ಆ್ಯಪ್ನಗರ

ಹಳ್ಳಿಕಾರ್‌, ಮೈಸೂರು ಹೋರಿಗೆ ಡಿಮ್ಯಾಂಡ್‌!

ಶ್ರೀ ಹರಿಹರೇಶ್ವರ ಜಾತ್ರೆ ನಿಮಿತ್ತ ನಗರದಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಂಡಿರುವ ದನಗಳ ಜಾತ್ರೆಗೆ ರೈತರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಮೈಸೂರಿನ ಹೋರಿಗಳು, ಅಮೃತ್‌ ತಳಿ, ಹಳ್ಳಿಕಾರ್‌ ಹೋರಿಗಳು ರೈತರ ಕಣ್ಮನ ಸೆಳೆಯುವಂತಿವೆ.

Vijaya Karnataka 22 Feb 2019, 5:00 am
ಹರಿಹರ : ಶ್ರೀ ಹರಿಹರೇಶ್ವರ ಜಾತ್ರೆ ನಿಮಿತ್ತ ನಗರದಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಂಡಿರುವ ದನಗಳ ಜಾತ್ರೆಗೆ ರೈತರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಮೈಸೂರಿನ ಹೋರಿಗಳು, ಅಮೃತ್‌ ತಳಿ, ಹಳ್ಳಿಕಾರ್‌ ಹೋರಿಗಳು ರೈತರ ಕಣ್ಮನ ಸೆಳೆಯುವಂತಿವೆ.
Vijaya Karnataka Web demand for hallikar mysore bull
ಹಳ್ಳಿಕಾರ್‌, ಮೈಸೂರು ಹೋರಿಗೆ ಡಿಮ್ಯಾಂಡ್‌!


ಕಳೆದ 6- 7 ದಶಕಗಳ ಹಿಂದೆ ನಗರದ ಸಂಗಮೇಶ್ವರ ದೇವರ ಜಾತ್ರೆ ನಿಮಿತ್ತ ವಾರಗಟ್ಟಲೆ ದನಗಳ ಜಾತ್ರೆ ನಡೆಯುತ್ತಿತ್ತು. ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಜಾತ್ರೆ ಈಗ ಮತ್ತೆ ಮರುಜೀವ ಪಡೆದುಕೊಂಡಿದೆ. ಐತಿಹಾಸಿಕ ಪ್ರಸಿದ್ಧ ಹರಿಹರೇಶ್ವರ ದೇವಾಲಯವಿರುವ, ರಾಜ್ಯದ ಕೇಂದ್ರ ಸ್ಥಳವಾದ ನಗರದಲ್ಲಿ ನಡೆಯುವ ಜಾತ್ರೆ ಸುತ್ತಲ ಎಲ್ಲ ರೈತರಿಗೆ ಉಪಯುಕ್ತವಾಗುತ್ತಿದೆ.

ದನಗಳ ಜಾತ್ರೆ ಮೊದಲ ಸಲ ನಡೆಯುತ್ತಿದ್ದರಿಂದ ಹಾಗೂ ಪ್ರಚಾರದ ಕೊರತೆಯಿಂದ ಮೊದಲ ದಿನ ಹೆಚ್ಚಿನ ಸಂಖ್ಯೆಯ ದನಗಳು ಭಾಗವಹಿಸಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ದನಗಳ ಸಂಖ್ಯೆ ವೃದ್ಧಿಸಿದ್ದು, ದನಗಳ ಮಾರಾಟಗಾರರು, ಖರೀದಿದಾರರು ಸಹ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.

ಮೈಸೂರು ಹೋರಿಗೆ 2 ಲಕ್ಷ: ನಗರದ ರಸೂಲ್‌ ಎಂಬುವರು ಇತ್ತೀಚಿಗಷ್ಟೆ ಮೈಸೂರಿನಿಂದ ತಂದಿರುವ ಎರಡು ಹೋರಿಗಳನ್ನು ಪ್ರದರ್ಶನದಲ್ಲಿಟ್ಟಿದ್ದು, ನೋಡುಗರ ಕಣ್ಮನ ಸೆಳೆಯುವಂತಿದೆ. ಪ್ರದರ್ಶನಕ್ಕಾಗಿ ಸಾಕಿ, ಸಲುಹಿದಂತಿರುವ ಈ ಹೋರಿಗಳಲ್ಲಿ ಒಂದಕ್ಕೆ 1 ಲಕ್ಷ ರೂ. ಬೆಲೆ ಹೇಳುತ್ತಿದ್ದಾರೆ. ಇಡೀ ಜಾತ್ರೆಯಲ್ಲಿ ಮೈಸೂರು ಹೋರಿಗಳು, ಅಮೃತ್‌ ಮಹಲ್‌, ಹಳ್ಳಿಕಾರ್‌ ತಳಿಯ ಎತ್ತುಗಳಿಗೆ ಬೇಡಿಕೆ ಇರುವುದು ಕಂಡುಬಂತು.

16 ಜೋಡಿಗಳ ಮಾರಾಟ: ಜಾತ್ರೆಯ 2ನೇ ದಿನ ಜಾತ್ರೆಯಲ್ಲಿ 9 ಜೋಡಿ ಎತ್ತುಗಳು ಮಾರಾಟವಾಗಿದ್ದರೆ, 3ನೇ ದಿನವಾದ ಬುಧವಾರ ಮಧ್ಯಾಹ್ನಕ್ಕೆ 6 ಜೋಡಿ ಎತ್ತುಗಳು ಮಾರಾಟವಾಗಿದ್ದವು. ಹಳ್ಳಿಕಾರ್‌ ತಳಿಯ 12 ಜೋಡಿ, ಕಿಲ್ಲಾರಿ ತಳಿಯ 3 ಜೋಡಿ, ಅಮೃತ್‌ ಮಹಲ್‌ ತಳಿಯ 1 ಜೋಡಿ ಎತ್ತುಗಳು ಮಾರಾಟವಾಗಿವೆ. ಹಳ್ಳಿಕಾರ್‌ ಒಂದು ಜೋಡಿ 1.5 ಲಕ್ಷ ರೂ.ವರೆಗೆ ಮಾರಾಟವಾಗಿವೆ.

ಐದು ದಿನಗಳಲ್ಲಿ ಅಂದಾಜು 20 ಲಕ್ಷ ರೂ. ವಹಿವಾಟು ನಡೆದಿದ್ದು, ಗುರುವಾರ, ಶುಕ್ರವಾರ ದನಗಳ ಜಾತ್ರೆ ನಡೆಯಲಿದ್ದು, ಇನ್ನು ಹೆಚ್ಚಿನ ಸಂಖ್ಯೆಯ ಎತ್ತುಗಳು, ರೈತರು, ಆಸಕ್ತರು ಭಾಗವಹಿಸುವ ನಿರೀಕ್ಷೆಯಿದೆ.

ಇನ್ನು ಹೆಚ್ಚಿನ ಸಂಖ್ಯೆಯ ದನಗಳು ಭಾಗವಹಿಸುವ ನಿರೀಕ್ಷೆ ಇದೆ. ಅಂತಿಮ ದಿನವಾದ ಶುಕ್ರವಾರ ಜಾತ್ರೆಯಲ್ಲಿ ಭಾಗವಹಿಸುವ ಸದೃಢ ಆರೋಗ್ಯ, ಮೈಕಟ್ಟು ಹೊಂದಿದ್ದ ಎತ್ತುಗಳಿಗೆ ಬಹುಮಾನ ವಿತರಿಸಲಾಗುತ್ತದೆ ಎಂದು ಸಮಿತಿಯವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ