ಆ್ಯಪ್ನಗರ

ದಾವಣಗೆರೆ ಕೊರೊನಾ ಸರಪಳಿಗೆ ಬ್ರೇಕ್‌: ಸಚಿವ ಭೈರತಿ ಬಸವರಾಜ್‌

ಗುಣಮುಖರಾಗುವವರ ಸಂಖ್ಯೆ ಹೆಚ್ಚಳ | ಜೆಜೆಎಂ ಕಾಲೇಜಿನಲ್ಲಿ ಕೋವಿಡ್‌ ಟೆಸ್ಟ್‌ ಲ್ಯಾಬ್‌ | ಕಸ ಎತ್ತಲು 1.19 ಕೋಟಿ ರೂಪಾಯಿ ವೆಚ್ಚದಲ್ಲಿ ಆಟೋ ಟಿಪ್ಪರ್‌ ಖರೀದಿ

Vijaya Karnataka Web 27 May 2020, 12:42 am
ದಾವಣಗೆರೆ : ಜಿಲ್ಲೆಯಲ್ಲಿ ಆತಂಕ ಮೂಡಿಸುವ ರೀತಿಯಲ್ಲಿ ಹೆಚ್ಚುತ್ತಿದ್ದ ಕೊರೊನಾ ಸರಪಳಿ ಮುರಿಯಲು ನಡೆಸಿದ್ದ ಎಲ್ಲರೀತಿಯ ಪ್ರಯತ್ನಕ್ಕೆ ಫಲ ಲಭಿಸುತ್ತಿದೆ ಎಂದು ಹೇಳಿದ ಜಿಲ್ಲಾಉಸ್ತುವಾರಿ ಸಚಿವ ಬೈರತಿ ಬಸವರಾಜ್‌, ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಘಿಸಿದರು.
Vijaya Karnataka Web ಬೈರತಿ ​ಬಸವರಾಜ್‌
ಬೈರತಿ ಬಸವರಾಜ್‌


ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೋವಿಡ್‌ ನಿಯಂತ್ರಣ ಕುರಿತು ಹಿರಿಯ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಜಿಲ್ಲೆಯಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿ ಆಗುತ್ತಿದ್ದವು. ಆದರೆ, ಕೆಲ ದಿನಗಳಿಂದ ಸಂಖ್ಯೆ ಕಡಿಮೆ ಆಗುತ್ತಿದೆ. ಜತೆಗೆ ಗುಣಮುಖರಾಗಿ ಮನೆಗೆ ತೆರಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದೆ. 11 ಪ್ರಕರಣಗಳು ವರದಿಯಾದರೂ ಮೂರು ದಿನದ ಫಲಿತಾಂಶಗಳು ಇಂದು ಒಟ್ಟಿಗೆ ಪ್ರಕಟ ಆಗಿದ್ದು ಈ ಸಂಖ್ಯೆ ದೊಡ್ಡದಾಗಿ ಕಾಣುತ್ತಿದೆ. ಜತೆಗೆ ಈಗ ವರದಿ ಆಗುತ್ತಿರುವ ಎಲ್ಲ ಪ್ರಕರಣಗಳು ಈಗಿರುವ ರೋಗಿಗಳ ಸೆಕೆಂಡರಿ ಸಂಪರ್ಕದವರಾಗಿದ್ದು ಅವರು ಈಗಾಗಲೇ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ತಿಳಿಸಿದರು.

ಜೆಜೆಎಂನಲ್ಲಿಕೋವಿಡ್‌ ಲ್ಯಾಬ್‌:

ಜೆಜೆಎಂ ಮೆಡಿಕಲ್‌ ಕಾಲೇಜಿನಲ್ಲಿಇಂದು ಮತ್ತೊಂದು ಕೋವಿಡ್‌ ಟೆಸ್ಟ್‌ ಲ್ಯಾಬ್‌ ಉದ್ಘಾಟನೆ ಮಾಡಲಾಗಿದೆ. ಈಗಾಗಲೇ ಎಸ್‌ಎಸ್‌ ಆಸ್ಪತ್ರೆ ಸೇರಿ ಎರಡು ಲ್ಯಾಬ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲಾಸ್ಪತ್ರೆಯಲ್ಲಿಲ್ಯಾಬ್‌ ಆರಂಭಿಸಲು ಕೆಲ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಟೆಂಡರ್‌ನಿಂದ ಎರಡು ಕಂಪನಿಗಳು ಹಿಂದೆ ಸರಿದಿದ್ದರಿಂದ ದಾರಿ ತಪ್ಪಿತು. ಹಾಗಾಗಿ ಈಗ ಜೆಜೆಎಂನಲ್ಲಿಲ್ಯಾಬ್‌ ನಿರ್ವಹಿಸುತ್ತಿರುವ ಕಂಪನಿಯೇ ಜಿಲ್ಲಾಸ್ಪತ್ರೆಯಲ್ಲೂಲ್ಯಾಬ್‌ ಆರಂಭಿಸಲಿದೆ. ಈಗಾಗಲೇ ಪರಿಕರಗಳನ್ನು ಅಳವಡಿಸುವ ಕೆಲಸ ನಡೆದಿದೆ ಎಂದು ತಿಳಿಸಿದರು.

ಫಲಿತಾಂಶದ ವಿಳಂಬದ ಬಗ್ಗೆ ಮಾಹಿತಿ ನೀಡಿದ ಸಚಿವರು, ನಮ್ಮ ಲ್ಯಾಬ್‌ನಲ್ಲಿ ಪ್ರತಿದಿನ 100 ಟೆಸ್ಟ್‌ ಮಾತ್ರ ಮಾಡಲು ಸಾಧ್ಯವಿದೆ. ಇದರ ಜತೆ ಹೊರ ಲ್ಯಾಬ್‌ಗಳಿಂದಲೂ ಪರೀಕ್ಷೆ ಮಾಡಿಸಲಾಗುತ್ತಿದೆ. ಪ್ರತಿದಿನ 300 ಕ್ಕೂ ಹೆಚ್ಚು ಪರೀಕ್ಷೆ ನಡೆಯುತ್ತಿದೆ. ಹಳೇ ದಾವಣಗೆರೆ ಸೇರಿ ಕಂಟೇನ್ಮೆಂಟ್‌ ಝೋನ್‌ನಲ್ಲಿನ ಎಲ್ಲನಿವಾಸಿಗಳ ಪರೀಕ್ಷೆ ಮಾಡಿಸಲು ಪ್ರಯತ್ನಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೋವಿಡ್‌ ನಿಯಂತ್ರಣ ಸಭೆಯ ಜತೆ ಇಂದು ಮಹಾನಗರ ಪಾಲಿಕೆ, ಸ್ಮಾರ್ಟ್‌ಸಿಟಿ ಕಾಮಾಗಾರಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದ್ದೇನೆ. ಎಲ್ಲಕಾಮಗಾರಿ ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಹಾನಗರ ಪಾಲಿಕೆಯಿಂದ ವಿಕಲಚೇತನರಿಗೆ ದ್ವಿಚಕ್ರ ವಾಹನ ನೀಡಲಾಗಿದೆ. 1.19 ಕೋಟಿ ರೂ. ವೆಚ್ಚದಲ್ಲಿ ಆಟೋ ಟಿಪ್ಪರ್‌ ಖರೀದಿಸಿದ್ದು, ಅವುಗಳನ್ನು ಇಂದು ಸೇವೆಗೆ ನೀಡಲಾಯಿತು. ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಕೂಡ ನೀಡಲಾಯಿತು ಎಂದು ಮಾಹಿತಿ ನೀಡಿದರು.

ಬುಧವಾರ ಜಿಲ್ಲೆಗೆ ಕಂದಾಯ ಸಚಿವ ಆರ್‌. ಅಶೋಕ್‌ ಮತ್ತು ಸಾರಿಗೆ ಸಚಿವ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಭೇಟಿ ನೀಡಲಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿನ ಸಾರಿಗೆ ವ್ಯವಸ್ಥೆ ಕುರಿತು ಚರ್ಚೆ ನಡೆಯಲಿದೆ. ಈ ಬಗ್ಗೆ ಹಲವು ಶಾಸಕರು ಮನವಿ ಮಾಡಿಕೊಂಡಿದ್ದರು. ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಲಾಗುವುದು ಎಂದರು.

ನದಿಯಿಂದ ಹೆಚ್ಚು ನೀರು ಡ್ರಾ

ನದಿಯಲ್ಲಿ ಸಾಕಷ್ಟು ನೀರು ಹರಿಯುತ್ತಿದ್ದು ಹೆಚ್ಚಿನ ನೀರು ಡ್ರಾ ಮಾಡಿ ನಗರದಲ್ಲಿ ಸಮಸ್ಯೆ ಆಗದಂತೆ ವಿತರಣೆ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ ಜಲಸಿರಿ ಯೋಜನೆಯಡಿ 24 ಗಂಟೆ ನೀರು ವಿತರಿಸುವ ಕಾಮಗಾರಿಗಳು ನಡೆಯುತ್ತಿದ್ದು ಶೇ. 60 ರಷ್ಟು ಕೆಲಸ ಮುಗಿದಿದೆ. ಈ ಕೆಲಸವನ್ನು ಚುರುಕುಗೊಳಿಸಲು ಸೂಚಿಸಲಾಗಿದೆ. ಜತೆಗೆ ಜಿಲ್ಲಾಸ್ಪತ್ರೆಯನ್ನು 25 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ಎಲ್ಲಸೌಲಭ್ಯ ಒದಗಿಸಲು ಸಿಎಂ ಜತೆ ಚರ್ಚಿಸಲಾಗಿದೆ ಎಂದು ಸಚಿವ ಬಸವರಾಜ್‌ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ