ಆ್ಯಪ್ನಗರ

ಹೆಂಡತಿಯಿಂದಲೇ ಗಂಡನ ಕಿಡ್ನಾಪ್! ಒಂಟಿ ಮನೆಯಲ್ಲಿ ಬಂಧಿಯಾಗಿದ್ದ ಬಂಕ್‌ ಮಾಲೀಕ!

'ಪೊಲೀಸರು ಸ್ಥಳಕ್ಕೆ ಬಾರದೇ ಹೋಗಿದ್ದರೆ, ನನ್ನನ್ನು ಏನು ಮಾಡುತ್ತಿದ್ದರೋ ಎಂದು ನನಗೆ ಗೊತ್ತಿಲ್ಲ. ಅದೃಷ್ಟವಶಾತ್‌ ನಾನು ಬದುಕಿದ್ದೇನೆ.' - ಪತ್ನಿಯಿಂದಲೇ ಕಿಡ್ನಾಪ್ ಆಗಿದ್ದ ಪತಿ ಶ್ರೀನಿವಾಸ್ ಆತಂಕದ ನುಡಿ

Vijaya Karnataka Web 30 Nov 2019, 11:30 am
ದಾವಣಗೆರೆ: ಪತ್ನಿಯೇ ಪತಿಯನ್ನು ಕಿಡ್ನಾಪ್‌ ಮಾಡಿ, ಪೊಲೀಸರ ಅತಿಥಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹದಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಸಂಗೀತಾ ಎಂಬಾಕೆಯ ಕೃತ್ಯವಿದು. ತನ್ನ ಸಹಚರರನ್ನು ಬಳಸಿಕೊಂಡ ಈ ಖತರ್‌ನಾಕ್‌ ಪತ್ನಿ, ಲೋಕಿಕೆರೆ ಗ್ರಾಮದ ಪೆಟ್ರೋಲ್‌ ಬಂಕ್‌ ಮಾಲೀಕ ಶ್ರೀನಿವಾಸ್‌ರನ್ನು ಕಿಡ್ನಾಪ್‌ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
Vijaya Karnataka Web kidnaper wife
ಸಂಗೀತಾ


ಕಿಡ್ನಾಪರ್ ಬಂಧನಕ್ಕೆ 7 ತಿಂಗಳು ಕಾದಿದ್ರು ಪೊಲೀಸರು! ಒಂದೇ ಒಂದು ಫೋನ್ ಕರೆ ಕೊಡ್ತು ರಿಸಲ್ಟ್!

ಗಂಡನನ್ನೇ ಹೆಂಡ್ತಿ ಕಿಡ್ನಾಪ್ ಮಾಡಿದ್ದು ಏಕೆ..?

2015ರಲ್ಲಿ ಸಂಗೀತಾ ಮತ್ತು ಶ್ರೀನಿವಾಸರ ಮದುವೆಯಾಗಿತ್ತು. ಎಂಟರಿಂದ ಹತ್ತು ತಿಂಗಳು ಮಾತ್ರ ಜತೆಗಿದ್ದರು. ನಂತರ 2018ರಲ್ಲಿ ವಿವಾಹ ವಿಚ್ಛೇದನಕ್ಕಾಗಿ ಕೋರ್ಟ್‌ ಮೆಟ್ಟಿಲು ಏರಿದ್ದರು. ಹದಡಿಯಲ್ಲಿ ಪೆಟ್ರೋಲ್‌ ಬಂಕ್‌ ನಡೆಸುತ್ತಿದ್ದ ಶ್ರೀನಿವಾಸ್, ನವೆಂಬರ್ 27ರ ರಾತ್ರಿ 8 ಗಂಟೆಗೆ ಕೆಲಸಗಾರರಿಂದ 46,285 ರೂ. ಕಲೆಕ್ಷನ್‌ ಹಣ ಪಡೆದು ಬೈಕ್‌ನಲ್ಲಿ ಮನೆಗೆ ಹೊರಟಿದ್ದರು. ಆದರೆ, ರಾತ್ರಿ 9.30 ಆದರೂ ಲೋಕಿಕೆರೆಯಲ್ಲಿರುವ ತನ್ನ ಮನೆಗೆ ಶ್ರೀನಿವಾಸ್‌ ವಾಪಸ್ಸಾಗಿರಲಿಲ್ಲ. ಇದರಿಂದ ಆತಂಕಗೊಂಡ ತಾಯಿ ಪಾರ್ವತಮ್ಮ ತನ್ನ ಮಗ ಮನೆಗೆ ಬಂದಿಲ್ಲ ಎಂದು ಹುಡುಕಾಡತೊಡಗಿದರು. ಈ ವೇಳೆ, ದಾರಿಯಲ್ಲಿ ಶ್ರೀನಿವಾಸ್‌ ಬೈಕ್‌ ಬಿದ್ದಿರುವುದು ಕಂಡು ಬಂತು. ಈ ಕುರಿತು ಹದಡಿ ಠಾಣೆಯಲ್ಲಿ ಪ್ರಕರಣ ದಾಖಲಾಯ್ತು.

ಸ್ನೇಹಿತನಿಂದಲೇ ಅಪಹರಣ, ತಿಂಗಳುಗಟ್ಟಲೆ ಗೃಹಬಂಧನ! ಆಸ್ತಿಗಾಗಿ ಪೀಡಿಸಿದ್ದನಂತೆ ಫ್ರೆಂಡ್!

ತನಿಖೆ ಕೈಗೆತ್ತಿಕೊಂಡ ಪೊಲೀಸರು, ಶಿವಮೊಗ್ಗದ ಆಯನೂರಿನ ಮನೆಯೊಂದರಲ್ಲಿ ಕೂಡಿಹಾಕಲಾಗಿದ್ದ ಶ್ರೀನಿವಾಸ್‌ರನ್ನು ರಕ್ಷಿಸಿದ್ದಾರೆ. ಕಿಡ್ನಾಪ್ ಮಾಡಿದ್ದ ಶ್ರೀನಿವಾಸ್ ಪತ್ನಿ ಸಂಗೀತಾ ಮತ್ತು ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸ್, 'ಪೊಲೀಸರು ಸ್ಥಳಕ್ಕೆ ಬಾರದೇ ಹೋಗಿದ್ದರೆ, ನನ್ನನ್ನು ಏನು ಮಾಡುತ್ತಿದ್ದರೋ ಎಂದು ನನಗೆ ಗೊತ್ತಿಲ್ಲ. ಅದೃಷ್ಟವಶಾತ್‌ ನಾನು ಬದುಕಿದ್ದೇನೆ.' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

'ಪೆಟ್ರೋಲ್‌ ಬಂಕ್‌ ಮಾಲೀಕ ಶ್ರೀನಿವಾಸ್‌ನನ್ನು ಕಿಡ್ನಾಪ್‌ ಮಾಡಿದ ಸಂಗೀತಾ ಕಡೆಯವರು ಆಯನೂರಿನಲ್ಲಿಇಟ್ಟಿದ್ದರು. ಪ್ರಕರಣದ ಹಿಂದೆ ಇನ್ನೂ ಮೂರ್ನಾಲ್ಕು ಜನ ಇದ್ದಾರೆ, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ದಾವಣಗೆರೆ ಎಸ್ಪಿ ಹನುಮಂತರಾಯ ಹೇಳಿದ್ಧಾರೆ.

ವಾಂತಿ ಕ್ಲೀನ್ ಮಾಡ್ಲಿಲ್ಲವೆಂದು ಅತ್ತೆಯನ್ನೇ ಕೊಂದ ಸೊಸೆ! 7 ವರ್ಷದ ಬಾಲಕ ಹೇಳಿದ ಸಾಕ್ಷಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ