ಆ್ಯಪ್ನಗರ

ನಕಲಿ ಬಂಗಾರ ನೀಡಿ: ವ್ಯಕ್ತಿಗೆ ಪಂಗನಾಮ

ಖಾಲಿ ಸೈಟ್‌ನಲ್ಲಿ ಬಂಗಾರ ಸಿಕ್ಕಿದೆ ಎಂದು ನಂಬಿಸಿ ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ವ್ಯಕ್ತಿಯೊಬ್ಬರಿಂದ 1,22, 150 ರೂ. ಪಡೆದು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Vijaya Karnataka 28 May 2019, 9:21 pm
ದಾವಣಗೆರೆ : ಖಾಲಿ ಸೈಟ್‌ನಲ್ಲಿ ಬಂಗಾರ ಸಿಕ್ಕಿದೆ ಎಂದು ನಂಬಿಸಿ ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ವ್ಯಕ್ತಿಯೊಬ್ಬರಿಂದ 1,22, 150 ರೂ. ಪಡೆದು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web give fake gold pagan name to person
ನಕಲಿ ಬಂಗಾರ ನೀಡಿ: ವ್ಯಕ್ತಿಗೆ ಪಂಗನಾಮ


ಬೆಂಗಳೂರಿನ ಕೋರಮಂಗಲದ ಕಾರು ಚಾಲಕ ಪಿ.ಕುಮಾರ್‌ ಹಣ ಕಳೆದುಕೊಂಡ ವ್ಯಕ್ತಿ. ರಾಯಚೂರಿನ ರಾಜು ಹಾಗೂ ಸುಮಾರು 38 ವರ್ಷ ವಯಸ್ಸಿನ ಇಬ್ಬರು ವ್ಯಕ್ತಿಗಳು ಮೋಸ ಮಾಡಿದವರು.

ಘಟನೆ:

ಸುಮಾರು 8 ವರ್ಷಗಳ ಹಿಂದೆ ತಮಗೆ ಸೇರಿದ ಡ್ರೈವಿಂಗ್‌ ಸೂಲ್‌ನಲ್ಲಿ ಲೈಸೆನ್ಸ್‌ ಪಡೆದುಕೊಂಡಿರುವೆ ಎಂದು ರಾಯಚೂರಿನ ರಾಜು ಎಂಬುವರು ಪರಿಚಯ ಮಾಡಿಕೊಂಡಿದ್ದಾರೆ. ನಂತರ ರಾಯಚೂರಿನಲ್ಲಿ ತನಗೆ ಸೇರಿದ ಖಾಲಿ ಸೈಟ್‌ನಲ್ಲಿ ಮನೆ ಕಟ್ಟುವಾಗ ಕುಡಿಕೆಯಲ್ಲಿ ಸಣ್ಣ ಬಿಲ್ಲೆ ಗಾತ್ರದ ಚಿನ್ನದ ನಾಣ್ಯಗಳು ಸಿಕ್ಕಿದೆ. ತಮಗೆ ಕಡಿಮೆ ರೇಟ್‌ಗೆ ಕೊಡುತ್ತೇನೆ ಎಂದು ನಂಬಿಸಿದ್ದಾನೆ. ನಂತರ ಹೊಸಪೇಟೆಗೆ ಕರೆಸಿ ಒಂದು ಸಣ್ಣ ಗಾತ್ರದ ಅಸಲಿ ಬಂಗಾರದ ನಾಣ್ಯ ನೀಡಿದ್ದಾರೆ. ಅದನ್ನು ಬಂಗಾರದ ಅಂಗಡಿವೊಂದರಲ್ಲಿ ಚೆಕ್‌ ಮಾಡಿಸಿದಾಗ ಅದು ಅಸಲಿ ಎಂಬುದು ಗೊತ್ತಾಗಿದೆ.

ಬಳಿಕ ರಾಯಚೂರಿನ ರಾಜು, ಕುಮಾರ್‌ಗೆ ಕರೆ ಮಾಡಿ ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಬರಲು ತಿಳಿಸಿದ್ದಾನೆ. ನಗರದ ಪಿಬಿ ರಸ್ತೆಯ ಆನಂದ್‌ ರೆಸಿಡೆನ್ಸಿ ಹಿಂಭಾಗದ ರಸ್ತೆಯಲ್ಲಿ ಇಬ್ಬರು ಕರೆದುಕೊಂಡು ಹೋಗಿ ಕುಮಾರ್‌ನಿಂದ ಹಣ ಪಡೆದು ಸುಮಾರು 100 ಗ್ರಾಂ ತೂಕದಷ್ಟು ಇರುವ ಅಸಲಿ ಬಂಗಾರದಂತಿರುವ ಸಣ್ಣ ಗಾತ್ರದ ನಾಣ್ಯಗಳನ್ನು ಕರ್ಚಿಫ್‌ನಲ್ಲಿ ಕೊಟ್ಟಿದ್ದಾರೆ. ಕುಮಾರ್‌ ಈ ಬಂಗಾರವನ್ನು ಬೆಂಗಳೂರಿನಲ್ಲಿ ಚೆಕ್‌ ಮಾಡಿಸಿದಾಗ ಅದು ನಕಲಿ ಬಂಗಾರ ಎಂದು ಗೊತ್ತಾಗಿದೆ. ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ