ಆ್ಯಪ್ನಗರ

ಶವಾಗಾರದಲ್ಲಿ ಶವ ಅದಲು ಬದಲು: ಗೊತ್ತಾದಾಗ ಮುಗಿದಿತ್ತು ಅಂತ್ಯಕ್ರಿಯೆ!

ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದ ವೇಳೆ ಶವಾಗಾರದಲ್ಲಿಶವ ಅದಲು ಬದಲಾದ ಪ್ರಕರಣ ಬೆಳಕಿಗೆ ಬಂದಿದೆ.

Vijaya Karnataka 24 Nov 2017, 11:49 am
ದಾವಣಗೆರೆ ಶವಾಗರದ ಅವಾಂತರ
Vijaya Karnataka Web dead body exchange in davanagere mortuary
ಶವಾಗಾರದಲ್ಲಿ ಶವ ಅದಲು ಬದಲು: ಗೊತ್ತಾದಾಗ ಮುಗಿದಿತ್ತು ಅಂತ್ಯಕ್ರಿಯೆ!


ದಾವಣಗೆರೆ: ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದ ವೇಳೆ ಶವಾಗಾರದಲ್ಲಿಶವ ಅದಲು ಬದಲಾದ ಪ್ರಕರಣ ಬೆಳಕಿಗೆ ಬಂದಿದೆ.

ಶವ ಪಡೆದ ಒಂದು ಕುಟುಂಬ ದಹನದ ಮೂಲಕ ಅಂತ್ಯಕ್ರಿಯೆ ನಡೆಸಿದ್ದಾರೆ. ತಾಯಿ ಶವದ ಬದಲಾಗಿ ಮತಾöರಧ್ದೋ ಹೆಣ ನೋಡಿದ ಮತ್ತೊಂದು ಕುಟುಂಬದವರು ಹೌಹಾರಿ ಜಿಲ್ಲಾಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸಿದರು.

ಪೊಲೀಸರು, ಜಿಲ್ಲಾಸ್ಪತ್ರೆ ವೈದ್ಯರು, ಸಮಾಜದ ಮುಖಂಡರು ಮಧ್ಯ ಪ್ರವೇಶಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ ಘಟನೆ ಗುರುವಾರ ಜಿಲ್ಲಾಸ್ಪತ್ರೆಯಲ್ಲಿನಡೆಯಿತು.

ಶವ ಅದಲು ಬದಲು ಬೆಳಕಿಗೆ ಬರುತ್ತಿದ್ದಂತೆ ಎರಡೂ ಕುಟುಂಬದವರು ಜಿಲ್ಲಾಸ್ಪತ್ರೆ ಬಳಿ ನೆರೆದರು. ತಾಯಿ ಶವದ ಬದಲಿಗೆ ಇನ್ಯಾರಧ್ದೋ ಶವ ನೀಡಿದಾಗ ಈ ಕುಟುಂಬದವರು, ಸಂಬಂಧಿಕರು ಶವಾಗಾರದ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನಡೆದಿದ್ದೇನು?

ಜಿಲ್ಲೆಯ ಮಲೆಬೆನ್ನೂರಿನ ಶಿಲ್ಪಾ (25) ಎಂಬ ಮಹಿಳೆ ಕೌಟುಂಬಿಕ ಕಲಹದಿಂದ ವಿಷ ಸೇವಿಸಿ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಬುಧವಾರ ಮಧ್ಯಾಹ್ನ 12ರ ಸುಮಾರು ಮೃತ ಪಟ್ಟಿದ್ದರು. ಇದೇ ಆಸ್ಪತ್ರೆಯಲ್ಲಿಚಿಕಿತ್ಸೆಗೆಂದು ದಾಖಲಾಗಿದ್ದ ದಾವಣಗೆರೆ ಗಾಂಧಿನಗರ ಠಾಣೆ ವ್ಯಾಪ್ತಿಯ ದೊಡ್ಡ ಬೂದಿಹಾಳ್‌ ಗ್ರಾಮದ ಕೆಂಚಮ್ಮ (60) ಎಂಬವರು ಕೂಡ ಬುಧವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಮೃತ ಪಟ್ಟಿದ್ದರು.

ಮರಣೋತ್ತರ ಪರೀಕ್ಷೆಗಾಗಿ ಶವಗಾರದಲ್ಲಿಇಬ್ಬರ ಶವಗಳನ್ನು ಇಡಲಾಗಿತ್ತು. ಈಗ ಮರಣೋತ್ತರ ಪರೀಕ್ಷೆ ಸಾಧ್ಯವಿಲ್ಲ ಎಂದಾಗ ಬೆಳಗ್ಗೆ ಬಂದು ಪರೀಕ್ಷೆ ಮಾಡಿಸಿ ಶವ ತೆಗೆದುಕೊಂಡರಾಯಿತು ಎಂದು ಕೆಂಚಮ್ಮ ಸಂಬಂಧಿಕರು ಹೊರಟು ಹೋಗಿದ್ದರು.

ಶಿಲ್ಪ ಪೋಷಕರು ಮಾತ್ರ ಈಗಲೇ ಮರಣ ಪರೀಕ್ಷೆ ಆಗಬೇಕು ಎಂದು ಒತ್ತಡ ತಂದಿದ್ದರು. ಶಿಲ್ಪ ಬದಲಿಗೆ ಕೆಂಚಮ್ಮನ ಶವ ಪರೀಕ್ಷೆ ನಡೆಯಿತು. ನಂತರ ಆ ಕುಟುಂಬದವರು ರಾತ್ರಿಯೇ ತಮ್ಮ ಸುಪರ್ದಿಗೆ ಶವ ಪಡೆದುಕೊಂಡರು. ತಮ್ಮ ಊರು ಮಲೆಬೆನ್ನೂರಿಗೆ ಹೋಗಿ ರಾತ್ರಿ 12ರ ವೇಳೆಯಲ್ಲಿಯೇ ದಹನದೊಂದಿಗೆ ಅಂತ್ಯಕ್ರಿಯೆ ನಡೆಸಿದ್ದಾರೆ.

ಬೆಳಗ್ಗೆ ತಮ್ಮ ತಾಯಿ ಶವ ಪಡೆಯಲು ಬಂದ ಕೆಂಚಮ್ಮನ ಪುತ್ರರು ಶವಾಗಾರದಲ್ಲಿತಮ್ಮ ತಾಯಿ ಶವ ಇಲ್ಲದೆ ಅದಲು ಬದಲು ಆಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಸಂಬಂಧಿಕರು ಶವಾಗಾರದ ಬಳಿ ಜಮಾಯಿಸಿದರು. ನಮ್ಮ ತಾಯಿ ಶವ ಅದಲು ಬದಲಾಗಿದೆ. ನಮಗೆ ನಮ್ಮ ತಾಯಿ ಶವ ಬೇಕು. ಅವರ ಮುಖ ನೋಡಬೇಕು ಎಂದು ಪುತ್ರ ಹನುಮಂತು ಆಕ್ರೋಶ ವ್ಯಕ್ತಪಡಿಸಿದರು. ಸಂಬಂಧಿಕರು, ಗ್ರಾಮಸ್ಥರು ಕೆಲ ಕಾಲ ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿದರು.

ಕುಟುಂಬಗಳ ಮಾತುಕತೆ: ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಗಾಂಧಿನಗರದ ಮುಖಂಡರು ಎರಡೂ ಕುಟುಂಬದವರನ್ನು ಸೇರಿಸಿ ಮಾತುಕತೆ ನಡೆಸಿದರು. ಶವ ಅದಲು ಬದಲು ಬಗ್ಗೆ ಕೆಂಚಮ್ಮ ಕುಟುಂಬದವರು ವೈದ್ಯರ ನಿರ್ಲಕ್ಷ್ಯ ಎಂದು ದೂರಿದರು. ನಂತರ ಕೆಂಚಮ್ಮನ ಶವದ ಚಿತಾಭಸ್ಮ ತಂದು ಅಂತ್ಯಸಂಸ್ಕಾರ ಮಾಡುವಂತೆ ಕುಟುಂಬದವರ ಮನವೊಲಿಸಿದಾಗ ಒಪ್ಪಿಕೊಂಡರು. ಶಿಲ್ಪ ಶವವನ್ನು ಅವರ ಕುಟುಂಬಕ್ಕೆ ಒಪ್ಪಿಸಲಾಯಿತು.

ಬಿಗಿ ಬಂದೋಬಸ್ತ್

ಶವ ಅದಲು ಬದಲು ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆ ಶವಾಗಾರದಲ್ಲಿಕುಟಂಬದವರು, ಸಂಬಂಧಿಕರು, ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿನೆರದಿದ್ದರಿಂದ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಇಬ್ಬರು ಡಿವೈಎಸ್ಪಿ, ಸರ್ಕಲ್‌ ಇನ್‌ಸ್ಪೆಕ್ಟರ್‌ಗಳು ಇಲ್ಲಿಯೇ ಬೀಡು ಬಿಟ್ಟುಕುಟುಂಬದವರ ಮನವೊಲಿಸಿದರು.

ಶವ ತೆಗೆದುಕೊಂಡು ಹೋಗುವಾಗ ಕುಟುಂಬದವರು ತಮ್ಮದೇ ಎಂದು ಗುರುತಿಸಿದ್ದಾರೆ. ಶವದ ಜತೆ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ. ನಂತರ ಎರಡೂ ಕುಟುಂಬದವರು, ಪೊಲೀಸರು ಸೇರಿ ಮಾತುಕತೆ ನಡೆಸಿ ತಾವೇ ತೀರ್ಮಾನ ಕೈಗೊಂಡಿದ್ದಾರೆ.

ಡಾ.ನೀಲಾಂಬಿಕೆ, ಜಿಲ್ಲಾಸ್ಪತ್ರೆ ಅಧೀಕ್ಷಕಿ

ನಾವು ಎಷ್ಟೇ ವಿನಂತಿ ಮಾಡಿದರೂ ಮರಣೋತ್ತರ ಪರೀಕ್ಷೆ ಮಾಡಿಕೊಡಲಿಲ್ಲ , ರಾತ್ರಿಯೇ ಪೋಸ್ಟ್‌ಮಾರ್ಟ್‌ ಮಾಡಿಕೊಟ್ಟಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ತಪ್ಪು ಮಾಡಿರುವ ವೈದ್ಯರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
ಹನುಮಂತು, ಕೆಂಚಮ್ಮ ಪುತ್ರ

ರಾತ್ರಿ ಆಗಿದ್ದರಿಂದ ನಾವು ಶವವನ್ನು ಸರಿಯಾಗಿ ಗುರುತಿಸಲು ಆಗಲಿಲ್ಲ , ಗೊಂದಲದಿಂದ ಈ ಕೆಲಸ ಆಗಿದೆ. ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ , ಗೊತ್ತಾಗದೆ ನಮ್ಮಿಂದ ಈ ತಪ್ಪಾಗಿದೆ.
ಗುರುರಾಜ್‌, ಶಿಲ್ಪ ಸಹೋದರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ