ಆ್ಯಪ್ನಗರ

ದ್ವೇಷದ ಬದಲು ಕ್ಷಮಾಗುಣ ರೂಢಿಸಿಕೊಳ್ಳಿ

ದ್ವೇಷ ಮಾಡಿ ಯಾರು ದೊಡ್ಡವರಾಗಿಲ್ಲ, ದ್ವೇಷ ಮಾಡುವ ಬದಲು ಕ್ಷ ಮಾಪಣೆ ಗುಣವನ್ನು ಬೆಳೆಸಿಕೊಳ್ಳಿ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.

Vijaya Karnataka 28 May 2018, 3:39 pm
ನ್ಯಾಮತಿ : ದ್ವೇಷ ಮಾಡಿ ಯಾರು ದೊಡ್ಡವರಾಗಿಲ್ಲ, ದ್ವೇಷ ಮಾಡುವ ಬದಲು ಕ್ಷ ಮಾಪಣೆ ಗುಣವನ್ನು ಬೆಳೆಸಿಕೊಳ್ಳಿ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.
Vijaya Karnataka Web forgive instead of hate
ದ್ವೇಷದ ಬದಲು ಕ್ಷಮಾಗುಣ ರೂಢಿಸಿಕೊಳ್ಳಿ


ತಾಲೂಕಿನ ಒಡೆಯಹತ್ತೂರು ಗ್ರಾಮದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಘಟಕದಿಂದ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ಶ್ರೀಗಳ ಪುರ ಪ್ರವೇಶ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನಿದ್ಯ ವಹಿಸಿ ಮಾತನಾಡಿದರು.

ಸಮಾಜದವರು ಇತರೆ ಸಮಾಜದವರೊಂದಿಗೆ ಸಹಬಾಳ್ವೆ ನಡೆಸುವ ಗುಣ ಬೆಳೆಸಿಕೊಳ್ಳಬೇಕು. ಕ್ಷ ಮಿಸುವುದನ್ನು ಕಲಿಯುವುದರಿಂದ ದ್ಷೇಷ ಬರಲು ಸಾಧ್ಯವಿಲ್ಲ , ಕ್ಷ ಮಿಸಿದ್ದೇನೆ ಎಂಬುದನ್ನು ಮರೆಯಬೇಕು. ಸಮಾಜದಲ್ಲಿ ಒಳ್ಳೆಯ ಕಾರ್ಯ ಮಾಡುವಾಗ ಟೀಕೆ ಟಿಪ್ಪಣಿ ಬಂದರೂ ಒಳ್ಳೆಯ ಕಾರ್ಯಗಳನ್ನು ಬಿಡಬೇಡಿ. ಯಾರು ಸಮಯಕ್ಕೆ ಮಹತ್ವ ಕೊಡುತ್ತಾರೋ ಅವರ ಎಲ್ಲಾ ಕೆಲಸಗಳೂ ಮಹತ್ವದ್ದಾಗಿರುತ್ತವೆ ಎಂದರು.

ರಾಜ್ಯದಲ್ಲಿ 80 ಲಕ್ಷ ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮಾಜವನ್ನು ಒಗ್ಗೂಡಿಸಬೇಕಾಗಿದೆ. ಹಾಗಾಗಿ ಮೇ 31 ರಿಂದ 10 ದಿನಗಳ ಕಾಲ ಹರಿಹರ ಪಂಚಮಸಾಲಿ ಪೀಠದಿಂದ ಕಿತ್ತೂರು ಪಟ್ಟಣದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ, ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಯೋಗ ಮಾಡಿದರೆ ರೋಗ ದೂರ:

ಮನುಷ್ಯ ಆರೋಗ್ಯವಾಗಿರಬೇಕೆಂದರೆ ಯೋಗ ಮಾಡಬೇಕು. ಇದರಿಂದ ಯಾವುದೇ ರೋಗಗಳು ಬರುವುದಿಲ್ಲ. ಸಮಾಜ ಬೆಳೆಯಬೇಕು, ಹಾಗಾಗಿ ಓದಿಸಲಿಕ್ಕಾಗಿ ತಮ್ಮ ತಮ್ಮ ಗ್ರಾಮಗಳ ಯುವಕರು ಸಂಘ ಕಟ್ಟುವ ಮೂಲಕ ಸಮಾಜದ ಒಂದು ಮಗುವನ್ನು ದತ್ತು ಪಡೆದು, ವೈದ್ಯ, ಎಂಜಿನಿಯರ್‌ನಂತ ಉನ್ನತ ಶಿಕ್ಷಣ ಕೊಡಿಸಿ ಮಾದರಿಯಾಗಬೇಕು. ಹರಿಹರ ಪಂಚಮಸಾಲಿ ಪೀಠದಲ್ಲಿ 100 ವಿದ್ಯಾರ್ಥಿಗಳಿಗೆ ಉಚಿತ ವಸತಿ ನೀಡುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ಸಮಾಜದ ಮುಖಂಡ ಜೆ.ಎಸ್‌.ಚನ್ನಬಸಪ್ಪ ಬೆನಕನಹಳ್ಳಿ, ಎಚ್‌.ಎಸ್‌.ಬಸವರಾಜಪ್ಪ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮಾಜದ 80 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ರಾಂಪುರದ ಮಂಜುನಾಥ್‌ಗೌಡ , ನಿವೃತ್ತ ಶಿಕ್ಷ ಕರಾದ ಎಂ.ಚನ್ನಪ್ಪ , ಎಚ್‌.ಜಿ. ಬಸೆಟ್ಟಪ್ಪ , ಪಿ.ಲಿಂಗರಾಜಪ್ಪ , ರೇಣುಕಮಹಾಲಿಂಗಯ್ಯ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾಜದ ಮುಖಂಡರಾದ ಡಾ.ಎಚ್‌.ಪಿ. ರಾಜಕುಮಾರ್‌, ಶುಂಠಿ ಮಂಜಪ್ಪ , ಎನ್‌.ಡಿ. ಪಂಚಾಕ್ಷ ರಪ್ಪ , ಜಿ.ದೊಡ್ಡಪ್ಪ , ಕಲ್ಪನಾ , ಪ್ರಭಾನುಚ್ಚಿನ್‌ , ಎನ್‌.ಡಿ.ಮಂಜಪ್ಪ , ನುಚ್ಚಿನ ವಾಗೀಶ್‌ , ಪೂಜಾರ್‌ ಚಂದ್ರಶೇಖರ್‌, ಗಿರೀಶ್‌ ನಾಡಿಗ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ