ಆ್ಯಪ್ನಗರ

ಜ್ವಲಂತ ಸಮಸ್ಯೆಗಳು ಪ್ರಚಾರದ ಸರಕಾಗಲಿ

ಲೋಕಸಭಾ ಚುನಾವಣೆಯ ಪ್ರಚಾರ ಸಮಾವೇಶಗಳಲ್ಲಿ ರೈತರ, ಜನ ಸಾಮಾನ್ಯರ ಸೇರಿದಂತೆ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಯದೆ, ಕೇವಲ ರಾಷ್ಟ್ರವಾದದ ಬಗ್ಗೆ ಮಾತನಾಡುತ್ತಿರುವುದು ಬೇಸರದ ಸಂಗತಿ ಎಂದು ಪ್ರಗತಿಪರ ಚಿಂತಕ ಬಿ.ಪೀರ್‌ ಬಾಷಾ ಅಸಮಾಧಾನ ವ್ಯಕ್ತಪಡಿಸಿದರು.

Vijaya Karnataka 15 Apr 2019, 5:00 am
ದಾವಣಗೆರೆ : ಲೋಕಸಭಾ ಚುನಾವಣೆಯ ಪ್ರಚಾರ ಸಮಾವೇಶಗಳಲ್ಲಿ ರೈತರ, ಜನ ಸಾಮಾನ್ಯರ ಸೇರಿದಂತೆ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಯದೆ, ಕೇವಲ ರಾಷ್ಟ್ರವಾದದ ಬಗ್ಗೆ ಮಾತನಾಡುತ್ತಿರುವುದು ಬೇಸರದ ಸಂಗತಿ ಎಂದು ಪ್ರಗತಿಪರ ಚಿಂತಕ ಬಿ.ಪೀರ್‌ ಬಾಷಾ ಅಸಮಾಧಾನ ವ್ಯಕ್ತಪಡಿಸಿದರು.
Vijaya Karnataka Web firefighting issues are a promotional item
ಜ್ವಲಂತ ಸಮಸ್ಯೆಗಳು ಪ್ರಚಾರದ ಸರಕಾಗಲಿ


ನಗರದ ರೋಟರಿ ಬಾಲಭವನದಲ್ಲಿ ಕರ್ನಾಟಕ ಜನಶಕ್ತಿ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಜನತೆಯ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಹಿಂದೆ ದಾವಣಗೆರೆ ಜಿಲ್ಲೆಯಲ್ಲಿ ಹಲವು ಕಾರ್ಖಾನೆಗಳು ತಲೆ ಎತ್ತಿದ್ದವು. ಈಗ ಎಲ್ಲವು ಮುಚ್ಚಿ ಹೋಗಿವೆ. ಇದಕ್ಕೆ ಕಾರಣವೇನು ಎಂಬುದನ್ನು ಯಾರೂ ಚರ್ಚಿಸುತ್ತಿಲ್ಲ. ಅಸಂಘಟಿತ ವಲಯದಲ್ಲಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಇಲ್ಲದಂತಾಗಿದ್ದು, ಸರಕಾರದ ನೀತಿಯಿಂದಾಗಿ ಕಾರ್ಖಾನೆಗಳು ಮುಚ್ಚೆ ಹೋಗಿವೆ ಎಂದು ಆರೋಪಿಸಿದರು.

ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ರಾಜ್ಯ ಕಾರ್ಯದರ್ಶಿ ಕೆ.ಸಿ.ಅಕ್ಷತಾ ಮಾತನಾಡಿ, ಈ ಹಿಂದೆ ಮಹಿಳೆ ನಾಲ್ಕು ಗೋಡೆಗಳ ಮಧ್ಯವಿದ್ದು, ಈಗ ಮುಖ್ಯವಾಹಿನಿ ಬರುವುದಕ್ಕೆ ಅಂಬೇಡ್ಕರ್‌ ಕಾರಣ. ಮೊದಲು ನೀನು ಮನುಷ್ಯನಾಗು ಎಂದು ಹೇಳಿದ ಶ್ರೇಷ್ಠ ಗ್ರಂಥ ಈ ಜಗತ್ತಿನಲ್ಲಿ ಇದ್ದರೆ ಅದು ಸಂವಿಧಾನ ಮಾತ್ರ. ಯಾವುದೇ ಧರ್ಮ ಗ್ರಂಥಗಳಲ್ಲಿ ಈ ಮಾತು ಹೇಳಿಲ್ಲ ಎಂದರು.

ಮಹಿಳಾ ಸಮಾನತೆ, ಮೀಸಲಾತಿ ವಿಷಯ ಸ್ವಾತಂತ್ರ್ಯ ಪೂರ್ವದಲ್ಲಿಯೇ ಹುಟ್ಟಿಕೊಂಡಿದ್ದು, ಇಂದಿಗೂ ಜೀವಂತವಾಗಿದೆ. ಹಕ್ಕುಗಳಿಂದ ವಂಚಿತರ ಸ್ಥಿತಿ ಇನ್ನು ಸುಧಾರಣೆ ಕಂಡಿಲ್ಲ. ಬಡತನ, ಭ್ರಷ್ಟಾಚಾರ, ಸಮಾನತೆ, ಶಿಕ್ಷಣ, ಮಹಿಳಾ ಮೀಸಲು, ರೈತರು, ಯುವಕರು ರಾಜಕೀಯ ಪಕ್ಷಗಳ ಅಜೆಂಡಾ ಆಗಬೇಕು. ಆಗ ಮಾತ್ರ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ಹೇಳಿದರು.

ಇದೇ ವೇಳೆ ಜನತೆಯ ಹಕ್ಕೊತ್ತಾಯದ ಪ್ರತಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಎಲ್‌.ಎಚ್‌. ಅರುಣ್‌ಕುಮಾರ್‌, ಕರ್ನಾಟಕ ಶ್ರಮಿಕ ಶಕ್ತಿ ರಾಜ್ಯ ಸಂಚಾಲಕ ವರದರಾಜೇಂದ್ರ, ವಕೀಲ ಅನೀಸ್‌ ಪಾಷ, ನೆರಳು ಬೀಡಿ ಕಾರ್ಮಿಕರ ಅಧ್ಯಕ್ಷ ಜಬೀನಾ ಖಾನಂ, ಮೌಲಾನಾಯ್ಕ್‌, ಶ್ವೇತಾ, ಚೈತ್ರಾ, ನಿಜಾಮುದ್ದೀನ್‌, ಸತೀಶ್‌ ಅರವಿಂದ್‌, ಆದಿಲ್‌ ಖಾನ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ