ಆ್ಯಪ್ನಗರ

ರೈಲ್ವೆ ಹುದ್ದೆ ನೇಮಕಾತಿಯಲ್ಲಿಕನ್ನಡಿಗರಿಗೆ ಮೀಸಲು ನೀಡಿ

ರೈಲ್ವೆ ಇಲಾಖೆಯ ಡಿ ದರ್ಜೆ ಹುದ್ದೆಗಳ ನೇಮಕಾತಿಯಲ್ಲಿಕನ್ನಡಿಗರಿಗೆ ಮೀಸಲು ನೀಡಬೇಕು, ಕೇಂದ್ರಿಕೃತ ಪರೀಕ್ಷಾ ವ್ಯವಸ್ಥೆ ರದ್ದು ಪಡಿಸಿ ರೈಲ್ವೆ ನೇಮಕಾತಿ ಕೋಶದ ಮೂಲಕ ನೇಮಕ ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿ ಪರೀಕ್ಷಾರ್ಥಿಗಳು, ನಾನಾ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿಶುಕ್ರವಾರ ಪ್ರತಿಭಟನೆ ನಡೆಸಿದರು.

Vijaya Karnataka 31 Aug 2019, 5:00 am
ದಾವಣಗೆರೆ: ರೈಲ್ವೆ ಇಲಾಖೆಯ ಡಿ ದರ್ಜೆ ಹುದ್ದೆಗಳ ನೇಮಕಾತಿಯಲ್ಲಿಕನ್ನಡಿಗರಿಗೆ ಮೀಸಲು ನೀಡಬೇಕು, ಕೇಂದ್ರಿಕೃತ ಪರೀಕ್ಷಾ ವ್ಯವಸ್ಥೆ ರದ್ದು ಪಡಿಸಿ ರೈಲ್ವೆ ನೇಮಕಾತಿ ಕೋಶದ ಮೂಲಕ ನೇಮಕ ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿ ಪರೀಕ್ಷಾರ್ಥಿಗಳು, ನಾನಾ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿಶುಕ್ರವಾರ ಪ್ರತಿಭಟನೆ ನಡೆಸಿದರು.
Vijaya Karnataka Web give reservation to railway post recruiters
ರೈಲ್ವೆ ಹುದ್ದೆ ನೇಮಕಾತಿಯಲ್ಲಿಕನ್ನಡಿಗರಿಗೆ ಮೀಸಲು ನೀಡಿ


ನಗರದ ರೈಲ್ವೆ ಸ್ಟೇಷನ್‌ ಬಳಿ ರೈಲ್ವೆ ನೇಮಕಾತಿ ಹೋರಾಟ ಸಮಿತಿ ನೇತೃತ್ವದಲ್ಲಿಪರೀಕ್ಷಾರ್ಥಿಗಳು, ಕನ್ನಡಪರ, ರೈತಪರ ಸೇರಿ ಅನೇಕ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರಿಕೃತ ಪರೀಕ್ಷಾ ವ್ಯವಸ್ಥೆಯಿಂದ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ. ಈ ವ್ಯವಸ್ಥೆಯನ್ನು ರದ್ದು ಮಾಡಿ ಈ ಹಿಂದೆ ನಡೆಸುತ್ತಿದ್ದ ಮಾದರಿಯಲ್ಲಿಯೇ ಪರೀಕ್ಷೆ ನಡೆಸಬೇಕು. ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮುಂತಾದ ರಾಜ್ಯಗಳಲ್ಲಿಈ ನೇಮಕಾತಿಗಳಲ್ಲಿಸ್ಥಳೀಯರಿಗೆ ಶೇ. 80 ರಷ್ಟು ಮೀಸಲು ನೀಡಲಾಗಿದೆ. ಕರ್ನಾಟಕ ರಾಜ್ಯದಲ್ಲೂಸಹ ಕನ್ನಡಿಗರಿಗೆ ಶೇ. 80 ರಷ್ಟು ಮೀಸಲು ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ನೈರುತ್ವ ರೈಲ್ವೆಯ ಕೇಂದ್ರ ಹುಬ್ಬಳ್ಳಿಯ ಕೇಂದ್ರ ಕಚೇರಿಯಲ್ಲಿರೈಲ್ವೆ ನೇಮಕಾತಿ ಕೋಶ ಆರಂಭಿಸಲಾಗಿತ್ತು. ಇದು ಡಿ ದರ್ಜೆ ಹುದ್ದೆಗಳಿಗೆ ಆಯ್ಕೆ ಹೊಣೆ ನಿಭಾಯಿಸುತ್ತಿತ್ತು. 2012-13 ರಲ್ಲಿಆರ್‌ಆರ್‌ಸಿ ಮೂಲಕ ಪರೀಕ್ಷೆ ನಡೆದಾಗ ಶೇ. 80 ರಷ್ಟು ಕನ್ನಡಿಗರು ಆಯ್ಕೆಯಾಗಿದ್ದರು. 2017-18 ರಲ್ಲಿಕೇಂದ್ರಿಕೃತ ವ್ಯವಸ್ಥೆ ಬಂದಿದ್ದರಿಂದ ಡಿ ವೃಂದದ 2200 ಹುದ್ದೆಗಳಿಗೆ ಪರೀಕ್ಷೆ ನಡೆದು ಕೇವಲ 22 ಅಂದರೆ ಕೇವಲ ಶೇ. 1 ರಷ್ಟು ಮಂದಿ ಮಾತ್ರ ಆಯ್ಕೆಯಾದರೆ, ಉಳಿದ ಹುದ್ದೆಗಳು ಹೊರ ರಾಜ್ಯದವರ ಪಾಲಾಗಿದ್ದವು. ಅದರಲ್ಲೂಬಿಹಾರ, ಉತ್ತರ ಪ್ರದೇಶದವರು ಆಯ್ಕೆಯಾಗಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರಿಕೃತ ಪರೀಕ್ಷಾ ವ್ಯವಸ್ಥೆಯಿಂದ ಈ ಪ್ರಶ್ನೆ ಪತ್ರಿಕೆಗಳು ಉತ್ತರ ಭಾರತದಲ್ಲಿತಯಾರಾಗುತ್ತದೆ. ಅಲ್ಲಿನ ಪಠ್ಯಕ್ಕೆ ಅನುಗುಣವಾಗಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದರಿಂದ ದಕ್ಷಿಣ ಭಾರತದ ರಾಜ್ಯಗಳ ಅಭ್ಯರ್ಥಿಗಳಿಗೆ ಅನ್ಯಾಯ ಆಗುತ್ತಿದೆ. ಈ ಪರೀಕ್ಷಾ ವ್ಯವಸ್ಥೆ ಭಾರತ ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರೀಕ್ಷಾರ್ಥಿಗಳಾದ ಮಂಜುನಾಥ್‌ ದಾನೇಗೌಡ, ಶಿವರಾಜ್‌, ಮಾರುತಿ, ಪುರುಷೋತ್ತಮ, ನಿಂಗರಾಜ, ರವೀಂದ್ರ, ನಾಗರಾಜ, ರಂಜಿತ್‌ ಇತರರು ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ