ಆ್ಯಪ್ನಗರ

ಕೋರ್ಟ್‌ ವಾರೆಂಟ್‌: ಅಭಯ ನೀಡಿದ ಶಾಸಕ

ಎಲ್‌ಆ್ಯಂಡ್‌ಟಿ ಫೈನಾನ್ಸ್‌ ಕಂಪನಿ ನೀಡಿದ ಸಾಲಕ್ಕೆ ಸಂಬಂಧಿಸಿ ಕೋಲ್ಕತ್ತಾ ಕೋರ್ಟ್‌ ವಾರೆಂಟ್‌ ಹೊರಡಿಸಿರುವ ಹಿನ್ನಲೆಯಲ್ಲಿ ತೋಪೆನಹಳ್ಳಿ ಗ್ರಾಮದ ಐವರು ರೈತ ಮಹಿಳೆಯರನ್ನು ಸೋಮವಾರ ಭೇಟಿ ಮಾಡಿ ಶಾಸಕ ಮಾಡಾಳ್‌ ವಿರುಪಾಕ್ಷ ಪ್ಪ ಧೈರ್ಯ ತುಂಬಿದರು.

Vijaya Karnataka 4 Dec 2018, 5:00 am
ಸಂತೆಬೆನ್ನೂರು: ಎಲ್‌ಆ್ಯಂಡ್‌ಟಿ ಫೈನಾನ್ಸ್‌ ಕಂಪನಿ ನೀಡಿದ ಸಾಲಕ್ಕೆ ಸಂಬಂಧಿಸಿ ಕೋಲ್ಕತ್ತಾ ಕೋರ್ಟ್‌ ವಾರೆಂಟ್‌ ಹೊರಡಿಸಿರುವ ಹಿನ್ನಲೆಯಲ್ಲಿ ತೋಪೆನಹಳ್ಳಿ ಗ್ರಾಮದ ಐವರು ರೈತ ಮಹಿಳೆಯರನ್ನು ಸೋಮವಾರ ಭೇಟಿ ಮಾಡಿ ಶಾಸಕ ಮಾಡಾಳ್‌ ವಿರುಪಾಕ್ಷ ಪ್ಪ ಧೈರ್ಯ ತುಂಬಿದರು.
Vijaya Karnataka Web court warrant mla of the legislative assembly
ಕೋರ್ಟ್‌ ವಾರೆಂಟ್‌: ಅಭಯ ನೀಡಿದ ಶಾಸಕ


ಈ ಕುರಿತು ವಿಜಯ ಕರ್ನಾಟಕ ಡಿ.1ರ ಸಂಚಿಕೆಯಲ್ಲಿ 'ರೈತ ಮಹಿಳೆಯರಿಗೆ ಕೋಲ್ಕತ್ತಾ ಕೋರ್ಟ್‌ ನೋಟಿಸ್‌!' ಎಂಬ ಶಿರ್ಷೀಕೆ ಅಡಿಯಲ್ಲಿ ವರದಿ ಪ್ರಕಟಿಸಿತ್ತು. ಇದರನ್ವಯ ತೋಪೆನಹಳ್ಳಿಗೆ ಭೇಟಿ ನೀಡಿದ ಶಾಸಕರು, ಕಂಪನಿಗೆ ಕೇಸ್‌ ವಾಪಸ್‌ ತೆಗೆದುಕೊಳ್ಳಲು ಸೂಚಿಸಲಾಗಿದೆ. ಕಂಪನಿ ಅಧಿಕಾರಿಗಳ ಜತೆ ಮಾತನಾಡಿದ್ದು ಬಂಧನ ವಾರೆಂಟ್‌ ನೀಡಿರುವುದನ್ನು ವಾಪಸ್‌ ತೆಗೆದು, ಮಹಿಳೆಯರು ಪಡೆದಿರುವ ಅಸಲು ಸಾಲದಲ್ಲಿ ಶೇ.20 ಹಾಗೂ ಬಡ್ಡಿಗೆ ವಿನಾಯಿತಿ ನೀಡಲು ಸೂಚಿಸಿರುವೆ. ಜತೆಗೆ ಉಳಿದ ಹಣ ಕಟ್ಟಲು ಸಮಯ ನೀಡಲು ಸೂಚಿಸಿದ್ದೇನೆ. ಇನ್ನು ಭಯ ಎಲ್ಲಿದೆ. ಧೈರ್ಯವಾಗಿರಿ ಎಂದು ಶಾಸಕ ಮಾಡಾಳ್‌ ವಿರುಪಾಕ್ಷ ಪ್ಪ ಸಾಲ ಪಡೆದ ಮಹಿಳೆಯರಿಗೆ ಅತ್ಮಸ್ಥೈರ್ಯ ತುಂಬಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ