ಆ್ಯಪ್ನಗರ

ನನ್ನ ತಂಟೆಗೆ ಬಂದರೆ ಸುಮ್ಮನಿರಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ ರಾಜಕೀಯ ತಣ್ಣಗಾಗಿದೆ. ಪಕ್ಷದವರಿಷ್ಠರು ಮಧ್ಯ ಪ್ರವೇಶಿಸಿ ನಮ್ಮ ಜೊತೆ ಮಾತಾಡಿ ಅಂತ್ಯ ಹಾಡಿದ್ದಾರೆ. ಪಂಚಮಸಾಲಿ ಸಮಾಜದ ದಿಟ್ಟ ಹೆಣ್ಣು ಮಗಳು ನಾನಾಗಿದ್ದು, ನಾನು ಬೇರೆಯವರ ಮನೆ ಇಣುಕಿ ನೋಡಲ್ಲ. ಆದರೆ ನನ್ನನ್ನು ಸುಖಾಸುಮ್ಮನೆ ತಡವಿದರೆ ಹೇಗೆ ಸುಮ್ಮನಿರಲಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ಪ್ರಶ್ನಿಸಿದರು.

Vijaya Karnataka Web 30 Sep 2018, 8:37 pm
ದಾವಣಗೆರೆ: ನಾನಾಗಿ ಯಾರ ಸುದ್ದಿಗೂ ಹೋಗಲ್ಲ, ಆದ್ರೆ ನನ್ನನ್ನು ಸುಖಾ ಸುಮ್ಮನೆ ತಡವಿದರೆ ಸುಮ್ಮನಿರಲು ಆಗಲ್ಲ ಎಂದು ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಪರೋಕ್ಷವಾಗಿ ಜಾರಕಿಹೊಳಿ ಬ್ರದರ್ಸ್‌ ವಿರುದ್ಧ ವಾಗ್ದಾಳಿ ನಡೆಸಿದರು.
Vijaya Karnataka Web Lakshmi hebbalkar


ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದಲ್ಲಿ ಇರುವ ಪಂಚಮಸಾಲಿ ಗುರುಪೀಠದಲ್ಲಿ ನಡೆದ ಮಹಾಂತ ಸ್ವಾಮೀಜಿ ಸ್ಮರಣೋತ್ಸವದಲ್ಲಿ ಮಾತನಾಡಿ, ಬೆಳಗಾವಿ ರಾಜಕೀಯ ತಣ್ಣಗಾಗಿದೆ. ಪಕ್ಷದ ವರಿಷ್ಠರು ಮಧ್ಯ ಪ್ರವೇಶಿಸಿ ನಮ್ಮ ಜೊತೆ ಮಾತಾಡಿ ಅಂತ್ಯ ಹಾಡಿದ್ದಾರೆ. ಪಂಚಮಸಾಲಿ ಸಮಾಜದ ದಿಟ್ಟ ಹೆಣ್ಣು ಮಗಳು ನಾನಾಗಿದ್ದು, ನಾನು ಬೇರೆಯವರ ಮನೆ ಇಣುಕಿ ನೋಡಲ್ಲ. ಆದರೆ ನನ್ನನ್ನು ಸುಖಾಸುಮ್ಮನೆ ತಡವಿದರೆ ಹೇಗೆ ಸುಮ್ಮನಿರಲಿ ಎಂದು ಪ್ರಶ್ನಿಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದಿರಲಿಲ್ಲ. ಆದರೆ ಮನೆಮಗಳಂತೆ ಎಲ್ಲ ಸಮುದಾಯದವರು ನನ್ನನ್ನು ಗೆಲ್ಲಿಸಿದ್ದಾರೆ . ಕೆಲವರು ತುಂಬಾ ಸ್ಪೀಡಾಗಿ ಹೋಗ್ತಾ ಇದೀಯಾ ಎಂದು ಬುದ್ದಿವಾದ ಹೇಳ್ತಾ ಇದ್ದಾರೆ. ಈಗ ಬಹುತೇಕ ಕಡೆ ನನ್ನನ್ನು ‘ಬೆಳಗಾವಿ ಹೆಣ್ಣು ಮೆಟ್ಟಿದ ನಾಡು’ಎನ್ನುತ್ತಿದ್ದಾರೆ. ಶಾಸಕ ಮುರುಗೇಶ್‌ ನಿರಾಣಿ ಕೂಡ ಬೆಳಗಾವಿ ಹೆಣ್ಣುಮೆಟ್ಟಿದ ನೆಲ ಎಂದು ಹೇಳಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮ ಬೆಳಗಾವಿಯವರು. ಜೊತೆಗೆ ಸಂಗೊಳ್ಳಿ ರಾಯಣ್ಣ ಕೂಡಾ ಬೆಳಗಾವಿಯವರು. ಹೀಗಾಗಿ ಬೆಳಗಾವಿ ಹೆಣ್ಣು ಮತ್ತು ಗಂಡು ಸಮನಾಗಿ ಬೆಳೆಸಿದ ನೆಲವಾಗಿದೆ ಎಂದರು.

ಮಾಜಿ ಶಾಸಕ ಸಂಜಯ ಪಾಟೀಲ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಭಾಷೆ, ಸಂಸ್ಕೃತಿ ಎಲ್ಲರಿಗೂ ಗೊತ್ತಿದೆ. ಬೆಳಗಾವಿ ಜಿಲ್ಲೆ ರಾಜಕಾರಣ ಎಲ್ಲ ರಾಜಕಾರಣಿಗಳಿಗೂ ಗೊತ್ತಿದೆ. ಅಣ್ಣನವರ ಮಾತಿಗೆ ನಾನೇನು ಉತ್ತರ ಕೊಡೋದಿಲ್ಲ. ಆದ್ರೆ, ನಾಲ್ಕು ತಿಂಗಳ ಹಿಂದೆ ಕ್ಷೇತ್ರದ ಜನರೇ ಅವರಿಗೆ ಉತ್ತರ ನೀಡಿದ್ದಾರೆ.

ಇನ್ನು ಉತ್ತರ ಬೇಕೆಂದ್ರೆ ನಾಲ್ಕುವರೆ ವರ್ಷವಾದ ಮೇಲೆ ನೀಡುತ್ತೇನೆ. ಆಗ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಲಿ ಆಗ ಜನರು ಮತ್ತೆ ಉತ್ತರ ಕೊಡ್ತಾರೆ ಎಂದರು. ಇನ್ನು ಬಿಜೆಪಿ ಆಮಿಷಕ್ಕೆ ಒಳಗಾಗಿದ್ದಾರೆ ಎಂಬ ಪತ್ರಕರ್ತ ಪ್ರಶ್ನೆಗೆ ಉತ್ತರಿಸಿದ ಹೆಬ್ಬಾಳ್ಕರ್‌, ಸಮಯ ಬಂದಾಗ ಯಡಿಯೂರಪ್ಪರಿಗೆ ಉತ್ತರ ಕೊಡುವುದು ಮಾತ್ರವಲ್ಲದೇ ದಾಖಲೆ ನೀಡುತ್ತೇನೆ. ಈ ಬಗ್ಗೆ ನನ್ನ ಪಕ್ಷದ ವರಿಷ್ಠರ ಜತೆ ಚರ್ಚಿಸುತ್ತೇನೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ