ಆ್ಯಪ್ನಗರ

ದಾವಣಗೆರೆ: ವಿದೇಶಿ ಮಹಿಳೆಗೆ ಭವಿಷ್ಯ ಹೇಳಿದ ಜ್ಯೋತಿಷಿಗೆ 9.20 ಲಕ್ಷ ರೂ. ವಂಚನೆ

ದಾವಣಗೆರೆ ಜಿಲ್ಲೆಯಲ್ಲಿ ವೃತ್ತಿಯಲ್ಲಿ ಪೋಸ್ಟ್‌ಮನ್‌ ಪ್ರವೃತ್ತಿಯಾಗಿ ಜ್ಯೋತಿಷ್ಯ ಹೇಳುತ್ತಿದ್ದ ವ್ಯಕ್ತಿಯೊಬ್ಬರು ವಿದೇಶಿ ಮಹಿಳೆಗೆ ಭವಿಷ್ಯ ಹೇಳಿ 9.20 ಲಕ್ಷ ರೂ. ವಂಚನೆಗೊಳಗಾಗಿದ್ದಾರೆ.

Vijaya Karnataka Web 26 Aug 2020, 9:04 pm
ದಾವಣಗೆರೆ: ಜ್ಯೋತಿಷಿಯೊಬ್ಬರು ವಿದೇಶಿಯರಿಗೆ ಜ್ಯೋತಿಷ್ಯ ಹೇಳಲು ಹೋಗಿ 9.20 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಜಗಳೂರಿನ ಗಡಿಮಾಕುಂಟೆ ಗ್ರಾಮದ ನಿವಾಸಿ ಬಿ.ಎಂ.ವಿರೂಪಾಕ್ಷಯ್ಯ ಹಣ ಕಳೆದುಕೊಂಡವರು.
Vijaya Karnataka Web foreign woman cheat rs 9 20 lakh to astrologer in davanagere
ದಾವಣಗೆರೆ: ವಿದೇಶಿ ಮಹಿಳೆಗೆ ಭವಿಷ್ಯ ಹೇಳಿದ ಜ್ಯೋತಿಷಿಗೆ 9.20 ಲಕ್ಷ ರೂ. ವಂಚನೆ


ವಿರೂಪಾಕ್ಷಪ್ಪ ತಾಲೂಕಿನ ಅಣಜಿ ಗ್ರಾಮದದಲ್ಲಿ ಗುತ್ತಿಗೆ ಆಧಾರಿತ ಪೋಸ್ಟ್‌ಮನ್‌ ಆಗಿ ಕೆಲಸ ಮಾಡುತ್ತಿದ್ದರು. ಪ್ರವೃತ್ತಿಯಾಗಿ ಜ್ಯೋತಿಷ್ಯ ಹೇಳುತ್ತಿದ್ದರು. ಅಲ್ಲದೇ 2 ವರ್ಷದ ಹಿಂದೆ ಫೇಸ್‌ಬುಕ್‌ ಅಸ್ಟ್ರಾಲಜಿ ಗೈಡೆನ್ಸ್‌ ಗ್ರೂಪ್‌ಗೆ ಸೇರಿದ್ದರು.

ಅಮೆರಿಕಾದ ಕ್ಯಾಲಿಫೋರ್ನಿಯಾದ ಮಹಿಳೆಗೆ ಡಿವೋರ್ಸ್‌ ವಿಚಾರವಾಗಿ ಜ್ಯೋತಿಷ್ಯ ಹೇಳಿದ್ದರು. ಅವರ ಭವಿಷ್ಯ ಯಶಸ್ವಿ ಆಯಿತು ಅಂತ ವಿದೇಶದಿಂದ ಮಹಿಳೆ ಕರೆ ಮಾಡಿ ಜ್ಯೋತಿಷಿಗೆ ತಿಳಿಸಿದ್ದಾರೆ. ಅದಕ್ಕೆ ಪ್ರತಿಯಾಗಿ 20 ಸಾವಿರ ಡಾಲರ್‌ ದಕ್ಷಿಣೆ ನೀಡುವುದಾಗಿ ಮಹಿಳೆ ನಂಬಿಸಿದ್ದಾರೆ.

ಚರಂಡಿಯಲ್ಲಿ ಆಯುಷ್ಮಾನ್‌, ಆಧಾರ್‌ ಕಾರ್ಡ್‌..! ಫಲಾನುಭವಿಗಳ ಕೈ ಸೇರಲಿಲ್ಲ ಅಂಚೆ..

ಇದಾದ ಬಳಿಕ ದಾವಣಗೆರೆ ತಾಲೂಕಿನ ಜ್ಯೋತಿಷಿ ಬ್ಯಾಂಕ್‌ ಖಾತೆಯ ವಿವರ ಪಡೆದಿದ್ದಾರೆ. ಅಲ್ಲದೇ ವಿದೇಶ ಬ್ಯಾಂಕ್‌ನಲ್ಲಿ ಅಕೌಂಟ್‌ ಮಾಡಿಸುವಂತೆ ಸಲಹೆ ನೀಡಿದ್ದಾರೆ. ಬಳಿಕ ವಿದೇಶಿ ಕ್ಲಿಯರೆನ್ಸ್‌ ಹೆಸರಲ್ಲಿ ಹಂತ ಹಂತವಾಗಿ ಲಕ್ಷಾಂತರ ಹಣ ಕಟ್ಟಿಸಿಕೊಂಡಿದ್ದಾರೆ. ಮೋಸ ಮಾಡಿದ ವಿದೇಶಿ ವ್ಯಕ್ತಿಗಳ ವಿರುದ್ಧ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಜ್ಯೋತಿಷಿ ಪ್ರಕರಣ ದಾಖಲಿಸಿದ್ದಾರೆ.

ದಾವಣಗೆರೆ ಪೊಲೀಸ್ ಇಲಾಖೆಯಲ್ಲಿ ಪಾಕ್ ಪ್ರೇಮಿ: ವಾಟ್ಸಾಪ್ ಗ್ರೂಪ್ನಲ್ಲಿ ಪಾಕ್ ಪರ ಪೋಸ್ಟ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ