ಆ್ಯಪ್ನಗರ

ಭಕ್ತಿಯಲ್ಲಿ ಮಿಂದೆದ್ದ ಉಚ್ಚೆಂಗೆಮ್ಮ ಭಕ್ತರು

ಮಧ್ಯ ಕರ್ನಾಟಕದ ಇತಿಹಾಸ ಪ್ರಸಿದ್ಧ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಶ್ರೀ ಉಚ್ಚೆಂಗೆಮ್ಮ ದೇವಿ ಸನ್ನಿಧಾನದಲ್ಲಿ ನೂಲು ಹುಣ್ಣಿಯ ಅಂಗವಾಗಿ ಲಕ್ಷಾಂತರ ಭಕ್ತರು ಗುರುವಾರ ಉತ್ಸವಾಂಬೆ ದೇವಿಯ ದರ್ಶನ ಪಡೆದರು.

Vijaya Karnataka 17 Aug 2019, 5:00 am
ಅರಸಿಕೆರೆ : ಮಧ್ಯ ಕರ್ನಾಟಕದ ಇತಿಹಾಸ ಪ್ರಸಿದ್ಧ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಶ್ರೀ ಉಚ್ಚೆಂಗೆಮ್ಮ ದೇವಿ ಸನ್ನಿಧಾನದಲ್ಲಿ ನೂಲು ಹುಣ್ಣಿಯ ಅಂಗವಾಗಿ ಲಕ್ಷಾಂತರ ಭಕ್ತರು ಗುರುವಾರ ಉತ್ಸವಾಂಬೆ ದೇವಿಯ ದರ್ಶನ ಪಡೆದರು.
Vijaya Karnataka Web devotees of devotion
ಭಕ್ತಿಯಲ್ಲಿ ಮಿಂದೆದ್ದ ಉಚ್ಚೆಂಗೆಮ್ಮ ಭಕ್ತರು


ನೂಲು ಹುಣ್ಣಿಮೆ ಅಂಗವಾಗಿ ದಾವಣಗೆರೆ ಜಿಲ್ಲೆಯ ನಾನಾ ತಾಲೂಕುಗಳಲ್ಲದೇ ನೆರೆಯ ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ, ಗದಗ ಹಾಗೂ ಹಾವೇರಿ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಂದಲೂ ಸಾವಿರಾರು ಭಕ್ತ ವೃಂದ ಹರಿದು ಬಂದಿತ್ತು.

ಭಕ್ತರು ಕಾಲ್ನಡಿಗೆ ಮೂಲಕವೇ ಸುಮಾರು 600 ಅಡಿ ಎತ್ತರದ ಗುಡ್ಡ ಹತ್ತಿ ಆಯಾಸವನ್ನೂ ಲೆಕ್ಕಿಸದೇ ಉಧೋ ಉಧೋ ಎಂದು ದೇವಿಯ ನಾಮಸ್ಮರಣೆಯನ್ನು ಮಾಡುತ್ತಾ ಉಚ್ಚೆಂಗೆಮ್ಮ ದೇವಿಯ ದರ್ಶನ ಪಡೆದರು.

ನೂಲು ಹುಣ್ಣಿಮೆಯ ಅಂಗವಾಗಿ ಮುಂಜಾನೆ 4 ಗಂಟೆಯಿಂದಲೇ ಹೊಳೆ ಪೂಜೆ, ಕುಂಕುಮಾರ್ಚನೆ, ಎಲೆಪೂಜೆ, ಕ್ಷೀರಾಭಿಷೇಕದಂತಹ ಅನೇಕ ಪೂಜಾ ವಿಧಿ- ವಿಧಾನಗಳು ಜರುಗಿದವು. ಪಾದಗಟ್ಟೆ ಸೇರಿದಂತೆ ಬೆಟ್ಟದ ದೇವಸ್ಥಾನದ ಆವರಣದಲ್ಲಿ ಭಜನೆ, ದೇವಿ ನಾಮಸ್ಮರಣೆ ಮೊಳಗುತ್ತಿದ್ದವು. ನೂಲು ಹುಣ್ಣಿಮೆಯ ಅಂಗವಾಗಿ ಕೋಟೆಯ ಮೇಲೆ ನೆಲೆಸಿರುವ ದೇವಿಯನ್ನು ಬೆಳ್ಳಿ, ಬಂಗಾರ, ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು.

ಬೆಟ್ಟದ ಸುತ್ತಲೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಇಲಾಖೆ ಸೂಕ್ತ ಬಂದೋಬÓ್ತ… ಏರ್ಪಡಿಸಲಾಗಿತ್ತು. ಟ್ರಾಫಿಕ್‌ ಸಮಸ್ಯೆ ಆಗದಂತೆ ಮುಖ್ಯ ಸರ್ಕಲ್‌ ಗಳಲ್ಲಿ ಬ್ಯಾರಿಕೇಡ್‌ ಹಾಕಲಾಗಿತ್ತು.

ಈ ಸಂದರ್ಭದಲ್ಲಿ ಹರಪನಹಳ್ಳಿ ನ್ಯಾಯಾಧೀಶೆ ಮಂಜುಳಾ ಉಂಡಿ, ತಹಸೀಲ್ದಾರ್‌ ನಾಗವೇಣಿ, ಪಿಎಸ್‌ಐ ಎಂ.ಡಿ. ಸಿದ್ದೇಶ್‌, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಎಂ. ಶಿವಕುಮಾರ ಸ್ವಾಮಿ ಇತರರು ಇದ್ದರು.

-----

ನೂತನ ಎಸ್ಪಿ ದೇವಿ ದರ್ಶನ

ನೂಲು ಹುಣ್ಣಿಮೆ ಅಂಗವಾಗಿ ದಾವಣಗೆರೆ ಜಿಲ್ಲೆ ನೂತನ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತ ರಾಯ ಅವರು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಇಲ್ಲಿನ ಉಚ್ಚೆಂಗೆಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ