ದಾವಣಗೆರೆ : ನಗರದ ದಾವಣಗೆರೆ ರೈಲ್ವೆ ನಿಲ್ದಾಣವನ್ನು ಮುಂದಿನ 50 ವರ್ಷಗಳ ಭವಿಷ್ಯದ ದೃಷ್ಟಿಯಿಟ್ಟುಕೊಂಡು 101 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ರೈತ ಮುಖಂಡ, ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಕುಂದು ಕೊರತೆ ನಿವಾರಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂಎಸ್ಕೆ ಶಾಸ್ತ್ರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಟ್ವಿಟ್ ಮಾಡಿ ಒತ್ತಾಯಿಸಿದ್ದಾರೆ.
ಬೇಡಿಕೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ, ಸಂಸದೀಯ ಖಾತೆ ಸಚಿವ ಪ್ರಹ್ಲಾದ ಜೋಷಿ, ರೈಲ್ವೆ ಸಚಿವ ಫಿಯುಷ್ ಗೋಯಲ್, ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಮನವಿ ಪತ್ರ ಟ್ವಿಟ್ ಮಾಡಿದ್ದಾರೆ.
ನೈರುತ್ಯ ರೈಲ್ವೆ ವಲಯದ ದಾವಣಗೆರೆ ರೈಲ್ವೆ ನಿಲ್ದಾಣದಿಂದ ಕೇಂದ್ರ ಸರಕಾರಕ್ಕೆ ಕೋಟ್ಯಂತರ ಆದಾಯ ಬರುತ್ತಿದೆ. ಟಿಕೆಟ್ನಿಂದ 560 ಕೋಟಿ ರೂ., ಗೂಡ್ಸ್ ರೈಲಿನಿಂದ 4,440 ಕೋಟಿ ರೂ. ನಿವ್ವಳ ಆದಾಯವಿದೆ. ಇಷ್ಟು ಪ್ರಮಾಣದ ಆದಾಯವಿದ್ದರೂ ಇಲ್ಲಿನ ರೈಲ್ವೆ ನಿಲ್ದಾಣವನ್ನು ಕೇವಲ 11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ. ಆದರೆ ಇಲ್ಲಿಗೆ ಸುಸಜ್ಜಿತ, ಭವ್ಯ ಕಟ್ಟಡದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಹರಿಹರ- ಯಶವಂತಪುರ ಇಂಟರ್ಸಿಟಿ ರೈಲನ್ನು ಪ್ರತಿದಿನ ಓಡಿಸಬೇಕು, ಯಶವಂತಪುರ-ನಿಜಾಮುದ್ದೀನ್-ನವದೆಹಲಿ-ಚಂಡಿಘಡ ರೈಲನ್ನು ಪ್ರತಿದಿನ ಓಡಿಸಿ ಕಟ್ರಾವರೆಗೂ ಮುಂದುವರಿಸಿದರೆ ಈ ಭಾಗದ ಜನ ವೈಷ್ಣೋದೇವಿ ದರ್ಶನ ಪಡೆಯಲು ಅನುಕೂಲ ಆಗಲಿದೆ. ಹರಿಹರದಿಂದ ಕಾಶಿ ಮತ್ತು ತಿರುಪತಿಗೆ ಪ್ರತಿದಿನ ರೈಲು ಓಡಿಸಬೇಕು, ಹುಬ್ಬಳ್ಳಿಯಿಂದ ದಾವಣಗೆರೆ-ಬೆಂಗಳೂರಿಗೆ 21 ಬೋಗಿಗಳ ಪ್ಯಾಸೆಂಜರ್ ರೈಲು, ಯಶವಂತಪುರ-ದಾವಣಗೆರೆ- ಮೀರಜ್ವರೆಗೆ ಹಾಗೂ ಮೈಸೂರು ಚೆನ್ನೈ-ತಿರುವಾಂಕೂರುವರೆಗೆ ಎಲೆಕ್ಟ್ರಿಕ್ ರೈಲು ಓಡಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಬೇಡಿಕೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ, ಸಂಸದೀಯ ಖಾತೆ ಸಚಿವ ಪ್ರಹ್ಲಾದ ಜೋಷಿ, ರೈಲ್ವೆ ಸಚಿವ ಫಿಯುಷ್ ಗೋಯಲ್, ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಮನವಿ ಪತ್ರ ಟ್ವಿಟ್ ಮಾಡಿದ್ದಾರೆ.
ನೈರುತ್ಯ ರೈಲ್ವೆ ವಲಯದ ದಾವಣಗೆರೆ ರೈಲ್ವೆ ನಿಲ್ದಾಣದಿಂದ ಕೇಂದ್ರ ಸರಕಾರಕ್ಕೆ ಕೋಟ್ಯಂತರ ಆದಾಯ ಬರುತ್ತಿದೆ. ಟಿಕೆಟ್ನಿಂದ 560 ಕೋಟಿ ರೂ., ಗೂಡ್ಸ್ ರೈಲಿನಿಂದ 4,440 ಕೋಟಿ ರೂ. ನಿವ್ವಳ ಆದಾಯವಿದೆ. ಇಷ್ಟು ಪ್ರಮಾಣದ ಆದಾಯವಿದ್ದರೂ ಇಲ್ಲಿನ ರೈಲ್ವೆ ನಿಲ್ದಾಣವನ್ನು ಕೇವಲ 11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ. ಆದರೆ ಇಲ್ಲಿಗೆ ಸುಸಜ್ಜಿತ, ಭವ್ಯ ಕಟ್ಟಡದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಹರಿಹರ- ಯಶವಂತಪುರ ಇಂಟರ್ಸಿಟಿ ರೈಲನ್ನು ಪ್ರತಿದಿನ ಓಡಿಸಬೇಕು, ಯಶವಂತಪುರ-ನಿಜಾಮುದ್ದೀನ್-ನವದೆಹಲಿ-ಚಂಡಿಘಡ ರೈಲನ್ನು ಪ್ರತಿದಿನ ಓಡಿಸಿ ಕಟ್ರಾವರೆಗೂ ಮುಂದುವರಿಸಿದರೆ ಈ ಭಾಗದ ಜನ ವೈಷ್ಣೋದೇವಿ ದರ್ಶನ ಪಡೆಯಲು ಅನುಕೂಲ ಆಗಲಿದೆ. ಹರಿಹರದಿಂದ ಕಾಶಿ ಮತ್ತು ತಿರುಪತಿಗೆ ಪ್ರತಿದಿನ ರೈಲು ಓಡಿಸಬೇಕು, ಹುಬ್ಬಳ್ಳಿಯಿಂದ ದಾವಣಗೆರೆ-ಬೆಂಗಳೂರಿಗೆ 21 ಬೋಗಿಗಳ ಪ್ಯಾಸೆಂಜರ್ ರೈಲು, ಯಶವಂತಪುರ-ದಾವಣಗೆರೆ- ಮೀರಜ್ವರೆಗೆ ಹಾಗೂ ಮೈಸೂರು ಚೆನ್ನೈ-ತಿರುವಾಂಕೂರುವರೆಗೆ ಎಲೆಕ್ಟ್ರಿಕ್ ರೈಲು ಓಡಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.