾಜಿ ಶಾಸಕರಾದ ಕೆ.ಮಲ್ಲಪ್ಪ, ಟಿ.ದಾಸಕರಿಯಪ್ಪ, ಯಶವಂತರಾವ್ ಜಾಧವ್, ಬಿ.ವೀರಣ್ಣ, ಡಿ.ಮಾಲತೇಶ ಜಾಧವ್ ಇತರರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುವರು ಎಂದು ತಿಳಿಸಿದರು.
ಮಧ್ಯ ಕರ್ನಾಟಕದ ಕುಸ್ತಿಗೆ ಕೀರ್ತಿ ತಂದುಕೊಟ್ಟಂತಹ ಹಿರಿಯ ಕುಸ್ತಿಪಟುಗಳಾಗಿದ್ದ ಪೈಲ್ವಾನ್ ಸ್ಟಾರ್ ನಾಗಪ್ಪ, ದಾವಣಗೆರೆ ಗಾಮಾ ಪೈಲ್ವಾನ್ ಚನ್ನಬಸಪ್ಪ, ಚಾರ್ಲಿ ಪೈಲ್ವಾನ್ ಸೇರಿದಂತೆ ಅನೇಕ ಹಿರಿಯರ ಕೊಡುಗೆ ಇಲ್ಲಿ ಕುಸ್ತಿಗೆ ಇದೆ. ಶ್ರೀ ಬೋಳಚಟ್ಟಿ ಚೌಡೇಶ್ವರಿ ಸಮಿತಿಯ ಅಧ್ಯಕ್ಷ ಗೌಡರ ರೇವಣಸಿದ್ದಪ್ಪ, ಮಾಲತೇಶರಾವ್ ಜಾಧವ್, ಜಿಲ್ಲಾ ಕುಸ್ತಿಪಟುಗಳ ಸಂಘದ ಅಧ್ಯಕ್ಷ ಬಿ.ವೀರಣ್ಣ, ಹಿರಿಯ ಕುಸ್ತಿಪಟುಗಳಾದ ಟಿ.ದಾಸಕರಿಯಪ್ಪ, ಯಶವಂತರಾವ್ ಜಾಧವ್, ವಿನಾಯಕ ಪೈಲ್ವಾನ್ ಸೇರಿದಂತೆ ಅನೇಕರು ಭಾಗವಹಿಸುವರು ಎಂದರು.
ಸಮಿತಿ ಮುಖಂಡರಾದ ಸ್ಟಾರ್ ವೀರಣ್ಣ ಪೈಲ್ವಾನ್, ವಿನಾಯಕ ಪೈಲ್ವಾನ್, ವೀರೇಶ ಪೈಲ್ವಾನ್ ಇತರರು ಇದ್ದರು.