ಆ್ಯಪ್ನಗರ

ಜಿಲ್ಲಾದ್ಯಂತ ಸಂಭ್ರಮದ ರಂಜಾನ್‌

ಜಿಲ್ಲಾದ್ಯಂತ ಬುಧವಾರ ಮುಸ್ಲಿಂ ಸಮುದಾಯದವರು ಸಂಭ್ರಮ, ಭಕ್ತಿಯಿಂದ ರಂಜಾನ್‌ ಹಬ್ಬ ಆಚರಿಸಿದರು. ಮೊದಲು ಪ್ರಾರ್ಥನಾ ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಲ್ಲಾಹುವಿಗೆ ಭಕ್ತಿ ಸಮರ್ಪಿಸಿ, ಸಂಪ್ರೀತಿಗೊಳಿಸಿ ರಂಜಾನ್‌ ಉಪವಾಸ ವ್ರತಾಚರಣೆ ಅಂತ್ಯಗೊಳಿಸಿದರು.

Vijaya Karnataka 6 Jun 2019, 5:00 am
ದಾವಣಗೆರೆ :ಜಿಲ್ಲಾದ್ಯಂತ ಬುಧವಾರ ಮುಸ್ಲಿಂ ಸಮುದಾಯದವರು ಸಂಭ್ರಮ, ಭಕ್ತಿಯಿಂದ ರಂಜಾನ್‌ ಹಬ್ಬ ಆಚರಿಸಿದರು. ಮೊದಲು ಪ್ರಾರ್ಥನಾ ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಲ್ಲಾಹುವಿಗೆ ಭಕ್ತಿ ಸಮರ್ಪಿಸಿ, ಸಂಪ್ರೀತಿಗೊಳಿಸಿ ರಂಜಾನ್‌ ಉಪವಾಸ ವ್ರತಾಚರಣೆ ಅಂತ್ಯಗೊಳಿಸಿದರು.
Vijaya Karnataka Web exciting ramadan throughout the district
ಜಿಲ್ಲಾದ್ಯಂತ ಸಂಭ್ರಮದ ರಂಜಾನ್‌


ದಾವಣಗೆರೆ ನಗರದಲ್ಲೂ ಮುಸ್ಲಿಂ ಸಮುದಾಯದವರು ಭಕ್ತಿಯಿಂದ ಹಬ್ಬ ಆಚರಿಸಿದರು. ಬಡಾವಣೆಗಳಿಂದ ಮುಸ್ಲಿಂ ಸಮುದಾಯದವರು ಒಟ್ಟಾಗಿ ತೆರಳಿ ಮೂರು ಕಡೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇಲ್ಲಿನ ವಿನೋಬ ನಗರದ ಖಬರ್‌ಸ್ಥಾನ, ಮಿಲ್ಲತ್‌ ಮೈದಾನ, ರಾಮನಗರದ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಪಿಬಿ ರಸ್ತೆಯಲ್ಲಿ ಒಟ್ಟಿಗೆ ಎಲ್ಲರೂ ಮೆರವಣಿಗೆಯಲ್ಲಿ ಹಿಂತಿರುಗಿದರು.

ಮಕ್ಕಳು ಸೇರಿದಂತೆ ಎಲ್ಲರೂ ಹೊಸ ಬಟ್ಟೆ ತೊಟ್ಟು ಸಂಭ್ರಮದಿಂದ ಹಬ್ಬ ಆಚರಿಸಿದರು. ಪ್ರಾರ್ಥನೆ ನಂತರ ಪರಸ್ಪರ ತಬ್ಬಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಆಶಕ್ತರು, ವಿಕಲಾಂಗರು, ಬಡವರು, ಅನಾಥರು ಮತ್ತು ದುರ್ಬಲರಿಗೆ ಜಕಾತ್‌ ಮತ್ತು ಫಿತ್ರ ನೀಡುವ ಮೂಲಕ ತಮ್ಮ ಕೈಲಾದಷ್ಟು ದಾನವನ್ನು ಮಾಡುವುದು ಕೂಡ ಕಂಡು ಬಂತು.

ವಿಶೇಷ ಭೋಜನ...

ಹಬ್ಬದ ಹಿನ್ನೆಲೆಯಲ್ಲಿ ನಾನಾ ಭಕ್ಷ್ಯ ಭೋಜನಗಳ ಊಟವೂ ಇತ್ತು. ಸಿಹಿ ಊಟ, ನಾನ್‌ವೆಜ್‌ ಬಿರಿಯೂನಿ ಊಟವೂ ಇತ್ತು. ಬಂಧುಗಳು , ಪರಿಚಯಸ್ಥರು, ನೆರೆ ಹೊರೆಯವರು ಸೇರಿ ಹಬ್ಬದ ಊಟ ಸವಿಯವುದು ಕೂಡ ಕಂಡು ಬಂತು. ಎಲ್ಲರಿಗೂ ಪವಿತ್ರ ರಂಜಾನ್‌ ಹಬ್ಬದ ಶುಭಾಶಯ ಕೋರುವುದು ಕಂಡು ಬಂತು. ಸಾಮೂಹಿಕ ಪ್ರಾರ್ಥನೆಯಲ್ಲಿ ಅನೇಕ ರಾಜಕೀಯ ಮುಖಂಡರು ಕೂಡ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ