ಆ್ಯಪ್ನಗರ

ದಾವಣಗೆರೆಯಲ್ಲಿ ಆನೆಗಳ ದಾಂಧಲೆಗೆ ಒಬ್ಬ ಬಲಿ

ಚನ್ನಗಿರಿ ತಾಲೂಕಿನ ತ್ಯಾವಣಿಗೆ ಪ್ರದೇಶಕ್ಕೆ ಜೋಡಿ ಆನೆಗಳು ಲಗ್ಗೆಯಿಟ್ಟು ಜನರಲ್ಲಿ ಆತಂಕ ಸೃಷ್ಟಿಸಿವೆ.

Vijaya Karnataka Web 9 Dec 2017, 8:32 am
ದಾವಣಗೆರೆ: ಚನ್ನಗಿರಿ ತಾಲೂಕಿನ ತ್ಯಾವಣಿಗೆ ಪ್ರದೇಶಕ್ಕೆ ಜೋಡಿ ಆನೆಗಳು ಲಗ್ಗೆಯಿಟ್ಟು ಜನರಲ್ಲಿ ಆತಂಕ ಸೃಷ್ಟಿಸಿವೆ.
Vijaya Karnataka Web elephants enter village in davangere
ದಾವಣಗೆರೆಯಲ್ಲಿ ಆನೆಗಳ ದಾಂಧಲೆಗೆ ಒಬ್ಬ ಬಲಿ


ಆನೆ ಮೂವರ ಮೇಲೆ ದಾಳಿ ನಡೆಸಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಓಡುತ್ತಿರುವಾಗ ಒಬ್ಬರು ಮುಳ್ಳಿನ ಗಿಡಗಳ ಮೇಲೆ ಬಿದ್ದು ಪರಾರಿಯಾದರೆ ಮತ್ತೊಬ್ಬರು ಓಡಿ ಪರಾರಿಯಾಗಿದ್ದಾರೆ. ಮುಳ್ಳು ಚುಚ್ಚಿದ ಕಾರಣ ಆನೆ ಹಿಂದೆ ಸರಿದಿದ್ದರಿಂದ ಒಬ್ಬರು ಬದುಕಿದ್ದಾರೆ. ಗಾಯಗೊಂಡ ಅವರನ್ನು ದಾವಣಗೆರೆ ಜಿಲ್ಲಾಸ್ಫತ್ರೆಗೆ ದಾಖಲಿಸಲಾಗಿದೆ.

ಕಚ್ಚಾರಸ್ತೆಯಲ್ಲಿ ಬೈಕ್‌ಗಿಂತ ಜೋರಾಗಿ ಓಡುತ್ತಿರುವ ಆನೆಗಳು ಅಶೋಕ ನಗರ ಕ್ಯಾಂಪ್ ಬಳಿ ದಾಂಧಲೆ ನಡೆಸುತ್ತಿವೆ. ಬೈಕ್‌ ಧ್ವಂಸಗೊಳಿಸುವ ಜತೆಗೆ ಕರುವೊಂದನ್ನು ಸಾಯಿಸಿರುವ ಆನೆಗಳ ಬಗ್ಗೆ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಆನೆಗಳನ್ನು ಅರಣ್ಯಕ್ಕೆ ಓಡಿಸುವ ಕೆಲಾದಲ್ಲಿ ತೊಡಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ