ಆ್ಯಪ್ನಗರ

ಟ್ರಾಫಿಕ್‌ ಸಮಸ್ಯೆ ನೀಗಿಸಿ, ಸಿಸಿ ಕ್ಯಾಮೆರಾ ಅಳವಡಿಸಿ

ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್‌ ಇಲಾಖೆಯ ಲೋಪ, ಕುಂದು ಕೊರತೆಗಳು ಕಂಡುಬಂದಲ್ಲಿ ಸಭೆ ಗಮನಕ್ಕೆ ತಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ಹೇಳಿದರು.

Vijaya Karnataka 6 Dec 2018, 5:00 am
ದಾವಣಗೆರೆ :ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್‌ ಇಲಾಖೆಯ ಲೋಪ, ಕುಂದು ಕೊರತೆಗಳು ಕಂಡುಬಂದಲ್ಲಿ ಸಭೆ ಗಮನಕ್ಕೆ ತಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ಹೇಳಿದರು.
Vijaya Karnataka Web get rid of the traffic problem and insert the cc camera
ಟ್ರಾಫಿಕ್‌ ಸಮಸ್ಯೆ ನೀಗಿಸಿ, ಸಿಸಿ ಕ್ಯಾಮೆರಾ ಅಳವಡಿಸಿ


ನಗರದ ರೇಣುಕಾ ಮಂದಿರದಲ್ಲಿ ಪಾಲಿಕೆ ಮೇಯರ್‌ ಶೋಭಾ ಪಲ್ಲಾಗಟ್ಟೆ ಅಧ್ಯಕ್ಷ ತೆಯಲ್ಲಿ ಮಂಗಳವಾರ ನಡೆದ ನಗರ ಉಪವಿಭಾಗದ ನಾಗರಿಕ ಸಮಿತಿ ಸಭೆಯಲ್ಲಿ ಮಾತನಾಡಿದರು.

ನಾಗರಿಕ ಸಮಿತಿ ಸದಸ್ಯ ವೈ.ಮಲ್ಲೇಶ್‌ ಮಾತನಾಡಿ, ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಇದೆ. ಸಿಸಿ ಕ್ಯಾಮೆರಾ ಅಳವಡಿಕೆ ಆಗಬೇಕು. ಟ್ರಾಫಿಕ್‌ ಪೊಲೀಸರು ಕೇವಲ ಹೆಲ್ಮೆಟ್‌ ಕಡೆ ಗಮನ ಹರಿಸದೇ ಸಾರ್ವಜನಿಕರ ಸಮಸ್ಯೆ ಕುರಿತು ಗಮನ ಹರಿಸಬೇಕೆಂದರು.

ಮಾದಕ ವಸ್ತು ಮಾರಾಟ ತಡೆಯಿರಿ:

ಹಿಂದು ಸಂಘಟನೆ ಮುಖಂಡ ಶಂಕರನಾರಾಯಣ ಮಾತನಾಡಿ, ನಗರದಲ್ಲಿ ಯುವಜನತೆ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಕಾಲೇಜುಗಳ ಬಳಿ ಮತ್ತು ಇತರೆ ಗೌಪ್ಯ ಸ್ಥಳಗಳಲ್ಲಿ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದೆ. ಇದನ್ನು ತಪ್ಪಿಸಬೇಕು. ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೆ ಪುಂಡರ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಯಬೇಕು ಎಂದು ಮನವಿ ಮಾಡಿದರು.

ಸೋಮ್ಲಾಪುರದ ಹನುಮಂತಪ್ಪ ಮಾತನಾಡಿ, ಕೆಲವು ಸಮಾಜ ಘಾತುಕರು ನಗರದಲ್ಲಿ ತುಂಬಾ ಸಮಸ್ಯೆಗಳಿಗೆ ಕಾರಣರಾಗಿದ್ದು ಅಂತಹವರನ್ನು ಕಡಿವಾಣ ಹಾಕಬೇಕು. ಕೆಟಿಜೆ ನಗರ ಉಪಠಾಣೆಯನ್ನು ಹಿಂದಿನ ಸ್ಥಳದಲ್ಲೇ ಶೀಘ್ರವಾಗಿ ಆರಂಭಿಸಬೇಕು ಎಂದರು.

200 ಕಡೆ ಕ್ಯಾಮೆರಾ ಅಳವಡಿಕೆ:
ಕುಂದು ಕೊರತೆ ಆಲಿಸಿದ ನಂತರ ಎಸ್ಪಿ ಆರ್‌.ಚೇತನ್‌ ಮಾತನಾಡಿ, ನಗರದಲ್ಲಿ ಇಲಾಖೆಯಿಂದ 75 ರಿಂದ 80 ಸೂಕ್ಷ ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿಯೂ ಸುಮಾರು 200 ಕ್ಯಾಮೆರಾ ಅಳವಡಿಸಲಾಗುವುದು. ಇತ್ತೀಚೆಗೆ ಸರಕಾರ 100 ಜನ ಇರುವೆಡೆ ಹಾಗೂ 500 ಜನ ಸೇರುವ ಯಾವುದೇ ವ್ಯವಹಾರ ಇನ್ನಿತರೆ ಪ್ರದೇಶದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಆದೇಶಿಸಿದ್ದು, ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಪಾಲಿಕೆ ಉಪಮೇಯರ್‌ ಚಮನ್‌ಸಾಬ್‌, ಎಎಸ್ಪಿ ಉದೇಶ್‌, ನಗರ ಉಪ ವಿಭಾಗದ ಡಿವೈಎಸ್‌ಪಿ ನಾಗರಾಜ್‌, ವೃತ್ತ ನಿರೀಕ್ಷಕ ಉಮೇಶ್‌, ಕೆ.ಅಲ್ಲಾವುಲ್ಲಾ, ಗೌಡ್ರ ಚನ್ನಬಸಪ್ಪ, ಪಾಲಿಕೆ ಸದಸ್ಯ ಹಾಲೇಶಪ್ಪ, ಎಂ.ಶಿವಕುಮಾರ್‌, ಅಮಾನುಲ್ಲಾ ಖಾನ್‌, ಮಲ್ಲಿಕಾರ್ಜುನ ಇಂಗೇಶ್ವರ್‌, ಲಲಿತಮ್ಮ, ಪಿ.ಕೆ. ಲಿಂಗರಾಜ್‌, ಉಮೇಶ್‌ ಆವರಗೆರೆ, ಸತೀಶ್‌ ಮತ್ತಿತರರು ಇದ್ದರು.

ನಗರದ 22 ಕಡೆ ಸಿಗ್ನಲ್‌
ಹದಡಿ ರಸ್ತೆ, ಗಾಂಧಿ ಸರ್ಕಲ್‌ ಇತರೆಡೆ ಸಿಗ್ನಲ್‌ ಅಳವಡಿಸುವ ಕುರಿತು ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ಸುಮಾರು 22 ಕಡೆಗಳಲ್ಲಿ ವೈಜ್ಞಾನಿಕವಾಗಿ ಸಿಗ್ನಲ್‌ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಎಸ್ಪಿ ಚೇತನ್‌ ತಿಳಿಸಿದರು.

ಪೊಲೀಸ್‌ ಗಸ್ತು ಹೆಚ್ಚಿಸಿ
ದಾವಣಗೆರೆ ಹಳೇ ಭಾಗದಲ್ಲಿ ಶಾಲಾ ಕಾಲೇಜು ಅವಧಿಯಲ್ಲಿ ಮಕ್ಕಳ ಓಡಾಟ ಕಷ್ಟವಾಗುತ್ತಿದೆ. ಈ ಭಾಗದಲ್ಲಿ ಪೊಲೀಸ್‌ ಗಸ್ತು ಹೆಚ್ಚಿಸಬೇಕು ಎಂದು ಮುಸ್ಲಿಂ ಸಮಾಜದ ಮುಖಂಡ ಸೈಯದ್‌ ಸೈಫುಲ್ಲಾ ತಿಳಿಸಿದರು.

ಜಿಎಂಐಟಿ ಕಾಲೇಜಿನಿಂದ ಬಾಡಾ ಕ್ರಾಸ್‌ವರೆಗೆ ಬೀದಿ ದೀಪಗಳಿಲ್ಲದೇ, ಬೈಕ್‌ ಇತರೆ ಕಳ್ಳತನ ಹೆಚ್ಚುತ್ತಿದೆ. ಗಾಂಧಿ ಸರ್ಕಲ್‌ ಬಳಿ ಸಿಗ್ನಲ್‌ ಆಗಬೇಕು.
- ಆವರಗೆರೆ ಸ್ವಾಮಿ, ನಿವಾಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ