ಆ್ಯಪ್ನಗರ

ಸಹಬಾಳ್ವೆ ಬದುಕು ದೇಶದ ಸಮಗ್ರತೆಗೆ ನಾಂದಿ

ಜಾತಿ ಧರ್ಮದ ಹೆಸರಲ್ಲಿ ಕಿತ್ತಾಟ ಬಿಟ್ಟು ಒಗ್ಗಟ್ಟಾಗಿ ಸಹಬಾಳ್ವೆ ಮನೋಭಾವ ಬಂದಾಗ ಮಾತ್ರ ದೇಶದ ಸಮಗ್ರ ಪ್ರಗತಿಗೆ ನಾಂದಿಯಾಗುವುದು ಎಂದು ತಹಸೀಲ್ದಾರ್‌ ಡಾ.ಮಧು ಅಭಿಪ್ರಾಯ ವ್ಯಕ್ತಪಡಿಸಿದರು.

Vijaya Karnataka 28 Aug 2018, 2:24 pm
ಹರಪನಹಳ್ಳಿ : ಜಾತಿ ಧರ್ಮದ ಹೆಸರಲ್ಲಿ ಕಿತ್ತಾಟ ಬಿಟ್ಟು ಒಗ್ಗಟ್ಟಾಗಿ ಸಹಬಾಳ್ವೆ ಮನೋಭಾವ ಬಂದಾಗ ಮಾತ್ರ ದೇಶದ ಸಮಗ್ರ ಪ್ರಗತಿಗೆ ನಾಂದಿಯಾಗುವುದು ಎಂದು ತಹಸೀಲ್ದಾರ್‌ ಡಾ.ಮಧು ಅಭಿಪ್ರಾಯ ವ್ಯಕ್ತಪಡಿಸಿದರು.
Vijaya Karnataka Web co existence has come to life and integrity of the country
ಸಹಬಾಳ್ವೆ ಬದುಕು ದೇಶದ ಸಮಗ್ರತೆಗೆ ನಾಂದಿ


ಪಟ್ಟಣದ ತಾಪಂ ಆವರಣದ ಸಾಮರ್ಥ್ಯ‌ ಸೌಧದಲ್ಲಿ ತಾಲೂಕು ಆಡಳಿತ ಸೋಮವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ಆತ್ಮಕ್ಕೆ ಸ್ವಾತಂತ್ರ್ಯದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಆತ್ಮಕ್ಕೆ ಸಿಕ್ಕ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ ಎಂಬ ಮಂತ್ರ ಪಠಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. 18ನೇ ಶತಮಾನದಲ್ಲೇ ಮೌಢ್ಯ ಹಾಗೂ ಅಶ್ಪೃಶ್ಯತೆಯ ವಿರುದ್ಧ ಕ್ರಾಂತಿಕಾರಿ ಹೋರಾಟ ಮಾಡಿದರು. ನಿಜವಾದ ಮಾನವೀಯತೆ ಹಾಗೂ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷ ಣದಿಂದ ಮಾತ್ರ ಸಾಧ್ಯ ಎಂದು ಚಳವಳಿಯನ್ನೆ ಆರಂಭಿಸಿದ್ದರು. ಇಂತಹ ಸೃಜನಶೀಲ, ಕಾರ್ಯಶೀಲ ಗುರುವಿನ ಜಯಂತ್ಯುತ್ಸವ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ಪುರಸಭೆ ಅಧ್ಯಕ್ಷ ಎಚ್‌.ಕೆ. ಹಾಲೇಶ್‌ ಮಾತನಾಡಿ, ಮೌಢ್ಯತೆ ವಿರೋಧಿಸಿ ಪಾದಯಾತ್ರೆಯ ಮೂಲಕ ಅರಿವು ಮೂಡಿಸಿದ್ದ ಅಪ್ರತಿಮ ಗುರುಗಳು, ದೇಶದ ಕಟ್ಟಕಡೆಯ ವ್ಯಕ್ತಿ ಕೂಡ ಶಿಕ್ಷ ಣ ಹೊಂದಬೇಕು ಎಂಬ ಮಹದಾಶಯ ಹೊಂದಿದವರಾಗಿದ್ದರು. ಜಾತ್ಯಾತೀತ ಮನೋಭಾವನೆಯಿಂದ ನಾರಾಯಣ ಗುರುಗಳ ಆಶಯಗಳನ್ನು ಹಿಂಬಾಲಿಸಿದರೆ ಅವರ ಜಯಂತಿಗೆ ಅರ್ಥ ಬರುತ್ತದೆ. ಮಹಾತ್ಮ ಗಾಂಧೀಜಿಯವರೆ ನಾರಾಯಣಗುರುಗಳನ್ನು ಶ್ರೇಷ್ಟಗುರು ಎಂದು ಒಪ್ಪಿಕೊಂಡಿದ್ದರು ಎಂದು ತಿಳಿಸಿದರು.

ಪ್ರೊ.ಕೆ.ಎನ್‌. ಮಂಜುನಾಥ್‌ ಉಪನ್ಯಾಸ ನೀಡಿ, ಬಾಲ್ಯದಲ್ಲಿಯೇ ಹೋರಾಟದ ಮನೋಭಾವ ಹೊಂದಿದ್ದ ಗುರುಗಳು, ಕೇರಳದಲ್ಲಿದ್ದ ಕೆಳವರ್ಗದವರ ಅತಿಯಾದ ಶೋಷಣೆ ವಿರೋಧಿಸಿ ಅಶ್ಪೃಶ್ಯರಿಗೆ ಮನೆ ಪಾಠ ಆರಂಭಿಸಿದ್ದರು. ಇಂದಿಗೂ ಕೇರಳದಲ್ಲಿ ಅಶ್ಪೃಶ್ಯತೆ ಜೀವಂತವಾಗಿದೆ ಎನ್ನಲು ಕೇರಳ ಪ್ರಾಂತಗಳಲ್ಲಿ ತೆರೆಯಲಾಗಿರುವ ನಿರಾಶ್ರಿತರ ಕೇಂದ್ರದಲ್ಲಿ ಕೆಳವರ್ಗದವರು ಮಾಡಿದ ಗಂಜೀ ಸ್ವೀಕರಿಸಲು ಮೇಲ್ವರ್ಗದವರು ನಿರಾಕರಿಸಿರುವುದು ಈಗಲೂ ಜೀವಂತವಾಗಿರುವುದು ದುರಂತ.

ರಕ್ತ ರಹಿತ ಕ್ರಾಂತಿಯಿಂದ ಈಡಿಗ ಸಮುದಾಯಕ್ಕೆ ನ್ಯಾಯ ಒದಗಿಸಿದವರು ನಾರಾಯಣ ಗುರುಗಳು. ದಲಿತ ಮಕ್ಕಳೇ ಪೂಜಾರಿಗಳಾಗಬೇಕು, ದಲಿತರೇ ದೇವಸ್ಥಾನದ ಉಸ್ತುವಾರಿಗಳಾಗಬೇಕು ಎಂದು ಹೋರಾಟ ಮಾಡಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಿಎಸ್‌ಐ ಉಮೇಶ್‌ಗೆ ಸನ್ಮಾನಿಸಿ ಗೌರವಿಸಲಾಯಿತು. ತಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ ಸಂತೋಷ್‌ ಕುಮಾರ್‌, ಜಿಪಂ ಸದಸ್ಯೆ ಸುವರ್ಣ ಆರುಂಡಿ ನಾಗರಾಜ್‌, ಸಮಾಜದ ತಾಲೂಕು ಗೌರವಾಧ್ಯಕ್ಷ ಈ.ದೇವದಾಸ್‌ ಮಾತನಾಡಿದರು.

ಕಾರ್ಯಕ್ರಮಕ್ಕೂ ಮೊದಲು ಪಟ್ಟಣದಲ್ಲಿ ಮಹಿಳೆಯರ ಕುಂಭ ಕಳಸ, ಸಕಲ ವಾದ್ಯಗಳೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

ಜಿಪಂ ಸದಸ್ಯರಾದ ಡಿ.ಸಿದ್ದಪ್ಪ, ಡಾ.ಮಂಜುನಾಥ್‌ ಉತ್ತಂಗಿ, ಎಚ್‌.ಬಿ. ಪರಶುರಾಮ್‌, ಪುರಸಭೆ ಉಪಾಧ್ಯಕ್ಷ ಕೆ.ಸತ್ಯನಾರಾಯಣ, ತಾಪಂ ಉಪಾಧ್ಯಕ್ಷ ಮಂಜ್ಯಾನಾಯ್ಕ್‌, ಸದಸ್ಯ ನಾಗರಾಜ್‌, ನಿಚ್ಚವ್ವನಹಳ್ಳಿ ಭೀಮಪ್ಪ, ಇಒ ಆರ್‌.ತಿಪ್ಪೇಸ್ವಾಮಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ