ಆ್ಯಪ್ನಗರ

ದಾವಣಗೆರೆ: ಹಬ್ಬದ ನಡುವೆ ಕಾಲಿಟ್ಟ ಚಳಿಗಾಲ

​​ಈ ವಾತಾವರಣ ಹಿಂಗಾರು ಬಿತ್ತನೆ ಮುಗಿಸಿದ ಕೃಷಿಕರಲ್ಲಿ ಯಾವುದೇ ಆತಂಕವನ್ನೂ ಸೃಷ್ಟಿಸಿಲ್ಲ. ಮಂಜಿನ ನೀರಿನಿಂದ ಬೆಳೆಯುವ ಹಿಂಗಾರು ಕೃಷಿಗೆ ಈ ಮಟ್ಟದ ಚಳಿಯಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ.

Vijaya Karnataka Web 11 Nov 2020, 8:06 pm
ದಾವಣಗೆರೆ: ಮಧ್ಯ ಕರ್ನಾಟಕದಲ್ಲಿ ದೀಪಾವಳಿ ಸಮೀಪಿಸುತ್ತಿದ್ದಂತೆ ಚಳಿಗಾಲವೂ ಬಂದಿದೆ. ಎರಡು ವಾರದಿಂದ ಜನ ಹಬ್ಬದ ಹುರುಪಿನಲ್ಲಿ ಇದ್ದರೂ, ತಗ್ಗಿರುವ ತಾಪಮಾನ ಕೊರೊನಾ ದೃಷಿಯಿಂದ ತುಸು ಎಚ್ಚರಿಕೆಯ ಸಂದೇಶವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
Vijaya Karnataka Web ಚಳಿಗಾಲ
ಚಳಿಗಾಲ


ಕಳೆದ 24 ಗಂಟೆಯಲ್ಲಿ ಬೆಳಗಿನ ಜಾವ 16 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಇಳಿದಿತ್ತು. ನಸುಕಿನ ಜಾವ ತುಸು ಮೊದಲೇ ಫ್ಯಾನ್‌ ಆಫ್‌ ಮಾಡಿ ಜನರು ಮೇಲಂಗಿಗಳನ್ನು ಧರಿಸಿದ್ದಲ್ಲದೆ, ಮುಂಜಾನೆ ವಾಯುವಿಹಾರಿಗಳ ಸಂಖ್ಯೆಯೂ ತಗ್ಗಿತ್ತು.

ಬೆಳಗಿನ ಹೊತ್ತು ಬಹುತೇಕ ಜನರು ಟೋಪಿ ಹಾಗೂ ಕೋಟು ಧರಿಸಿರುವುದು ಎಲ್ಲೆಡೆ ಕಂಡಿತು. ಸರಿಯಾಗಿ ಒಂದು ವಾರದಲ್ಲಿ ಉಷ್ಣ ತಾಪಮಾನ ಒಂದು ಡಿಗ್ರಿ ಸೆಲ್ಸಿಯಸ್‌ ಕುಸಿದಿದೆ. ಇನ್ನೆರಡು ದಿನ ಮೋಡದ ವಾತಾವರಣ ಇರಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.

ಈ ವಾತಾವರಣ ಹಿಂಗಾರು ಬಿತ್ತನೆ ಮುಗಿಸಿದ ಕೃಷಿಕರಲ್ಲಿ ಯಾವುದೇ ಆತಂಕವನ್ನೂ ಸೃಷ್ಟಿಸಿಲ್ಲ. ಮಂಜಿನ ನೀರಿನಿಂದ ಬೆಳೆಯುವ ಹಿಂಗಾರು ಕೃಷಿಗೆ ಈ ಮಟ್ಟದ ಚಳಿಯಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಇನ್ನಷ್ಟು ಚಳಿ ಹೆಚ್ಚಿ ಜತೆಗೆ ಮಂಜಿನ ಪ್ರಮಾಣ ಹೆಚ್ಚಿದರೆ ಮಾತ್ರ ಸಸ್ಯಗಳ ಬೆಳವಣಿಗೆ ತೇವಾಂಶ ಹೆಚ್ಚಿ ರೋಗ ಲಕ್ಷಣ ಉಂಟಾಗಬಹುದು ಎಂದು ಚಿತ್ರದುರ್ಗ ಜಿಲ್ಲಾ ಕೃಷಿ ಉಪ ನಿರ್ದೇಶಕ ಸದಾಶಿವ ಹೇಳಿದ್ದಾರೆ.

ಅಸ್ತಮಾ ಜಾಗೃತಿ ಅಗತ್ಯ

ತಗ್ಗುವ ತಾಪಮಾನಕ್ಕೆ ಹೊಂದಿಕೆಯಾಗಿ ದೇಹದ ಉಷ್ಣತೆಯೂ ತಗ್ಗುವುದರಿಂದ ಸಾರ್ವಜನಿಕರು ನಸುಕಿನ ತಂಪು ವಾತಾವರಣದಲ್ಲಿ ಹೋಗುವಾಗ ಜಾಗೃತೆ ವಹಿಸಬೇಕು. ಗಾಳಿಗೆ ಒಡ್ಡಿಕೊಳ್ಳದೆ ಆದಷ್ಟು ಸ್ವೆಟರ್‌, ಮುಖಗವಸುಗಳನ್ನು ಬಳಸಬೇಕು. ಬೆಚ್ಚನೆಯ ಆಹಾರ ಮತ್ತು ಪಾನೀಯ ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ