ಆ್ಯಪ್ನಗರ

ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷ

ಸರಕಾರಿ ನೌಕರರ ಸಂಘದ ಮೂರು ಸ್ಥಾನಗಳಿಗೆ ನಗರದ ಸರಕಾರಿ ನೌಕರರ ಸಮುದಾಯ ಭವನದಲ್ಲಿ ಗುರುವಾರ ಚುನಾವಣೆ ನಡೆದಿದ್ದು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಿ.ಪಾಲಾಕ್ಷ, ರಾಜ್ಯ ಪರಿಷತ್‌ ಸದಸ್ಯ ಸ್ಥಾನಕ್ಕೆ ಎನ್‌.ಮಾರುತಿ, ಖಂಚಾಚಿ ಸ್ಥಾನಕ್ಕೆ ಆರ್‌.ರವಿ ಆಯ್ಕೆಯಾದರು.

Vijaya Karnataka 12 Jul 2019, 5:00 am
ದಾವಣಗೆರೆ : ಸರಕಾರಿ ನೌಕರರ ಸಂಘದ ಮೂರು ಸ್ಥಾನಗಳಿಗೆ ನಗರದ ಸರಕಾರಿ ನೌಕರರ ಸಮುದಾಯ ಭವನದಲ್ಲಿ ಗುರುವಾರ ಚುನಾವಣೆ ನಡೆದಿದ್ದು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಿ.ಪಾಲಾಕ್ಷ, ರಾಜ್ಯ ಪರಿಷತ್‌ ಸದಸ್ಯ ಸ್ಥಾನಕ್ಕೆ ಎನ್‌.ಮಾರುತಿ, ಖಂಚಾಚಿ ಸ್ಥಾನಕ್ಕೆ ಆರ್‌.ರವಿ ಆಯ್ಕೆಯಾದರು.
Vijaya Karnataka Web district president of government employees union
ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷ


ಬೆಳಗ್ಗೆ 11ಕ್ಕೆ ಆರಂಭವಾದ ಮತದಾನ, ಮಂದಗತಿಯಲ್ಲಿ ಸಾಗಿ ಮೂರು ಗಂಟೆಗೆ ಪೂರ್ಣಗೊಂಡಿತು. ಮಧ್ಯಾಹ್ನ 3 ಗಂಟೆಯ ನಂತರ ಮೂರು ಸ್ಥಾನಗಳ ಮತ ಎಣಿಕೆ ಕಾರ್ಯ ನಡೆಯಿತು.

ಚುನಾವಣೆಯಲ್ಲಿ 66 ನಿರ್ದೇಶಕರು ಮತದಾನ ಮಾಡಿದ್ದು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ದಾವಣಗೆರೆ ಸೀತಮ್ಮ ಪದವಿ ಪೂರ್ವ ಕಾಲೇಜಿನ ಬಿ.ಪಾಲಾಕ್ಷ, ಬಿ.ಶ್ರೀನಿವಾಸ ನಾಯಕ್‌ ನಡುವೆ ಪೈಪೋಟಿ ಏರ್ಪಟ್ಟಿತ್ತು. ಆರಂಭದಿಂದಲೂ ಮುನ್ನಡೆ ಸಾಧಿಸಿದ ಪಾಲಾಕ್ಷ 39 ಮತಗಳನ್ನು ಪಡೆದರು. ಶ್ರೀನಿವಾಸ ನಾಯಕ್‌ 27 ಮತಗಳ ಗಳಿಸಿ ಪರಾಭವಗೊಂಡರು.

ಇನ್ನು ರಾಜ್ಯ ಪರಿಷತ್‌ ಸದಸ್ಯ ಸ್ಥಾನಕ್ಕೆ ನ್ಯಾಯಾಂಗ ಇಲಾಖೆಯ ಎನ್‌.ಮಾರುತಿ, ಶಿವಾನಂದ ದಳವಾಯಿ ಸ್ಪರ್ಧಿಸಿದ್ದರು. ಎನ್‌.ಮಾರುತಿ 43 ಮತ ಪಡೆದು ಜಯಶಾಲಿಯಾದರೆ, ಶಿವಾನಂದ ದಳವಾಯಿ 23 ಮತಗಳ ಪಡೆದು ಸೋತರು. ಖಚಾಂಚಿ ಸ್ಥಾನಕ್ಕೆ ಆರ್‌.ರವಿ ಮತ್ತು ಆರ್‌.ರವಿರಾಜ್‌ ಚುನಾವಣೆ ಕಣದಲ್ಲಿದ್ದು, ಕಂದಾಯ ಇಲಾಖೆಯ ಆರ್‌.ರವಿ 42 ಮತಗಳನ್ನು ಪಡೆದರೆ, ಆರ್‌.ರವಿರಾಜ್‌ 24 ಮತಗಳನ್ನು ಪಡೆಯಲಷ್ಟೇ ಶಕ್ತರಾದರು.

ಪ್ರತ್ಯೇಕ ಬ್ಯಾಲೆಟ್‌: ಜಿಲ್ಲಾಧ್ಯಕ್ಷ, ರಾಜ್ಯ ಪರಿಷತ್‌ ಸದಸ್ಯ, ಖಚಾಂಚಿ ಸ್ಥಾನಕ್ಕೆ ಮತ ಹಾಕಲು ಪ್ರತ್ಯೇಕ ಬ್ಯಾಲೆಟ್‌ ಇಡಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮತ ಹಾಕುವವರಿಗೆ ಹಳದಿ ಬ್ಯಾಲೆಟ್‌ ಪೇಪರ್‌, ಖಚಾಂಚಿ ಸ್ಥಾನಕ್ಕೆ ಮತ ಹಾಕುವ ನಿರ್ದೇಶಕರಿಗೆ ಬಿಳಿ ಬ್ಯಾಲೆಟ್‌ ಪೇಪರ್‌, ರಾಜ್ಯ ಪರಿಷತ್‌ ಸ್ಥಾನಕ್ಕೆ ಮತ ಹಾಕುವ ನಿರ್ದೇಶಕರಿಗೆ ಪಿಂಕ್‌ ಬ್ಯಾಲೆಟ್‌ ಪೇಪರ್‌ ನೀಡಲಾಗಿತ್ತು.

ಚುನಾವಣಾಧಿಕಾರಿಯಾಗಿ ರಾಮಸ್ವಾಮಿ ಕಾರ್ಯನಿರ್ವಹಿಸಿದರು.

ತೀವ್ರ ಕುತೂಹಲ
ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಗೆ ಮೊದಲಿನಿಂದಲೂ ಸಾಕಷ್ಟು ಆಕಾಂಕ್ಷಿಗಳಿದ್ದು, ಹಿರಿಯರು ಸಮ್ಮುಖದಲ್ಲಿ ಸಭೆ ನಡೆಸಿದ್ದರು. ಅಲ್ಲದೇ ಅವಿರೋಧ ಆಯ್ಕೆಗೆ ಬೆಂಬಲ ವ್ಯಕ್ತಪಡಿಸಿದ್ದರು. ಇನ್ನು ಕೆಲವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಯಬೇಕು ನಾವು ಗೆಲ್ಲಲಿ, ಸೋಲಲಿ ಎಂದು ಅಪೇಕ್ಷೆ ಪಟ್ಟಿದ್ದ ಕಾರಣ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಿತು.

ನನಗೆ ಮತ ಹಾಕಿದ ಎಲ್ಲ ನಿರ್ದೇಶಕರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನನ್ನ ಮೊದಲ ಹೋರಾಟ ಎನ್‌ಪಿಎಸ್‌ ರದ್ದುಗೊಳಿಸುವುದಾಗಿದ್ದು, ಎಲ್ಲರನ್ನೂ ಗಣನೆಗೆ ತೆಗೆದುಕೊಂಡು ರಾಜ್ಯಮಟ್ಟದಲ್ಲಿ ಎನ್‌ಪಿಎಸ್‌ನ್ನು ತೆಗೆಯಲು ಶ್ರಮಿಸುವೆ. ಅಲ್ಲದೇ, ಹಳೆ ಪಿಂಚಣಿ ಜಾರಿಗಾಗಿ ಶ್ರಮಿಸುತ್ತೇನೆ.
- ಬಿ.ಪಾಲಾಕ್ಷ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ