ಆ್ಯಪ್ನಗರ

ಲಾರಿ ಹರಿದು ಎಂಜಿನಿಯರ್‌ ವಿದ್ಯಾರ್ಥಿ ಸಾವು

ನಗರದ ಶಿವಮೊಗ್ಗ-ಹೊಸಪೇಟೆ ಹೆದ್ದಾರಿ ರೈಲ್ವೆ ಅಂಡರ್‌ ಬ್ರಿಡ್ಜ್‌ನಲ್ಲಿ ಮಂಗಳವಾರ ನಡೆದ ಅಪಘಾತದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.

Vijaya Karnataka 10 Jul 2019, 5:00 am
ಹರಿಹರ : ನಗರದ ಶಿವಮೊಗ್ಗ-ಹೊಸಪೇಟೆ ಹೆದ್ದಾರಿ ರೈಲ್ವೆ ಅಂಡರ್‌ ಬ್ರಿಡ್ಜ್‌ನಲ್ಲಿ ಮಂಗಳವಾರ ನಡೆದ ಅಪಘಾತದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.
Vijaya Karnataka Web engineer student dies as lorry crashes
ಲಾರಿ ಹರಿದು ಎಂಜಿನಿಯರ್‌ ವಿದ್ಯಾರ್ಥಿ ಸಾವು


ನಗರದ ಎ.ಕೆ. ಕಾಲೋನಿ 3ನೇ ಕ್ರಾಸ್‌ ವಾಸಿ ಕಾರು ಚಾಲಕ ಅಣ್ಣಪ್ಪ ಎಸ್‌.ಜೆ. ಅವರ ಪುತ್ರ ಧನಂಜಯ್‌ (19) ಮೃತ ದುರ್ದೈವಿ. ಧನಂಜಯ್‌ ದಾವಣಗೆರೆ ಬಿಐಇಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ.

ವಿವರ: ಟ್ಯೂಷನ್‌ಗೆ ಹೋಗಿದ್ದ ತನ್ನ ಸಹೋದರಿ ಐಶ್ವರ್ಯಳನ್ನು ಬೈಕ್‌ನಲ್ಲಿ ಮನೆಗೆ ಕರೆದುಕೊಂಡು ಬರುವಾಗ ಬೆಳಗ್ಗೆ 8.10ಕ್ಕೆ ಈ ಘಟನೆ ನಡೆದಿದೆ. ತನ್ನ ಮುಂದೆ ಸಾಗುತ್ತಿದ್ದ ಬೈಕ್‌ಗೆ ಮೃತನ ಬೈಕ್‌ ಡಿಕ್ಕಿಯಾಗಿದೆ. ನಂತರ ಧನಂಜಯ್‌ ಹಾಗೂ ಐಶ್ವರ್ಯ ರಸ್ತೆಗೆ ಉರುಳಿ ಬಿದ್ದಿದ್ದಾರೆ.

ಆಗ ಹರಪನಹಳ್ಳಿ ಕಡೆಯಿಂದ ಗಾಂಧಿ ವೃತ್ತದ ಕಡೆಗೆ ಅತಿವೇಗವಾಗಿ ಬರುತ್ತಿದ್ದ ಇಟ್ಟಿಗೆ ಲೋಡಿನ ಸ್ವರಾಜ್‌ ಮಜ್ಡಾ ಲಾರಿಯು ರಸ್ತೆಗೆ ಬಿದ್ದಿದ್ದ ಧನಂಜಯ್‌ ಮೇಲೆ ಹರಿದಿದೆ. ಆಗ ಧನಂಜಯ್‌ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಸಹೋದರಿ ಐಶ್ವರ್ಯಳನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದಾರೆ. ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅಪಘಾತದ ಕಾರಣದಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಕಿಲ್ಲರ್‌ ರಸ್ತೆಗೆ ಮತ್ತೊಂದು ಬಲಿ:
ಒತ್ತುವರಿ, ಗುಂಡಿಗಳು, ಇಟ್ಟಿಗೆ ಸಾಗಣೆ ಲಾರಿಗಳ ಅಜಾಗರೂಕ ಚಾಲನೆ ಕಾರಣಕ್ಕಾಗಿ ವರ್ಷದಲ್ಲಿ ಕನಿಷ್ಠ ನಾಲ್ಕೈದು ಜನರನ್ನು ಬಲಿ ಪಡೆಯುವ ಶಿವಮೊಗ್ಗ-ಹೊಸಪೇಟೆ ಹೆದ್ದಾರಿಗೆ ಮಂಗಳವಾರದ ಅಪಘಾತ ಮತ್ತೊಂದು ಸೇರ್ಪಡೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ