ಆ್ಯಪ್ನಗರ

ನೌಕರಿ ಕೊಡಿಸುವುದಾಗಿ ವಂಚನೆ

ವಿಧಾನಸೌಧದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಸರಕಾರಿ ನೌಕರಿ ಕೊಡಿಸುತ್ತೇನೆಂದು ಹೇಳಿ 2.40 ಲಕ್ಷ ರೂ.ತೆಗೆದುಕೊಂಡು ಮೋಸ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Vijaya Karnataka 4 Jul 2019, 3:01 pm
ದಾವಣಗೆರೆ: ವಿಧಾನಸೌಧದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಸರಕಾರಿ ನೌಕರಿ ಕೊಡಿಸುತ್ತೇನೆಂದು ಹೇಳಿ 2.40 ಲಕ್ಷ ರೂ.ತೆಗೆದುಕೊಂಡು ಮೋಸ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web fraud to pay employees
ನೌಕರಿ ಕೊಡಿಸುವುದಾಗಿ ವಂಚನೆ


ಹದಡಿ ಗ್ರಾಮದ ರೈತ ಡಿ.ಎಚ್‌. ಹೇಮಂತ್‌ಕುಮಾರ್‌ ಹಣ ಕಳೆದುಕೊಂಡ ವ್ಯಕ್ತಿ. ಬೆಂಗಳೂರಿಗೆ ಹೇಮಂತ್‌ಕುಮಾರ್‌ ಹೋಗಿದ್ದಾಗ ಮಂಡ್ಯದ ಮಧು ಎಂಬ ವ್ಯಕ್ತಿ ವಿಧಾನಸೌಧದಲ್ಲಿ ಪರಿಚಯವಾಗಿದ್ದ. ನಮ್ಮ ತಂದೆ ರೈಲ್ವೇ ನೌಕರರು ನಾನು ಕೂಡ ರೈಲ್ವೇ ಇಲಾಖೆಯಲ್ಲಿದ್ದೇನೆ. ಹಲವಾರು ಜನರಿಗೆ ನೌಕರಿ ಕೊಡಿಸಿದ್ದೇನೆಂದು ಹೇಳಿ ಹೇಮಂತ್‌ಕುಮಾರ್‌ನ್ನು ನಂಬಿಸಿದ್ದಾನೆ.

ನಂತರ ಹೇಮಂತ್‌ಕುಮಾರ್‌ ನನ್ನ ಹೆಂಡತಿಗೆ ನೌಕರಿ ಕೊಡಿಸಬೇಕೆಂದು ಮಧುಗೆ ಕೇಳಿದಾಗ, ಶಾಲಾ ದಾಖಲಾತಿಯನ್ನು ಮೊಬೈಲ್‌ ಮುಖಾಂತರ ಪಡೆದುಕೊಂಡು ಮೊದಲ ಕಂತಿನ ಹಣ ತೆಗೆದುಕೊಂಡಿದ್ದಾನೆ. ಇದಾದ ಬಳಿಕ ಹೇಮಂತ್‌ಕುಮಾರ್‌ ಆರ್ಡರ್‌ ಕಾಫಿ ಬಗ್ಗೆ ಕೇಳಿದ್ದಕ್ಕೆ ನಿಮಗೆ ಚಾಮರಾಜ ನಗರಕ್ಕೆ ಆಗುತ್ತೆ ದೂರ ಆಗುತ್ತದೆ. ಆದ್ದರಿಂದ ನಿಮಗೆ ದಾವಣಗೆರೆಗೆ ಆರ್ಡರ್‌ ಕೊಡಿಸುತ್ತೇನೆಂದು ಹೇಳಿ ಇನ್ನಷ್ಟು ಹಣ ಪಡೆದುಕೊಂಡಿದ್ದಾನೆ.

ಬಳಿಕ ಹೇಮಂತ್‌ ನನಗೆ ಕೆಲಸ ಬೇಡ ಹಣ ವಾಪಸ್‌ ಕೊಡಿ ಎಂದು ಮಧುಗೆ ಕೇಳಿದ್ದಾರೆ. ಆಗ ಮಧು ಇನ್ನೇನು ಕೆಲಸ ಸಿಗುವ ಹೊತ್ತಿಗೆ ನೀವು ಈ ರೀತಿ ಮಾಡಿದರೆ ಹೇಗೆ ಎಂದು ಹೇಳಿದಾಗ ಹೇಮಂತ್‌ಕುಮಾರ್‌ಗೆ ಅನುಮಾನ ಬಂದು ಜೋರು ಮಾಡಿದ್ದಾರೆ. ಈ ವೇಳೆ ವಂಚಕ ಮಧು ಕಾರವಾರಕ್ಕೆ ಹೋಗಿ ಆರ್ಡರ್‌ ಆಗಿದೆ ಎಂದು ಹೇಳಿ ಪೋನ್‌ ಸ್ವೀಚ್‌ ಆಫ್‌ ಮಾಡಿದ್ದಾನೆ. ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ