ಆ್ಯಪ್ನಗರ

ದಾವಣಗೆರೆ ಕ್ರೈಂ ನ್ಯೂಸ್ ರೌಂಡಪ್: ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕಟ್ಟಿದ್ದ ಕುರಿಗಳು ಬೆಳಗ್ಗೆ ಮಾಯ..!

ದಾವಣಗೆರೆ ಜಿಲ್ಲೆಯ ಹಲವೆಡೆ ನಡೆದ ಅಪರಾಧ ಸುದ್ದಿಗಳ ಸಮಗ್ರ ರೌಂಡಪ್ ಇಲ್ಲಿದೆ. ಜಿಲ್ಲೆಯ ವಿವಿದೆಡೆ ಶನಿವಾರ ಹಾಗೂ ಭಾನುವಾರ ನಡೆದ ವಿವಿಧ ಅಪರಾಧ ಕೃತ್ಯಗಳ ಸಮಗ್ರ ರೌಂಡಪ್ ವಿವರ ಇಲ್ಲಿ ನೀಡಲಾಗಿದೆ.

Vijaya Karnataka 26 Sep 2021, 3:32 pm
ದಾವಣಗೆರೆ: ದಾವಣಗೆರೆ ಜಿಲ್ಲೆಯ ಹಲವೆಡೆ ಭಾನುವಾರ ನಡೆದ ಅಪರಾಧ ಸುದ್ದಿಗಳ ಸಮಗ್ರ ಚಿತ್ರಣ ಇಲ್ಲಿದೆ:
Vijaya Karnataka Web crime
ದಾವಣಗೆರೆ ಕ್ರೈಂ ನ್ಯೂಸ್ ರೌಂಡಪ್: ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕಟ್ಟಿದ್ದ ಕುರಿಗಳು ಬೆಳಗ್ಗೆ ಮಾಯ..!


ಬಹಿರ್ದೆಸೆಗೆ ಹೋದಾಗ ಗೊತ್ತಾಯಿತು ಕುರಿಗಳ ಕಳ್ಳತನ..!


ಮಾಯಕೊಂಡ: ಜೀವನೋಪಾಯಕ್ಕಾಗಿ ಸಾಕಿದ್ದ 55 ಸಾವಿರ ಮೌಲ್ಯದ 5 ಕುರಿಗಳನ್ನು ಕಳ್ಳರು ಕದ್ದಿರುವ ಘಟನೆ, ದಾವಣಗೆರೆ ಜಿಲ್ಲೆ ಮಾಯಕೊಂಡದ ಅಣಬೇರು ಗ್ರಾಮದ ಪ್ರಕಾಶ್‌ ಎಂಬುವರ ಮನೆಯಲ್ಲಿ ನಡೆದಿದೆ. ಇವರು ಕುರಿಗಳನ್ನು ಪ್ರತಿ ದಿನ ಮೇಯಿಸಿಕೊಂಡು ಬಂದು ಮನೆಯ ದನದ ಕೊಟ್ಟಿಗೆಯಲ್ಲಿ ಕಟ್ಟುತ್ತಿದ್ದರು. ರಾತ್ರಿ ಕುರಿಗಳನ್ನು ಕದ್ದುಕೊಂಡು ಹೋಗಿದ್ದಾರೆ. ಮಾಯಕೊಂಡ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಚಪ್ಪಲಿ ಅಂಗಡಿಯಲ್ಲಿಕಳ್ಳತನ

ನ್ಯಾಮತಿ: ಶೂ ಅಂಗಡಿ ತಗಡು ಮುರಿದು 4800 ರೂ. ಬೆಲೆಯ 8 ಜತೆ ಶೂ, 1300 ಮೌಲ್ಯದ 7 ಜತೆ ಲೂನಾರ್ಸ್‌ ಕಂಪನಿ ಚಪ್ಪಲಿಗಳು, 1,300 ನಗದು ಹಣವನ್ನು ಕಳ್ಳತನ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆ ನ್ಯಾಮತಿಯ ಚೀಲೂರು ಗ್ರಾಮದ ಕರ್ನಾಟಕ ಪುಟ್‌ ವೇರ್‌ ಅಂಗಡಿಯಲ್ಲಿ ನಡೆದಿದೆ. ಅಂಗಡಿ ಮಾಲೀಕ ಅಸ್ಲಮ್‌ ಪಾಷಾ ನ್ಯಾಮತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಸ್ತೆಯಾಗುವವರೆಗೂ ಮದುವೆಯಾಗಲ್ಲ ಎಂದು ಶಪಥಗೈದ ಯುವತಿಯ ಊರಿಗೆ ರಸ್ತೆಯೂ ಆಯ್ತು... ಬಸ್ಸೂ ಬಂತು!
ಜೂಜು: ಐವರ ಬಂಧನ

ಸಂತೆಬೆನ್ನೂರು: ದಾವಣಗೆರೆ ಜಿಲ್ಲೆ ಸಂತೆಬೆನ್ನೂರಿನ ಕಾಕನೂರು ಗ್ರಾಮದ ಯಕ್ಕೆಗೊಂದಿ ಶಾರದಮ್ಮ ಎಂಬುವರ ಜಮೀನಿನ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಟೀಟ್‌ ಆಟವಾಡುತ್ತಿದ್ದ 5 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 6130 ರೂ ನಗದು , 52 ಇಸ್ಪಿಟ್‌ ಎಲೆಗಳು, ಒಂದು ಪ್ಲಾಸ್ಟಿಕ್‌ ಪಾಚ್‌ ವಶಪಡಿಸಿಕೊಳ್ಳಲಾಗಿದೆ. ಬಂಧಿತರೆಲ್ಲ ಚಿಕ್ಕಬೆನ್ನೂರು ಗ್ರಾಮ, ದಾವಣಗೆರೆ ನಿಟ್ಟುವಳ್ಳಿಯವರು. ಸಂತೆಬೆನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಗಾರ ಕಿತ್ತುಕೊಂಡ ದುಷ್ಕರ್ಮಿಗಳು

ದಾವಣಗೆರೆ: ವಾಕಿಂಗ್‌ ಹೋದ ಸಂದರ್ಭದಲ್ಲಿ ಆಂಟಿಯರಿಗೆ ಪೋನ್‌ ಮಾಡ್ತೀಯಾ ನೀನು ಎಂದು ಹೆದರಿಸಿದರಲ್ಲದೇ ಚಾಕು ತೋರಿಸಿ 45 ಸಾವಿರ ಮೌಲ್ಯದ 10 ಗ್ರಾಂ ತೂಕದ ಬಂಗಾರದ ಸರ, 30 ಸಾವಿರ ಬೆಲೆಯ ಉಂಗುರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ದಾವಣಗೆರೆ ನಗರದ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಶನಿವಾರ ನಡೆದಿದೆ. ಶಿವಪ್ರಕಾಶ್‌ ಬಂಗಾರ ಕಳೆದುಕೊಂಡ ವ್ಯಕ್ತಿ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಊಟಕೊಟ್ಟು ಬರುತ್ತಿರುವ ವೇಳೆ ಅಪಘಾತ : ಬಾಲಕ ಸಾವು

ದಾವಣಗೆರೆ: ಚಿಗಟೇರಿ ಆಸ್ಪತ್ರೆಗೆ ಹೋಗಿ ತನ್ನ ಸಂಬಂಧಿಕರಿಗೆ ಬೈಕ್‌ನಲ್ಲಿ ಊಟ ಕೊಟ್ಟು ಬರುವ ವೇಳೆ ಅಪರಿಚಿತ ವಾಹನವೊಂದು ಢಿಕ್ಕಿಯಾದ ಪರಿಣಾಮ ಕೊಡಗನೂರು ಗ್ರಾಮದ ಅಜಂ (16) ಬಾಲಕ ಮೃತಪಟ್ಟಿರುವ ಘಟನೆ ಮಲ್ಲಶೆಟ್ಟಿಹಳ್ಳಿ ಗ್ರಾಮದ ಬಳಿ ನಡೆದಿದೆ. ಬೈಕ್‌ನಲ್ಲಿ ಮೂವರು ಹೋಗುತ್ತಿದ್ದು ಮಹಬೂಬ್‌ ಬಾಷಾ, ಕುಸ್ರ್ತ ಉನ್ನಿಸಾರಿಗೆ ತೀವ್ರ ಗಾಯಗಳಾಗಿವೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ