ಆ್ಯಪ್ನಗರ

ಕಾಂಗ್ರೆಸ್‌ ಸಾಧನೆ ವಂಶಪಾರಂಪರ್ಯ ಆಡಳಿತ

ಆರು ದಶಕಗಳ ಕಾಲ ವಂಶಪಾರಂಪರ್ಯ ಆಡಳಿತ ನಡೆಸಿರುವುದೇ ಕಾಂಗ್ರೆಸ್‌ ಪಕ್ಷ ದ ಸಾಧನೆ ಎಂದು ಕೇಂದ್ರದ ಮಾಜಿ ಸಚಿವ, ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

Vijaya Karnataka 13 Apr 2019, 5:00 am
ಹರಪನಹಳ್ಳಿ : ಆರು ದಶಕಗಳ ಕಾಲ ವಂಶಪಾರಂಪರ್ಯ ಆಡಳಿತ ನಡೆಸಿರುವುದೇ ಕಾಂಗ್ರೆಸ್‌ ಪಕ್ಷ ದ ಸಾಧನೆ ಎಂದು ಕೇಂದ್ರದ ಮಾಜಿ ಸಚಿವ, ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.
Vijaya Karnataka Web congress is a successive succession of achievement
ಕಾಂಗ್ರೆಸ್‌ ಸಾಧನೆ ವಂಶಪಾರಂಪರ್ಯ ಆಡಳಿತ


ತಾಲೂಕಿನ ಯಡಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್‌ ಪರ ಮತಯಾಚಿಸಿ ಮಾತನಾಡಿದರು.

ಮೋದಿ ಮನೆಯಲ್ಲಿ ಯಾರು ರಾಜಕಾರಣದಲ್ಲಿ ಇಲ್ಲ. ಪ್ರಧಾನ ಮಂತ್ರಿಯವರ ತಾಯಿ ಆಟೋ ರೀಕ್ಷಾದಲ್ಲಿ ಬಂದು ಸರಕಾರಿ ಆಸ್ಪತ್ರೆಯಲ್ಲಿ ತೋರಿಸಿಕೊಳ್ಳುತ್ತಾರೆ, ಮೋದಿ ಸಹೋದರರು ಕಿರಾಣಿ ಅಂಗಡಿ ಮತ್ತು ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುತ್ತಾರೆ. ಇದು ಪ್ರಧಾನಿಮಂತ್ರಿಗಳ ಕುಟುಂಬ ವ್ಯವಸ್ಥೆಯಾಗಿದೆ. ಆದರೆ ಕಾಂಗ್ರೆಸ್‌ನ ಸೋನಿಯಾಗಾಂಧಿ ಮಹಿಳಾ ಶ್ರೀಮಂತರ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಇವರದ್ದು ಉದ್ಯೋಗ ಏನು ಎಂದು ಪ್ರಶ್ನಿಸಿದ ಅವರು, ದೇಶ ಲೂಟಿ ಮಾಡಿದ್ದರಿಂದಲೇ ಇಷ್ಟೊಂದು ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿದರು.

ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್‌ ಮಾತನಾಡಿ, ಕಳೆದ 5 ವರ್ಷದಲ್ಲಿ ಮೋದಿ ಆಡಳಿತದಲ್ಲಿ ಪ್ರಧಾನ ಮಂತ್ರಿ ಅವಾಜ್‌ ಯೋಜನೆ, ಜನಧನ್‌ ಸೇರಿದಂತೆ ಅನೇಕ ಜನಪರ ಯೋಜನೆಗಳು ಜಾರಿಗೆ ಬಂದಿವೆ. ಪ್ರಧಾನಿ ಜನೌಷಧಿ ಕೇಂದ್ರ ದಿಂದ ಬಡ ರೋಗಿಗಳಿಗೆ ವರದಾನವಾಗಿದೆ. ಆಯುಷ್ಮನ್‌ ಭಾರತ ಯೋಜನೆ 5 ಲಕ್ಷ ರೂ ಆರೋಗ್ಯ ವಿಮೆ ದೊರೆಯುತ್ತಿದೆ. ಉಜ್ವಲ ಗ್ಯಾಸ್‌ ಯೋಜನೆಯಡಿ ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.

ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ, ಲೋಕಸಭಾ ಚುನಾವಣೆ ಜಾತಿಗೆ ಸೀಮಿತವಾಗಿಲ್ಲ, ದೇಶದ ರಕ್ಷ ಣೆಗೆ ಸಂಬಂಧಿಸಿದ್ದರಿಂದ ಭಾರತ ಮಾತೆ ಕಾಪಾಡಲು ಬಿಜೆಪಿಗೆ ಬೆಂಬಲ ನೀಡಬೇಕು. ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ತುಂಬಿಸುವುದು, ಬಡವರಿಗೆ ಮನೆಗಳ ವಿತರಣೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್‌, ಮುಖಂಡರಾದ ಎಂ.ಪಿ. ನಾಯ್ಕ, ಬಾಗಳಿ ಕೊಟ್ರೇಶಪ್ಪ, ಸಣ್ಣಹಾಲಪ್ಪ, ಎಸ್‌.ಪಿ. ಲಿಂಬ್ಯಾನಾಯ್ಕ, ಬಿ.ವೈ. ವೆಂಕಟೇಶನಾಯ್ಕ, ಎಂ.ಮಲ್ಲೇಶ್‌, ಯಡಿಹಳ್ಳಿ ಶೇಖರಪ್ಪ, ಯು.ಪಿ. ನಾಗರಾಜ್‌, ಸಂತೋಷ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ