ಆ್ಯಪ್ನಗರ

ಸಾಕ್ಷ್ಯ ನುಡಿದುದ್ದಕ್ಕೆ ರೈತನ ಕೊಲೆ: ಶವವಿಟ್ಟು ಠಾಣೆ ಎದುರು ಪ್ರತಿಭಟನೆ

ಹಲುವಾಗಲು ಗ್ರಾಮದ ಮತ್ತೂರು ನಿಂಗಪ್ಪ(48) ಕೊಲೆಯಾದ ರೈತ. ಬಿಳಿಚೋಡು ಬಸವರಾಜ(38) ಕೊಲೆ ಮಾಡಿದ ಆರೋಪಿಯಾಗಿದ್ದು, ತನ್ನ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದುದ್ದಕ್ಕಾಗಿ ಕೊಲೆ ಮಾಡಿದ್ದಾನೆ. ಕಳೆದ ಎರಡೂವರೆ ವರ್ಷಗಳ ಹಿಂದೆ ಜಮೀನೊಂದರಲ್ಲಿ ಜಗಳವಾಗಿ ಹೊಡೆದಾಟ ನಡೆದು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Vijaya Karnataka 24 Feb 2019, 9:24 am
ಹರಪನಹಳ್ಳಿ (ದಾವಣಗೆರೆ): ಜಗಳವೊಂದರ ಪ್ರಕರಣದಲ್ಲಿ ತನ್ನ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ್ದಕ್ಕೆ ವ್ಯಕ್ತಿಯೊಬ್ಬ ರೈತನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ತಾಲೂಕಿನ ಹಲುವಾಗಲು ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
Vijaya Karnataka Web Murder 1


ಹಲುವಾಗಲು ಗ್ರಾಮದ ಮತ್ತೂರು ನಿಂಗಪ್ಪ(48) ಕೊಲೆಯಾದ ರೈತ. ಬಿಳಿಚೋಡು ಬಸವರಾಜ(38) ಕೊಲೆ ಮಾಡಿದ ಆರೋಪಿಯಾಗಿದ್ದು, ತನ್ನ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದುದ್ದಕ್ಕಾಗಿ ಕೊಲೆ ಮಾಡಿದ್ದಾನೆ. ಕಳೆದ ಎರಡೂವರೆ ವರ್ಷಗಳ ಹಿಂದೆ ಜಮೀನೊಂದರಲ್ಲಿ ಜಗಳವಾಗಿ ಹೊಡೆದಾಟ ನಡೆದು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಹರಪನಹಳ್ಳಿ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು. ಫೆ.22ರಂದು ವಿಚಾರಣೆ ಸಂದರ್ಭದಲ್ಲಿ ಕೋರ್ಟ್‌ಗೆ ಆಗಮಿಸಿ ಮತ್ತೂರು ನಿಂಗಪ್ಪ ಆರೋಪಿ ಬಿಳಿಚೋಡು ಬಸವರಾಜನ ವಿರುದ್ಧ ಸಾಕ್ಷಿ ಹೇಳಿದ್ದ.

'ನನ್ನ ವಿರುದ್ಧ ಸಾಕ್ಷಿ ಹೇಳಿದೆಯಾ ಎಂದು ಸಿಟ್ಟಿಗೆದ್ದ ಆರೋಪಿ ಬಸವರಾಜ, ನಿಂಗಪ್ಪನ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಆ ಸಂದರ್ಭದಲ್ಲಿ ನಿಂಗಪ್ಪ ಮನೆಯಲ್ಲಿ ಇಲ್ಲದಿದ್ದರಿಂದ ಮತ್ತೆ ರಾತ್ರಿ 9 ಗಂಟೆಗೆ ಬಂದಿದ್ದಾನೆ. ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ನಿಂಗಪ್ಪಗೆ ನನ್ನ ವಿರುದ್ಧ ಸಾಕ್ಷಿ ಹೇಳುತ್ತಿಯಾ? ಎಂದು ಕುತ್ತಿಗೆಗೆ ಕೊಡಲಿಯಿಂದ ಹೊಡೆದಿದ್ದಾನೆ. ಕುಸಿದ ನಿಂಗಪ್ಪನನ್ನು ಹರಿಹರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮತ್ತೂರು ನಿಂಗಪ್ಪ ಮೃತಪಟ್ಟಿದ್ದಾರೆ. ಹಲುವಾಗಲು ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಿಸಿ, ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ.

ಶವವಿಟ್ಟು ಪ್ರತಿಭಟನೆ:

ಮೃತನ ಸಂಬಂಧಿಕರು ಹಲುವಾಗಲು ಪೊಲೀಸ್‌ ಠಾಣೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.

ಆರೋಪಿಯು ರೌಡಿಶೀಟರ್‌ ಅಂತ ಗೊತ್ತಿದ್ದರೂ ಪೊಲೀಸರು ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಇಂಥ ಅನಾಹುತ ನಡೆದಿದೆ. ಈ ಘಟನೆ ಜರುಗಲು ಒಬ್ಬನಿಂದ ಸಾಧ್ಯವಿಲ್ಲ, ಇದಕ್ಕೆ ಕೆಲವರ ಸಹಕಾರವಿದೆ, ಅಂಥವರನ್ನು ಸಹ ಬಂಧಿಸಿ ಶಿಕ್ಷೆ ವಿಧಿಸಬೇಕು. ಆರೋಪಿಯನ್ನು ಠಾಣೆ ಎದುರು ಕರೆ ತರಬೇಕೆಂದು ಸಂಬಂಧಿಕರು ಪಟ್ಟು ಹಿಡಿದರು.

ಸಂಜೆ 5 ಗಂಟೆಯಿಂದ ಶುರುವಾದ ಪ್ರತಿಭಟನೆ ರಾತ್ರಿ 8 ಗಂಟೆವರೆಗೂ ನಡೆದಿತ್ತು. ಡಿವೈಎಸ್ಪಿ ನಾಗೇಶ್‌ ಐತಾಳ್‌ ಹಾಗೂ ಜಗಳೂರು ಸಿಪಿಐ ಅವರು ಮೃತರ ಸಂಬಂಧಿಕರನ್ನು ಮನವೊಲಿಸಲು ಹರಸಾಹಸ ಪಡಬೇಕಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ