ಆ್ಯಪ್ನಗರ

ನೀರಿಗಾಗಿ ಖಾಲಿಕೊಡ ಹಿಡಿದು ರಸ್ತೆ ತಡೆ

ತಾಲೂಕಿನ ಮಡಕಿ ನಿಚ್ಚಾಪುರ ಗ್ರಾಮದಲ್ಲಿ ನೀರಿಗಾಗಿ ಆಗ್ರಹಿಸಿ ಖಾಲಿ ಕೊಡಗಳೊಂದಿಗೆ ಮಹಿಳೆಯರು, ಗ್ರಾಮಸ್ಥರು ಮತ್ತು ರೈತ ಸಂಘದ ಕಾರ್ಯಕರ್ತರು ಸೋಮವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

Vijaya Karnataka 1 May 2018, 3:13 pm
ಹರಪನಹಳ್ಳಿ : ತಾಲೂಕಿನ ಮಡಕಿ ನಿಚ್ಚಾಪುರ ಗ್ರಾಮದಲ್ಲಿ ನೀರಿಗಾಗಿ ಆಗ್ರಹಿಸಿ ಖಾಲಿ ಕೊಡಗಳೊಂದಿಗೆ ಮಹಿಳೆಯರು, ಗ್ರಾಮಸ್ಥರು ಮತ್ತು ರೈತ ಸಂಘದ ಕಾರ್ಯಕರ್ತರು ಸೋಮವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
Vijaya Karnataka Web empty the road and block the road
ನೀರಿಗಾಗಿ ಖಾಲಿಕೊಡ ಹಿಡಿದು ರಸ್ತೆ ತಡೆ


ಖಾಲಿ ಕೊಡಗಳನ್ನು ಹಿಡಿದು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಪಂ ವಿರುದ್ಧ ಮಹಿಳೆಯರು ಘೋಷಣೆ ಕೂಗಿದರು. ನಂತರ ರಸ್ತೆ ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಕಂದಾಯ ನಿರೀಕ್ಷ ಕ ಶ್ರೀಧರ್‌ ಭೇಟಿ ನೀಡಿಬಂದ್‌ ಹಿಂಪಡೆಯುವಂತೆ ಮನವಿ ಮಾಡಿದರು. ಪಿಡಿಒ ಉಮೇಶ್‌ ಸ್ಥಳಕ್ಕೆ ಬರುವವರೆಗೆ ರಸ್ತೆ ತಡೆ ವಾಪಸ್‌ ಪಡೆಯಲ್ಲ ಎಂದು ಮಹಿಳೆಯರು ಪಟ್ಟುಹಿಡಿದರು.

'ನಮ್ಮ ಗಂಡದಿರು ನೀರಿಗೆ ಹೋದರೆ ಹೊಟ್ಟೆಗೆ ಹಿಟ್ಟು ತಿನ್ನಬೇಕಾಗುತ್ತದೆ. ನಾವು ಹೋದರೆ ಮಕ್ಕಳು ಊಟ ಇಲ್ಲದೆ ಶಾಲೆಗೆ ಹೋಗಬೇಕಾಗುತ್ತದೆ' ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅರಸಿಕೇರಿ ಪಿಎಸ್‌ಐ ಪುಷ್ಪಲತಾ ಅವರು ಪಿಡಿಒ ಜತೆ ದೂರವಾಣಿ ಕರೆ ಮೂಲಕ ಮಾತನಾಡಿ, ಸಮಸ್ಯೆ ಬಗೆಹರಿಸುವಂತೆ ತಿಳಿಸಿ, ಪಿಡಿಒ ಉಮ್ಮೇಶ್‌ರನ್ನು ಸ್ಥಳಕ್ಕೆ ಕರೆಯಿಸಿದರು. ಪ್ರತಿಭಟನಾ ಜಾಗಕ್ಕೆ ಬಂದ ಪಿಡಿಒ, ದಿನಾಲು ನಾಲ್ಕು ಟ್ಯಾಂಕರ್‌ ನೀರು ಕೊಡುವ ಭರವಸೆ ನೀಡಿದರು. ಆಗ ಮಹಿಳೆಯರು ರಸ್ತೆ ತಡೆ ಹಿಂಪಡೆದರು.

ಈ ವೇಳೆ ಕಂದಾಯ ನಿರೀಕ್ಷ ಕ ಶ್ರೀಧರ್‌ ಹಾಗೂ ಗ್ರಾಮಸ್ಥರು, ರೈತ ಸಂಘದ ಮುಖಂಡ ಕರಡಿದುರ್ಗದ ಚೌಡಪ್ಪ ಸೇರಿದಂತೆ ಇತರರು ಮನವಿ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ